SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 12, 2024 shimoga politics
ಮಂಡ್ಯದ ನಾಗಮಂಗಲದಲ್ಲಿ ನಡೆದಿರುವ ಕೋಮುಗಲಭೆ ಸಂಬಂಧ ಶಿವಮೊಗ್ಗದಲ್ಲಿ ಸಂಸದ ಬಿವೈ ರಾಘವೇಂದ್ರ ಹಾಗೂ ಶಿವಮೊಗ್ಗ ನಗರ ಶಾಸಕ ಎಸ್ಎನ್ ಚನ್ನಬಸಪ್ಪ ಮಾತನಾಡಿದ್ದಾರೆ.,
ಬಿಜೆಪಿ ಕಚೇರಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಾಗಮಂಗಲ ಗಲಾಟೆ ಪ್ರಕರಣ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಈ ಕುರಿತು ಇಡೀ ಹಿಂದೂ ಸಮಾಜದ ಕ್ಷಮೆಯನ್ನು ರಾಜ್ಯಸರ್ಕಾರ ಕೇಳಬೇಕು ಎಂದು ಆಗ್ರಹಿಸಿದ್ರು.

ಹಿಂದೂ ಸಮಾಜದ ಮೇಲೆ ಸರ್ಕಾರವೇ ಗದಪ್ರಹಾರ ಮಾಡ್ತಿದೆ ಎಂದ ಅವರು ಸರ್ಕಾರ ನಡೆದುಕೊಳ್ಳುವ ರೀತಿ ಸರಿ ಇಲ್ಲ ಹಿಂದೂ ಸಮಾಜ ಹೇಳ್ತಿದೆ. ಗಲಾಟೆ ಮಾಡುವವರಿಗೆ ಶಕ್ತಿ, ಗುಮ್ಮಕ್ಕು ನೀಡುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಆರೋಪಿಸಿದರು.
ನಾಗಮಂಗಲ ಗಲಾಟೆ ನೋಡಿದ್ರೆ ಭಯ ಆಗುತ್ತದೆ, ಆದರೆ ಹಿಂದೂಗಳು ಭಯಪಡುವುದಿಲ್ಲ , ನಾಗಮಂಗಲ ಮಸೀದಿಯಿಂದ ತಲವಾರ ಬರುತ್ತದೆ, ಕಲ್ಲು ಬರುತ್ತದೆ, ಬಳಸಿರುವ ತಲವಾರ್ಗಳನ್ನ ವಶಪಡಿಸಿಕೊಂಡು ಪೊಲೀಸರು ಹೋಗುತ್ತಿರುವ ದೃಶ್ಯ ಕಾಣುತ್ತಿದೆ. ಈ ರೀತಿಯ ಭಯ ವಾತಾವರಣ ಸೃಷ್ಟಿ ಮಾಡಿ, ಹಿಂದೂ ಸಮಾಜವನ್ನ ಕಗ್ಗೊಲೆ ಮಾಡಬಿಡ್ತಿವಿ ಅಂತಾ ಹೆದರಿಸುತ್ತಿದ್ದಾರೆ. ಆದರೆ ಹೆದರುವುದಿಲ್ಲ ಎಂದ ಚನ್ನಬಸಪ್ಪರವರು, ಆ ರೀತಿಯಲ್ಲಿ ಮಾಡಬಾರದು ಎಂದು ಯೋಚಿಸುವರು ಹಿಂದೂ ಸಮಾಜದವರು ಎಂದಿದ್ದಾರೆ.
ಹಿಂದೂ ದೇವತೆಗಳ ಕೈಯಲ್ಲಿ ಇರೋದು ಆಯುಧಗಳು, ಅದು ದುಷ್ಟರ ಸಂಹಾರಕ್ಕೆ ಅಂತಾನೇ ಇರುವುದು. ಹಿಂದೂ ಸಮಾಜದ ಸಂಯಮ ಅರ್ಥ ಮಾಡ್ಕೋಬೇಕು, ಮತ್ತೊಮ್ಮೆ ಈ ರೀತಿ ಘಟನೆ ಮರುಕಳಿಸಿದ್ರೆ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಸಾಧ್ಯ ಇಲ್ಲದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗುತ್ತದೆ ಎಂದು ಎಚ್ಚರಿಸಿದರು.
