SHIVAMOGGA | MALENADUTODAY NEWS | Aug 25, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಯುವಕನೊಬ್ಬ ಆನ್ ಲೈನ್ ಆ್ಯಪ್ ನ ಮೋಸದಿಂದಾಗಿ ಸಾವನ್ನಪ್ಪಿದ್ದಾನೆ. ಈತ ಆನ್ಲೈನ್ ಆ್ಯಪ್ ಸಂಸ್ಥೆಯೊಂದಿಗೆ ಚರ್ಚಿಸುವ ವಾಟ್ಸಾಪ್ ಸಂದೇಶಗಳು ನಿಜಕ್ಕೂ ಮನ ತಲ್ಲಣಗೊಳಿಸುತ್ತಿವೆ. ದಯವಿಟ್ಟು ನನ್ನ ದುಡ್ಡನ್ನ ವಾಪಸ್ ಕೊಡಿ ಎಂದು ಪರಿಪರಿಯಾಗಿ ಬೇಡಿದರೂ ಆ್ಯಪ್ ಸಂಸ್ಥೆ ಇನ್ನೊಂದಿಷ್ಟು ದುಡ್ಡು ಕಟ್ಟುವಂತೆ ಮತ್ತೆ ಮತ್ತೆ ಹೇಳಿದೆ. ಹಾಗಾಗಿ ದಾರಿ ಕಾಣದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೇಪರ್ ಟೌನ್ ಪೊಲೀಸ್ ಠಾಣೆ (Paper Town Police Station)
ಪೇಪರ್ ಟೌನ್ ಪೊಲೀಸ್ ಠಾಣೆಯ ಲಿಮಿಟ್ನಲ್ಲಿ ಆನ್ಲೈನ್ ಆ್ಯಪ್ ನಂಬಿ ಹಣ ಕಳೆದುಕೊಂಡ ಪ್ರದೀಪ್ (27) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಣ ಡಬ್ಬಲ್ ಆಗುತ್ತೆ ಎಂದು ನಂಬಿ ಆ್ಯಪ್ ವೊಂದರ ಮೇಲೆ ದುಡ್ಡು ಹಾಕಿದ್ದ. ಇದಕ್ಕಾಗಿ 91 ಸಾವಿರ ರೂಪಾಯಿ ಸಾಲ ಮಾಡಿದ್ದನಂತೆ. ಆದರೆ ಆ್ಯಪ್ ಇನ್ನಷ್ಟು ದುಡ್ಡು ಹಾಕಿ ಮತ್ತಷ್ಟು ದುಡ್ಡು ಹಾಕಿ ಹಳೆಯ ಅಮೌಂಟ್ ಬಿಡಿಸಿಕೊಳ್ಳಲು ಈ ಅಮೌಂಟ್ ಕಟ್ಟಿ, ನಿಮ್ಮ ಲಾಭ ಅಷ್ಟು ಬಿಡಿಸಿಕೊಳ್ಳಲು ಫೀಜ್ ಕಟ್ಟಿ ಎಂದು ಹೇಳಿದೆ. ಇದರಿಂದ ಬೇಸತ್ತ ಯುವಕ ತಾನು ಮೋಸಹೋಗಿರುವುದು ಗೊತ್ತಾಗಿದೆ. ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನಷ್ಟು ಸುದ್ದಿಗಳು
-
Shivamogga court | @ಜೈಲರ್ ಕೊಲೆ ಕೇಸ್ | ಇಬ್ಬರು ಮಹಿಳೆಯರಿಗೆ ಜೀವಾವಧಿ ಶಿಕ್ಷೆ , ಮೂವರಿಗೆ ಐದು ವರ್ಷ ಜೈಲು
-
ವೃದ್ಧಾಪ್ಯ ವೇತನದ ದುಡ್ಡು ಕೇಳಿದ್ರೆ ಗೆಟ್ ಔಟ್ , ಹೋಗಿ ಸಾಯಿ ಅಂತಾರಂತೆ | ಅಜ್ಜಿ ಅಳಲನ್ನ ಆಲಿಸುತ್ತಾ ವ್ಯವಸ್ಥೆ?
-
Anandpur Sagar | ಐತಿಹಾಸಿಕ ಪುಷ್ಕರಣಿಯಲ್ಲಿ ಈಜುವಾಗ ಬೆಂಗಳೂರು ಮೂಲದ ಯುವಕ ಸಾವು