Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVE

Shivamogga news today 08-06-2025 / ಹಲ್ಲೆ, ವಂಚನೆ, ಶಾಸನ ಮತ್ತು 11 ಲಕ್ಷದ ಚಿನ್ನದ ಕಥೆ!ಶಿವಮೊಗ್ಗದಲ್ಲಿ ಏನೆಲ್ಲಾ ನಡೀತು!?

Malenadu Today
Last updated: June 8, 2025 3:23 pm
Malenadu Today
Share
SHARE

ಶಿವಮೊಗ್ಗದಲ್ಲಿ ನಕಲಿ ಚಿನ್ನದ ನಾಣ್ಯಗಳ ಹೆಸರಿನಲ್ಲಿ 11 ಲಕ್ಷ ರೂ. ವಂಚನೆ

Shivamogga news today / ಬೆಂಗಳೂರಿನ ನಿವಾಸಿ ಗೌತಮ್ ಭಂಡಾರಿ ಎಸ್ ಅವರಿಗೆ ಶಿವಮೊಗ್ಗದಲ್ಲಿ ಬಂಗಾರದ ನಾಣ್ಯ ನೀಡುವುದಾಗಿ ನಂಬಿಸಿ ಬರೋಬ್ಬರಿ 11 ಲಕ್ಷ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿನ ಟ್ಯಾಕ್ಸಿಯೊಂದರಲ್ಲಿ ಪರಿಚಯವಾದ ಶಿವಮೊಗ್ಗದ ಪ್ರದೀಪ್ ಎಂಬಾತ ಗೌತಮ್‌ರನ್ನು ಶಿವಮೊಗ್ಗಕ್ಕೆ ಬಂದರೆ ಪ್ರವಾಸಿ ತಾಣಗಳನ್ನು ತೋರಿಸುವುದಾಗಿ ನಂಬಿಸಿದ್ದನು. ಗೌತಮ್ ತಮ್ಮ ಸ್ನೇಹಿತರಾದ ನಾಗೇಶ್ ಮತ್ತು ಚಿಕ್ಕ ಸ್ವಾಮಿ ಅವರೊಂದಿಗೆ ಶಿವಮೊಗ್ಗಕ್ಕೆ ಬಂದು ಸಿಗಂದೂರು ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಪ್ರದೀಪ್‌ರನ್ನು ಸಂಪರ್ಕಿಸಿದ್ದಾರೆ. ಶ್ರೀರಾಮಪುರದಲ್ಲಿ ಗೌತಮ್‌ರನ್ನು ಭೇಟಿಯಾದ ಪ್ರದೀಪ್, ತನ್ನ ಜೊತೆಗಿದ್ದ ವಸಂತ್, ಕೊಳ್ಳಿ ರಘು ಮತ್ತು ಮುದ್ದಪ್ಪರನ್ನು ಪರಿಚಯಿಸಿ, ಮುದ್ದಪ್ಪನ ಸಹೋದರಿಯ ಮದುವೆಗೆ ಹಣದ ಅವಶ್ಯಕತೆ ಇದೆ ಎಂದು ಸುಳ್ಳು ಹೇಳಿದ್ದಾರೆ. ತಮ್ಮ ಬಳಿ ಹಳೆಯ ಕಾಲದ 250 ಗ್ರಾಂ ಬಂಗಾರದ ನಾಣ್ಯಗಳಿವೆ ಎಂದು ಹೇಳಿ, ಅವುಗಳನ್ನು 11 ಲಕ್ಷ ರೂ.ಗೆ ನೀಡುವುದಾಗಿ ಆಮಿಷವೊಡ್ಡಿದ್ದಾರೆ. ಗೌತಮ್‌ರಿಗೆ ನಂಬಿಕೆ ಮೂಡಿಸಲು ಮೊದಲು ಎರಡು ಅಸಲಿ ಚಿನ್ನದ ನಾಣ್ಯಗಳನ್ನು ಪರಿಶೀಲಿಸಲು ನೀಡಿದ್ದು, ಬೆಂಗಳೂರಿನಲ್ಲಿ ಪರಿಶೀಲಿಸಿದಾಗ ಅವು ಅಸಲಿ ಎಂದು ದೃಢಪಟ್ಟಿದೆ. ಇದರ ಬೆನ್ನಲ್ಲೇ, ಗೌತಮ್ ಸ್ನೇಹಿತರಿಂದ ಹಣ ಪಡೆದು ಪ್ರದೀಪ್‌ಗೆ ನೀಡಿ 250 ಗ್ರಾಂ ನಕಲಿ ಬಂಗಾರದ ನಾಣ್ಯಗಳನ್ನು ಪಡೆದುಕೊಂಡಿದ್ದಾರೆ. ನಂತರ ಇವು ನಕಲಿ ಎಂದು ತಿಳಿದುಬಂದಿದ್ದು, ಗೌತಮ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ತೀರ್ಥಹಳ್ಳಿಯಲ್ಲಿ ಯುವ ವಕೀಲರ ಮೇಲೆ ರಾಡ್‌ನಿಂದ ಮಾರಣಾಂತಿಕ ಹಲ್ಲೆ /Shivamogga news today