ಸಂಸದ ಬಿ ವೈ ರಾಘವೇಂದ್ರ
ಇನ್ನೂ ಇದೇ ವೇಳೆ ಮಾತನಾಡಿದ ಸಂಸದ ಬಿವೈ ರಾಘವೇಂದ್ರ ಹಿಂದೂಗಳು ಸ್ವತಂತ್ರವಾಗಿ ಹಬ್ಬವನ್ನ ಆಚರಿಸೋಕೆ ನೂರಾರು ಕಂಡಿಷನ್ ಹಾಕುತ್ತಿದ್ದಾರೆ. ಶಿಕಾರಿಪುರದಲ್ಲಿ ಯಾವುದೇ ಒಂದು ಘಟನೆ ನಡೆದಿದ್ದಕ್ಕೆ ಒಂದೇ ದಿನದಲ್ಲಿ ಎಲ್ಲಾ ಗಣಪತಿ ವಿಸರ್ಜನೆ ಮಾಡಿದ್ರು. ನಾನು ಆಗ ಜಿಲ್ಲಾಧಿಕಾರಿ, ಎಸ್ಪಿ ಅವರಿಗೆ ಕೇಳಿದ್ದೆ, ಎಲ್ಲಿದೆ ಕಾನೂನು ಅಂತಾ ಪ್ರಶ್ನಿಸಿದ್ದೆ ಎಂದರು.
ನಾಗಮಮಂಗಲ ಗಲಾಟೆ -nagamangala ganapati
ನಾಗಮಂಗಲ ಮುಖ್ಯ ರಸ್ತೆಯಲ್ಲಿ ಗಣಪತಿ ಮೇಲೆ ಕಲ್ಲು ತೂರಾಟ ನಡೆದಿದೆ, ಕಾಂಗ್ರೆಸ್ ಸರ್ಕಾರದ ಬಂದಿದೆ ಅಂತಾ ನಾನು ಏನು ಮಾಡಿದ್ರು ನಡೆಯುತ್ತದೆ ಅಂತಾ ಈ ರೀತಿಯ ಪುಂಡಾಟ ಮಾಡ್ತಾ ಇದ್ದಾರೆ, ದರ್ಪದಿಂದ ನಡೆದುಕೊಳ್ಳುವ ಕೆಲಸ ಮಾಡ್ತಾ ಇದ್ದಾರೆ, ಹಿಂದೂ ಸಂಘಟನೆ ಇದನ್ನ ತೀವ್ರವಾಗಿ ಖಂಡಿಸುತ್ತದೆ, ಇಂತಹ ಘಟನೆ ಮತ್ತೆ ನಡೆದ್ರೆ ಹಿಂದೂಗಳು ಬೀದಿಗೆ ಇಳಿಯಬೇಕಾಗುತ್ತದೆ ಎಂದರು
ಕೂಮು ಗಲಭೆ ಆಗದ ರೀತಿಯಲ್ಲಿ ಸರ್ಕಾರ ಎಚ್ಚರಿಕೆ ವಹಿಸಬೇಕು , ಇದು ಕಾಂಗ್ರೆಸ್ ಸರ್ಕಾರ ಜವಾಬ್ದಾರಿ, ಇದೇ ರೀತಿ ರಾಜಕಾರಣ ಮಾಡಿಕೊಂಡು ಬಂದಿದ್ದು ಆಯ್ತು, ಇನಾದ್ರು ಕೂಡ ಎರಡು ಧರ್ಮ ನಡುವೆ ಕಿಡಿಕಾರದೇ ಗೌರವಿತವಾಗಿ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದರು.
ಗೃಹ ಸಚಿವ ಜಿ.ಪರಮೇಶ್ವರ್
ಇದೊಂದು ಆಕಸ್ಮಿಕ ಘಟನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಂಸದರು
ಇದು ಸಣ್ಣ ಕಿಡಿನೇ ನಾಳೆ ದೊಡ್ಡದಾಗುತ್ತದೆ, ದೊಡ್ಡ ಕಿಡಿ ಆಗಬಹುದು ಎಚ್ಚರಿಕೆ ವಹಿಸಬೇಕು, ಕೂಮು ಸೌಹಾರ್ದದಿಂದ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