sagara news today : ಮನುಷ್ಯನಲ್ಲಿ ಮಾನವೀಯತೆ ಹಾಗೂ ಸಹಾಯ ಮಾಡುವ ಮನೋಭಾವವಿದ್ದರೆ ಆತ ಎಂತಹವರನ್ನು ಗೆಲ್ಲಬಹುದು. ಹಾಗೆಯೇ ಯಾವುದೇ ಪರಿಸ್ಥಿತಿಯಲ್ಲಿರುವ ವ್ಯಕ್ತಿಗಳ ಕಷ್ಟಕ್ಕೆ ಸ್ಪಂಧಿಸಿ ಅವರ ಜೀವವನ್ನು ಉಳಿಸಬಹುದು. ಅದಕ್ಕೆ ನಿದರ್ಶನವೆಂಬಂತೆ ಅನಂದಪುರದಲ್ಲಿ ಕೆಎಸ್ ಆರ್ಟಿಸಿ ಚಾಲಕ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿ ಮಾನವಿಯತೆಯನ್ನು ಮೆರೆದಿದ್ದಾರೆ.
sagara news today : ಏನಿದು ಘಟನೆ
ಕೆಎಸ್ಆರ್ಟಿಸಿ ಬಸ್ ನಿನ್ನೆ ತಡ ರಾತ್ರಿ ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಆವೇಳೆ ಆನಂದಪುರದ ಬಳಿ ಬಸ್ನಲ್ಲಿದ್ದ ಅಬ್ದುಲ್ ಗಫರ್ ಎನ್ನುವ ಪ್ರಯಾಣಿಕರಿಗೆ ಉಸಿರು ಕಟ್ಟಿದ ಅನುಭವವಾಗಿ ಅಸ್ವಸ್ಥಗೊಂಡರು. ಕೂಡಲೇ ಪರಿಸ್ಥಿತಿಯನ್ನರಿತ ಬಸ್ ಚಾಲಕ ಬಸ್ನ್ನು ಆನಂದಪುರದ ಸರ್ಕಾರಿ ಆಸ್ಪತ್ರೆ ಆವರಣದೊಳಗೆಯೇ ಚಾಲನೆ ಮಾಡಿಕೊಂಡು ಹೋಗಿದ್ದಾರೆ. ನಂತರ ಅಲ್ಲಿ ಪ್ರಯಾಣಿಕನನ್ನು ಆಸ್ಪತ್ರೆಗೆ ದಾಖಲಿಸಿದರು. ಚಾಲಕನ ಸಮಯ ಪ್ರಜ್ಙ್ನೆ ಹಾಗೂ ಸಹಾಯದ ಮನೋಭಾವನೆಗೆ ಎಲ್ಲೆಡೆ ಶ್ಲಾಘನೆಗೆ ವ್ಯಕ್ತವಾಗಿದೆ.