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹಾಡಹಗಲೇ ಯುವ ವಕೀಲ ಹಾಗೂ ಬಿಜೆಪಿ ಮುಖಂಡ ಮಧುಕರ್ ಮಯ್ಯ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಪಟ್ಟಣದ ಸಿಬಿನಕೆರೆ ಬಳಿ ಈ ಘಟನೆ ನಡೆದಿದ್ದು, ಮಯ್ಯ ಅವರನ್ನು ಕೋರ್ಟ್ ಬಳಿಯಿಂದಲೇ ಬೆನ್ನಟ್ಟಿ ನಾಲ್ವರು ರಾಡ್‌ಗಳಿಂದ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಈ ದಾಳಿಯಿಂದ ಮಧುಕರ್ ಮಯ್ಯ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ರಾಜಕೀಯ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

car decor

ತೀರ್ಥಹಳ್ಳಿ ಮಠದಲ್ಲಿ 16ನೇ ಶತಮಾನದ ಅಪರೂಪದ ತಿಗಳಾರಿ ಲಿಪಿ ಶಾಸನ ಪತ್ತೆ: Shivamogga news today

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಭೀಮನಕಟ್ಟೆಯ ಭೀಮಸೇತು ಮುನಿವೃಂದ ಮಠದಲ್ಲಿ ಅತ್ಯಂತ ಅಪರೂಪದ ಶಾಸನವೊಂದು ಪತ್ತೆಯಾಗಿದ್ದು, ಇತಿಹಾಸ ಸಂಶೋಧಕರ ಗಮನ ಸೆಳೆದಿದೆ. ಮಠದ ತುಳಸಿಕಟ್ಟೆಯಲ್ಲಿ ಕಂಡುಬಂದ ಈ ಶಾಸನವು ಏಳು ಸಾಲುಗಳಿದ್ದು, ವಿಶಿಷ್ಟವಾದ ತಿಗಳಾರಿ ಲಿಪಿಯಲ್ಲಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪತ್ತೆಯಾದ ಮೊಟ್ಟಮೊದಲ ತಿಗಳಾರಿ ಲಿಪಿಯ ಶಾಸನ ಇದಾಗಿದ್ದು, ಇದು ಸುಮಾರು ಹದಿನಾರನೇ ಶತಮಾನಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ. ಈ ಶಾಸನದಲ್ಲಿ “ವಸುದೇವ ತೀರ್ಥರಿಂದಲೂ ವೃಂದಾವನ ಸೇವೆ ಅರ್ಪಿತ” ಎಂದು ಉಲ್ಲೇಖಿಸಲಾಗಿದ್ದು, ಮಠದ ಯತಿಗಳಾದ ಶ್ರೀ ವಸುದೇವ ತೀರ್ಥರು ಹಿಂದಿನ ಯತಿಗಳ ಬೃಂದಾವನಗಳನ್ನು ನಿರ್ಮಿಸಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಇದೇ ತುಳಸಿ ವೃಂದಾವನದ ಇನ್ನೊಂದು ಭಾಗದಲ್ಲಿ ಹತ್ತು ಸಾಲುಗಳ ಕೆಳದಿ ಲಿಪಿಯ ಶಾಸನವೂ ಪತ್ತೆಯಾಗಿದ್ದು, ಇದು ನಳ ಸಂವತ್ಸರದಲ್ಲಿ ರಾಮಚಂದ್ರನು ದೇವರ ಚರಣಗಳಿಗೆ ತೋಟ, ಕೆರೆ ಕಟ್ಟೆಗಳನ್ನು ದಾನವಾಗಿ ನೀಡಿದ್ದಾನೆ ಎಂದು ತಿಳಿಸುತ್ತದೆ. 

