ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 24 2025 : ರಾಜ್ಯ ಕಾಂಗ್ರೆಸ್ ಸರ್ಕಾರ ಹಾಲಿ ಉಳಿದಿರುವ ನಿಗಮ ಹಾಗೂ ಮಂಡಳಿಗೆ ಅಧ್ಯಕ್ಷ ಸ್ಥಾನದ ಆಯ್ಕೆಯನ್ನು ಪೂರ್ತಿ ಮಾಡುತ್ತಿದೆ. ಈ ಸಂಬಂಧ ಕಾಂಗ್ರೆಸ್ ಹೈಕಮಾಂಡ್ 39 ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ ವಿವಿಧ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನ ಶಿಫಾರಸು ಮಾಡಿ ಪಟ್ಟಿ ನೀಡಿದೆ. ಈ ಪಟ್ಟಿಯಲ್ಲಿ ಶಿವಮೊಗ್ಗದ ಎನ್ಎಸ್ಯುಐ ಚೇತನ್ ಕೂಡ ಸ್ಥಾನ ಪಡೆದಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬಿಡುಗಡೆ ಮಾಡಿರುವ ಪಟ್ಟಿಯ ಸಂಬಂಧ ಮೊದಲು ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಚರ್ಚಿಸಿದ್ದರು. ತದನಂತರ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಲಾಗಿತ್ತು. ಅಲ್ಲಿಂದ ಅನುಮೋದನೆ ಪಡೆದ ಬಳಿಕ ಇದೀಗ ಶಿಪಾರಸ್ಸು ಪಟ್ಟಿ ಬಿಡುಗಡೆಯಾಗಿದೆ. ಈ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ ಬಳಿಕ ಪಟ್ಟಿಯಲ್ಲಿರುವ ವ್ಯಕ್ತಿಗಳು ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.

ಎಐಸಿಸಿ ರಾಹುಲ್ ಗಾಂಧಿ ಮೆಚ್ಚಿ ಗೌರವಿಸಿದ್ದ ಹುಡುಗನಿಗೆ ನಿಗಮ ಮಂಡಳಿ ಸ್ಥಾನ
ಇನ್ನೂ 39 ನಿಗಮ ಮಂಡಳಿಗೆ ಅಧ್ಯಕ್ಷರ ಆಯ್ಕೆಗೆ ಶಿಪಾರಸ್ಸು ಮಾಡಿರುವ ಈ ಪಟ್ಟಿಯಲ್ಲಿ ಶಿವಮೊಗ್ಗದಲ್ಲಿ NSUI ಹಾಗೂ ಯೂತ್ ಕಾಂಗ್ರೆಸ್ನಲ್ಲಿ ಸಕ್ರೀಯ ಕಾರ್ಯಕರ್ತನಾಗಿ ಕೆಲಸ ಮಾಡಿದ ಚೇತನ್ ಕೆ ಯುವರನ್ನ ರಾಜ್ಯ ಕೈಮಗ್ಗ ಮೂಲಸೌಕರ್ಯ ಮಂಡಳಿ (karnataka state handloom and infrastructure power loom)ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಚೇತನ್ ಮೂಲತಃ NSUI ನಿಂದ ವಿದ್ಯಾರ್ಥಿ ಹೋರಾಟಕ್ಕೆ ಪ್ರವೇಶ ಪಡೆದರು. 2005 ರಲ್ಲಿ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಓದುತ್ತಿದ್ದಾಗ, ಆ ಸಂದರ್ಭದಲ್ಲಿ NSUIನಲ್ಲಿ ಜಿಲ್ಲಾಧ್ಯಕ್ಷರಾಗಿದ್ದ ಮಧುಸೂಧನ್ ರವರ ಸಂಪರ್ಕಕ್ಕೆ ಬಂದ ಚೇತನ್ ಅಲ್ಲಿಂದ ಸತತ ನಾಲ್ಕು ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ NSUI ಸಂಘಟನೆಯನ್ನು ಪ್ರಬಲ ಹಾಗೂ ವಿದ್ಯಾರ್ಥಿ ಪರ ಸಂಘಟನೆಯನ್ನಾಗಿ ರೂಪುಗೊಳಿಸುವಲ್ಲಿ ಕೆಲಸ ಮಾಡಿದರು.
