ತನ್ನ ನೆರಳಿಗೆ ಹೆದರಿ ಬುಸುಗುಟ್ಟಿದ ನಾಗರಾಜ/ ಶರಾವತಿ ಡೆಂಟಲ್ ಕಾಲೇಜಿನಲ್ಲಿ ಸರ್ಪದರ್ಶನ

ಏನೋ ಶಬ್ದವಾಗುತ್ತಿದೆ ಎಂದು ನೋಡಿದ ಸಿಬ್ಬಂದಿ, ಟಾರ್ಚ್​ ಲೈಟ್ ಬಿಟ್ಟು ಹುಡುಕಿದಾಗ ಹಾವೊಂದು ಹರಿದಾಡ್ತಿರುವುದು ಕಂಡಿದೆ. ಭಯಬಿದ್ದವರೇ ಸ್ನೇಕ್​ ಕಿರಣ್​ಗೆ ಫೋನ್ ಹಾಯಿಸಿದ್ಧಾರೆ.

ಶಿವಮೊಗ್ಗದ ಹೊರವಲಯದಲ್ಲಿರುವ ಶರಾವತಿ ಡೆಂಟಲ್​ ಕಾಲೇಜಿನಲ್ಲಿ ನಿನ್ನೆ ನಾಗರ ಹಾವೊಂದು ಬಂದು ಬಿಟ್ಟಿತ್ತು. ಸುಮಾರು ನಾಲ್ಕುವರೆ ಅಡಿ ಉದ್ದವಿದ್ದ ನಾಗರ ಕಪ್ಪೆಯೊಂದನ್ನು ತಿಂದು ಕಾಲೇಜಿನ ಮೆಟ್ಟಿಲ ಮೇಲೆ ಹೆಡೆಯೆತ್ತಿಕೊಂಡು ಬುಸುಗುಟ್ಟುತ್ತಿತ್ತು. 

ಏನೋ ಶಬ್ದವಾಗುತ್ತಿದೆ ಎಂದು ನೋಡಿದ ಸಿಬ್ಬಂದಿ, ಟಾರ್ಚ್​ ಲೈಟ್ ಬಿಟ್ಟು ಹುಡುಕಿದಾಗ ಹಾವೊಂದು ಹರಿದಾಡ್ತಿರುವುದು ಕಂಡಿದೆ. ಭಯಬಿದ್ದವರೇ ಸ್ನೇಕ್​ ಕಿರಣ್​ಗೆ ಫೋನ್ ಹಾಯಿಸಿದ್ಧಾರೆ. 

ವಿಷಯ ತಿಳಿದು ಸ್ನೇಕ್​ ಕಿರಣ್ ಸ್ಥಳಕ್ಕೆ ಬರುವಷ್ಟರಲ್ಲಿ ಹಾವು, ಮೆಟ್ಟಿಲ ಸಂದಿಯಲ್ಲಿದ್ದ ಜಾಗವೊಂದರಲ್ಲಿ ಸೇರಿಕೊಂಡಿತ್ತು. ಹಾವಿನ ಇರುವಿಕೆಯನ್ನು ಹುಡುಕಿದ ಸ್ನೇಕ್​ ಕಿರಣ್​ ಅದನ್ನ ಅಲ್ಲಿ ತೆಗೆದರು, ಅಷ್ಟರಲ್ಲಿ ಹಾವು ಮೆಟ್ಟಿಲ ಮೇಲಿರುವ ಜಾಗದಲ್ಲಿ ಹರಿದಾಡಲು ಆರಂಭಿಸಿತು. ಅಲ್ಲದೆ  ಟಾರ್ಚ್ ಬೆಳಕಿನಲ್ಲಿ ಕಾಣಿಸಿದ ತನ್ನ ನೆರಳನ್ನ ನೋಡಿದ  ನಾಗರಾಜ, ನೆರಳು ಹರಿದಾಡಿದತ್ತ ತನ್ನ ಹೆಡೆಯಾಡಿಸುತ್ತಾ ಬುಸುಗುಟ್ಟುತ್ತಿತ್ತು. ಇದರ ಬಗ್ಗೆ ಮಾಹಿತಿ ಕೊಟ್ಟ ಸ್ನೇಕ್​ ಕಿರಣ್​, ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು.