Manjunath rao last rites : ಕಾಶ್ಮೀರದ ಪಾಲ್ಗಾಮ್ ಟೆರರ್ ಅಟ್ಯಾಕ್ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಉದ್ಯಮಿ ಮಂಜುನಾಥ್ ರಾವ್ ರ ಅಂತಿಮ ದರ್ಶನಕ್ಕೆ ಇವತ್ತು ಜನಸಾಗರವೇ ನೆರೆದಿತ್ತು. ಬೆಂಗಳೂರಿನಿಂದ ಅವರ ಪಾರ್ಥಿವ ಶರೀರ, ಸ್ವಗೃಹಕ್ಕೆ ಆಗಮಿಸುತ್ತಲೇ ನೆರದಿದ್ದ ಜನರು ಘೋಷಣೆಗಳನ್ನು ಕೂಗಿದರು

Manjunath rao last rites : ಭಾರತ್ ಮಾತಾ ಕೀ ಜೈ
ಅದಾಗಲೇ ಮಂಜುನಾಥ್ ರಾವ್ರ ಅಂತಿಮ ದರ್ಶನಕ್ಕೆ ನೇತಾಜಿ ಸರ್ಕಲ್ ಬಳಿಯಲ್ಲಿಯೇ ನೂರಾರು ಮಂದಿ ಕಾದಿದ್ದರು. ವಿವಿಧ ಧರ್ಮದ ಮುಖಂಡರು, ವಿವಿಧ ಪಕ್ಷಗಳ ಮುಖಂಡರು ಮೃತರ ಪಾರ್ಥಿವ ಶರೀರ ಆಗಮಿಸುತ್ತಲೇ ಹೂವಿನ ಹಾರಗಳನ್ನು ಹಾಕಿ ಅಂತಿಮ ನಮನ ಸಲ್ಲಿಸಿದರು.
ಮಂಜುನಾಥ್ ಅಮರ್ ರಹೆ
ಇನ್ನೂ ಮನೆಯ ಹೊರಗಡೆ ನೆರದಿದ್ದ ಮಂದಿ ಭಾರತ್ ಮಾತಾ ಕೀ ಜೈ, ಮಂಜುನಾಥ್ ಅಮರ್ ರಹೆ ಎಂದು ಘೋಷಣೆ ಕೂಗಿದರು. ಅಲ್ಲದೆ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಸಾವಿನ ಮನೆಯಲ್ಲಿ ದುಃಖತಪ್ತರಾಗಿದ್ದ ಕುಟುಂಬಸ್ಥರನ್ನು, ಕುಟುಂಬದ ಸಂಬಂಧಿಕರು ಸಂತೈಸುತ್ತಿದ್ದ ದೃಶ್ಯ ಅಲ್ಲಿದ್ದವರನ್ನು ಕಣ್ತುಂಬಿ ಬರುವಂತೆ ಮಾಡಿತ್ತು.

ಶಾಸಕ ಎಸ್ಎನ್ ಚನ್ನಬಸಪ್ಪ
ಶಾಸಕ ಎಸ್ಎನ್ ಚನ್ನಬಸಪ್ಪ ವಿಷಯ ತಿಳಿದಾಗಿನಿಂದಲೂ ಮೃತರ ಕುಟುಂಬಸ್ಥರ ಸಂಪರ್ಕದಲ್ಲಿದ್ದು, ಆಗಬೇಕಿದ್ದ ಪ್ರತಿ ಕೆಲಸವನ್ನು ಗಮನಿಸಿದರು. ನಿನ್ನೆಯಿಂದಲೂ ಅಲ್ಲಿಯೇ ಮೊಕ್ಕಾಂ ಹೂಡಿರುವ ಅವರು ಇವತ್ತು ಪಾರ್ಥಿವ ಶರೀರವನ್ನು ಬರಮಾಡಿಕೊಂಡು ಪ್ರತಿ ಪ್ರಕ್ರಿಯೆಗಳ ಬಗ್ಗೆ ಗಮನ ಹರಿಸಿದರು.
Manjunath rao last rites : ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ
ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮೃತ ಮಂಜುನಾಥ್ರವರ ಅಂತಿಮಯಾತ್ರೆಗೆ ಸಕಲ ಸಿದ್ಧತೆಗಳನ್ನು ಕೈಗೊಂಡಿತ್ತು. ಪಾರ್ಥಿವ ಶರೀರ ಆಗಮಿಸುತ್ತಲೇ ದಾವಣಗೆರೆ ಐಜಿ ರವಿಕಾಂತೇ ಗೌಡ, ಡಿಸಿ ಗುರುದತ್ತ ಹೆಗೆಡೆ, ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ಫೋಟೋಗಳಲ್ಲಿ ಮಂಜುನಾಥ್ ರವರ ಅಂತಿಮಯಾತ್ರೆ ಕ್ಷಣಗಳು