2009 ರಲ್ಲಿ NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಚೇತನ್ ಆನಂತರ ಎರಡು ವರ್ಷ NSUI ನಗರಾಧ್ಯಕ್ಷರಾಗಿ ಕೆಲಸ ಮಾಡಿದರು. ಈ ವೇಳೆ ದೆಹಲಿಯಲ್ಲಿ ನಡೆಯುವ NSUI ಪದಾಧಿಕಾರಿಗಳ ತರಭೇತಿ ಶಿಬಿರದಲ್ಲಿ ಅತ್ಯುತ್ತಮ ಜಿಲ್ಲಾಧ್ಯಕ್ಷ ಎಂಬ ಗೌರವಕ್ಕೆ ಪಾತ್ರರಾದರು. ವಿಶೇಷ ಅಂದರೆ ಇಡೀ ದೇಶದಲ್ಲಿ ಕೇವಲ 11 ಪದಾಧಿಕಾರಿಗಳಿಗೆ ಈ ಗೌರವ ಲಭಿಸಿತ್ತು.ಆ ಪೈಕಿ ಚೇತನ್ ಸಹ ಒಬ್ಬರು, ಸ್ವತಃ ಎಐಸಿಸಿ ವರಿಷ್ಟ ರಾಹುಲ್ ಗಾಂಧಿಯವರು ಚೇತನ್ ರಿಗೆ ಅತ್ಯುತ್ತಮ ಜಿಲ್ಲಾಧ್ಯಕ್ಷ ಗೌರವ ನೀಡಿ, ಚೇತನ್ ರ ಬೆನ್ನುತಟ್ಟಿದ್ದರು.
2016 ರಿಂದ 2020 ರ ಅವಧಿಯಲ್ಲಿ NSUI ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಚೇತನ್ ರಾಜ್ಯದೆಲ್ಲೆಡೆ ವಿದ್ಯಾರ್ಥಿ ಸಂಘಟನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿದರು. ನಂತರ 2023ವರೆಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯು ಶ್ರಮವಹಿಸಿದರಷ್ಟೆ ಅಲ್ಲದೆ ತಮಗೆ ವಹಿಸಿದ ಜವಾಬ್ದಾರಿಯಲ್ಲಿ ದಾವಣಗೆರೆ ಹಾಗೂ ಚಿಕ್ಕಮಗಳೂರಿನಲ್ಲಿ ಸಂಘಟನೆಯನ್ನು ಯಶಸ್ವಿಯಾಗಿ ನಿಬಾಯಿಸಿದ್ದರು. ಇದರ ನಡುವೆ ಪಕ್ಷದ ಸೂಚನೆ ಮೇರೆಗೆ ವಿಜಯಪುರದಲ್ಲಿ ಇಂದಿರಾಗಾಂಧಿ ಜಯಂತಿ ಪ್ರಯುಕ್ತ ಮಹಿಳಾ ವಿದ್ಯಾರ್ಥಿಗಳ ಸಮಾವೇಶ ಆಯೋಜನೆ ಉಸ್ತುವಾರಿ ಹೊತ್ತಿದ್ದಷ್ಟೆ ಅಲ್ಲದೆ ಸಮಾವೇಶವನ್ನು ಯಶಸ್ವಿಯಾಗಿ ಜರಗುವಂತೆ ನಿರ್ವಹಿಸಿದರು. ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಂದು ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ದಿನೇಶ್ ಗುಂಡೂರಾವ್ ರವರು ಚೇತನ್ ರವರ ಕಾರ್ಯಶ್ರಮವನ್ನು ಮೆಚ್ಚಿಕೊಂಡು ಶ್ಲಾಘಿಸಿದ್ದರು. 2021 ರಲ್ಲಿ ರಾಜೀವ್ ಗಾಂಧಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ರನ್ ಫಾರ್ ರಾಜೀವ್ ಓಟವನ್ನು ಆಯೋಜಿಸಿ ಯಶಸ್ವಿಗೊಳಿಸಿದ್ದರು.
ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ದುಡಿಯುವುದರ ಜೊತೆಜೊತೆಗೆ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ಎರಡನೇ ಅವಧಿಗೆ ನಿರ್ದೇಶಕನಾಗಿ ಸೇವೆಸಲ್ಲಿಸುತ್ತಿರುವ ಚೇತನ್ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಸಮುದಾಯದ ಯುವಕರನ್ನ ಗುರುತಿಸಿ ಅಭಿನಂದಿಸುವ ನಿಟ್ಟಿನಲ್ಲಿ ಪ್ರತಿವರ್ಷ ಸಮಾವೇಶ ಆಯೋಜನೆಯ ಉಸ್ತುವಾರಿಯನ್ನ ಹೊತ್ತು ಯಶಸ್ವಿಯಾಗಿ ನಿಬಾಯಿಸುತ್ತಿದ್ದಾರೆ.
ವಿದ್ಯಾರ್ಥಿಗಳ ನಡುವೆ ಚೇತು,,,ಚೇತು ಅಣ್ಣ ಅಂತಲೇ ಕರೆಸಿಕೊಳ್ಳುವ ಚೇತನ್ ವ್ಯಕ್ತಿಗತವಾಗಿಯು ಸರಳ ಜೀವಿ.ವೇಷಭೂಷಣದಲ್ಲಿಯು ಸಿಂಪಲ್ ಆಗಿರುವ ಚೇತನ್ ಸಂಘಟನೆಯ ವಿಚಾರದಲ್ಲಿ ದೊಡ್ಡಶಕ್ತಿ ಎಂಬ ಮಾತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿಯೇ ಕೇಳಿಬರುತ್ತದೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಯಾವ ನಿರೀಕ್ಷೆ ಇಟ್ಟುಕೊಳ್ಳದೆ ಹಾಗೂ ಸಂಭಾವ್ಯ ಅಪಾಯವನ್ನು ಲೆಕ್ಕಿಸದೆ ಚೇತನ್ ತನ್ನ ಜೊತೆಗೊಂದಿಷ್ಟು ಹುಡುಗರ ದೊಡ್ಡ ತಂಡವನ್ನೆ ಕಟ್ಟಿಕೊಂಡು 55 ಮೆಗ್ಗಾನ್ ಆಸ್ಪತ್ರೆಯಲ್ಲಿ ಊಟ ವಿತರಿಸಿದ್ದರು. ಇವೆಲ್ಲದರ ನಡುವೆ 2017 ರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ವಾರ್ಡ್ 2 ರಲ್ಲಿ ಚುನಾವಣೆಗೂ ಸ್ಪರ್ಧಿಸಿದ್ದರು. ಪಕ್ಷ ಹಾಗೂ ವಿದ್ಯಾರ್ಥಿ ಸಂಘಟನೆಗಾಗಿ ದುಡಿದ ಚೇತನ್ ರ ಸೇವೆಯನ್ನು ಗುರತಿಸಿ ಸದ್ಯ ಚೇತನ್ ರಿಗೆ ನಿಗಮಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದ ಸಂತಸದ ವಿಚಾರ.
Karnataka Government Appoints 39 Members to Various Corporations and Boards
ನಿಗಮ ಮಂಡಳಿ ಪಟ್ಟಿ, ಕರ್ನಾಟಕ ರಾಜಕೀಯ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ವಿನಯ್ ಕುಲಕರ್ಣಿ, ಶಿವಲೀಲಾ ಕುಲಕರ್ಣಿ, ಕಾಂಗ್ರೆಸ್,
ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!