ಶಿವಮೊಗ್ಗದಲ್ಲಿ ದಸರಾಗೆ ಯಾವೆಲ್ಲಾ ಆನೆಗಳು ಭಾಗವಹಿಸಲಿವೆ

prathapa thirthahalli
Prathapa thirthahalli - content producer

Dasara shivamogga : ಶಿವಮೊಗ್ಗದ ದಸರಾದ ಪ್ರಯುಕ್ತ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯ ಹಿನ್ನಲೆಯಲ್ಲಿ  ಇಂದು ಶಾಸಕರಾದ ಎಸ್​ ಎನ್​ ಚನ್ನಬಸಪ್ಪ ಅಧಿಕಾರಿಗಳೊಂದಿಗೆ ತೆರಳಿ ಅಂಬಾರಿ ಹೊರಲು ಬರುವ ಆನೆಗಳಿಗೆ ಪೂಜೆ ಸಲ್ಲಿಸಿ ಅರಣ್ಯ ಇಲಾಖೆಗೆ ಅಧಿಕೃತ ಆಹ್ವಾನ ನೀಡಿದ್ದಾರೆ.

ಈ ಬಾರಿ ದಸರಾ ಮೆರವಣಿಗೆಯಲ್ಲಿ  ಸಕ್ರೆಬೈಲ್​ ಅನೆ ಬಿಡಾರದ ಸಾಗರ  ಬಾಲಣ್ಣ ಮತ್ತು ಬಹದ್ದೂರ್ ಎಂಬ ಆನೆಗಳು ಭಾಗವಹಿಸಲಿವೆ

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ಸೂಡಾ ಮಾಜಿ ಅಧ್ಯಕ್ಷರಾದ ನಾಗರಾಜ್ ಮತ್ತು ಜ್ಞಾನೇಶ್ವರ್, ಪಾಲಿಕೆಯ ಮಾಜಿ ಮೇಯರ್ ಸುವರ್ಣಾಶಂಕರ್, ಉಪ ಮೇಯರ್ ಶಂಕರನ್ನಿ, ಸದಸ್ಯರಾದ ಇ. ವಿಶ್ವಾಸ್, ಪ್ರಭು, ಶ್ರೀಶಾಂತ್, ಹಾಗೂ ಉಪವಲಯ ಅರಣ್ಯಾಧಿಕಾರಿಗಳು, ಪಾಲಿಕೆಯ ನೌಕರರ ಸಂಘದ ಅಧ್ಯಕ್ಷ ಗೋವಿಂದಪ್ಪ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

Dasara shivamogga

Malenadu Today

Dasara shivamogga

Share This Article