ಸ್ವಾತಂತ್ರ್ಯ ದಿನಾಚರಣೆ ಚಂದಾ ವಿಚಾರ: ಆಟೋ ಚಾಲಕನ ಮೇಲೆ ಹಲ್ಲೆ, ದೂರು ದಾಖಲು

prathapa thirthahalli
Prathapa thirthahalli - content producer

Attack on auto driver : ಶಿವಮೊಗ್ಗ: ಸ್ವಾತಂತ್ರ್ಯ ದಿನಾಚರಣೆ ಆಚರಣೆಗಾಗಿ ಚಂದಾ ನೀಡಲಿಲ್ಲ ಎಂಬ ಕಾರಣಕ್ಕೆ ಕೆಲವು ಯುವಕರು ಆಟೋ ಚಾಲಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆಂದು ಹೊಸ ಆಟೋ ಚಾಲಕರಿಂದ 2 ಸಾವಿರ ರೂ. ಹಾಗೂ ಹಳೆಯ ಆಟೋ ಚಾಲಕರಿಂದ 500 ರೂ. ವಸೂಲಿ ಮಾಡುತ್ತಿದ್ದ ಯುವಕರ ಗುಂಪು, ದೂರುದಾರನ ಬಳಿಯೂ 500 ರೂ. ನೀಡುವಂತೆ ಕೇಳಿದ್ದಾರೆ.

- Advertisement -

ಆದರೆ, ಚಾಲಕ ಹಣ ನೀಡಲು ನಿರಾಕರಿಸಿದಾಗ, ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯಿಂದ ಭಯಗೊಂಡ ಚಾಲಕ ಕೊನೆಗೆ ಹಣ ನೀಡಿ, ನಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Attack on auto driver

 

 

Share This Article
1 Comment

Leave a Reply

Your email address will not be published. Required fields are marked *