ಶಿವಮೊಗ್ಗದಲ್ಲಿ ಎಲೆಕ್ಟ್ರಾನಿಕ್‌ ಹೂಡಿಕೆ ಹೆಸರಿನಲ್ಲಿ 17.74 ಲಕ್ಷ ರೂ. ಆನ್‌ಲೈನ್ ವಂಚನೆ:Shivamogga news today

ಶಿವಮೊಗ್ಗದಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳ ಖರೀದಿಯಲ್ಲಿ ಅಧಿಕ ಲಾಭಾಂಶ ಗಳಿಸಬಹುದೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 17.74 ಲಕ್ಷ ರೂ. ಆನ್‌ಲೈನ್ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಟೆಲಿಗ್ರಾಂನಲ್ಲಿ “ನ್ಯೂ ಎಗ್‌ ಕಮ್ಯೂನಿಟಿ” ಎಂಬ ಗ್ರೂಪ್‌ಗೆ ಸೇರಿದ್ದ ಶಿವಮೊಗ್ಗದ ವ್ಯಕ್ತಿಗೆ, ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದೆಂದು ವಂಚಕರು ಆಮಿಷವೊಡ್ಡಿದ್ದಾರೆ. ವಂಚಕರು ಯು.ಪಿ.ಐ. ಐಡಿಗಳನ್ನು ನೀಡಿ ಹಣ ಹೂಡಿಕೆ ಮಾಡುವಂತೆ ಸೂಚಿಸಿದ್ದು, ಅಧಿಕ ಲಾಭಾಂಶದ ಆಸೆಗಾಗಿ ಆ ವ್ಯಕ್ತಿ ಮೇ 5 ರಿಂದ ಮೇ 29 ರವರೆಗೆ ಒಟ್ಟು 17.74 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ. ಆದರೆ, ಮತ್ತಷ್ಟು ಹಣ ಕಳುಹಿಸುವಂತೆ ವಂಚಕರು ಒತ್ತಾಯಿಸಿದಾಗ, ತಾನು ವಂಚನೆಗೊಳಗಾಗಿರುವುದು ಆ ವ್ಯಕ್ತಿಗೆ ಅರಿವಾಗಿದೆ. ಈ ಸಂಬಂಧ ಹಣ ಕಳೆದುಕೊಂಡಿರುವ ಶಿವಮೊಗ್ಗದ ವ್ಯಕ್ತಿ ಸಿ.ಇ.ಎನ್.‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  

Shivamogga news today

malenadutoday add
TAGGED:Shivamogga news today
Share This Article
Facebook Whatsapp Whatsapp Telegram Threads Copy Link
Previous Article Hit-and-Run Accident Near Anandapura hit-and-Run Accident Near Anandapura, Sagar /ಸಾಗರದಲ್ಲಿ ಬೈಕ್ ಸವಾರ ಕೃಷ್ಣ ಸ್ಥಳದಲ್ಲೇ ಸಾವು
Next Article absconding Accused Arrested After 15 Years absconding Accused Arrested After 15 Years / 15 ವರ್ಷಗಳಿಂದ ಹುಡುಕುತ್ತಿದ್ದ ಶಿಕಾರಿಪುರದ ಆರೋಪಿ ಹೊನ್ನಾವರದಲ್ಲಿ ಅರೆಸ್ಟ್
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

Funeral of Manjunath Rao
SHIMOGA NEWS LIVE

funeral of Manjunath Rao | ಪಂಚಭೂತಗಳಲ್ಲಿ ಲೀನರಾದ ಮಂಜುನಾಥ್​ ರಾವ್​

By Malenadu Today
tunga Dam at Gajanur near Shivamogga
SHIMOGA NEWS LIVE

tunga Dam at Gajanur near Shivamogga /ಯಾವುದೆ ಕ್ಷಣದಲ್ಲಿ ಗಾಜನೂರು ಡ್ಯಾಂ ಗೇಟ್ ಓಪನ್! ಸಾರ್ವಜನಿಕರಿಗೆ ಮಾಹಿತಿ

By Malenadu Today

ಕೊಂಡಜ್ಜಿ ಹಳ್ಳದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

By 13

ಹೆಚ್‌ ಸಿದ್ದಯ್ಯ ಸರ್ಕಲ್‌ ಬಳಿ ನಡೆದಿದ್ದೇನು? ಕಾರು ಅಂಗಾತ ಬಿದ್ದಿದ್ದೇಗೆ ? ಆತನ ಸಾವಿಗೆ ಏನು ಕಾರಣ CC TV ದೃಶ್ಯ!

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up