SHIVAMOGGA | MALENADUTODAY NEWS | Aug 28, 2024 ಮಲೆನಾಡು ಟುಡೆ
ಮಲೆನಾಡಲ್ಲಿ ಬಂದೂಕು ಅಥವಾ ಗನ್ಗಳಿಂದ ಆಗುವ ಅವಾಂತರಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಚಿಕ್ಕಮಗಳೂರು ತಾಲ್ಲೂಕು ಕಳವಾಸೆ ಗ್ರಾಮದಲ್ಲಿ ಗನ್ ತೆಗೆದು ಬದಿಗಿಡುವ ಸಂದರ್ಭದಲ್ಲಿ ಫೈರ್ ಆಗಿ ಓರ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಫೈರ್ ಆದ ಬುಲೆಟ್ ವ್ಯಕ್ತಿಯ ಹಿಂದೆ ತಲೆಬುರಡೆಯಿಂದ ಒಳಹೊಕ್ಕು ಬಲಗಣ್ಣಿನಿಂದ ಹೊರಬಂದಿದೆ.ಘಟನೆಯಲ್ಲಿ ಮೃತರು ಅರುಣ್ 47 ವರ್ಷ
ಮನೆಯ ಶೆಡ್ನಲ್ಲಿದ್ದ ಗನ್ನ್ನ ತೆಗೆದುಕೊಂಡಿದ್ದ ಅರುಣ್ ಅದನ್ನ ಒರೆಸಿ ಒಳಗೆ ಇಡಲು ಮುಂದಾಗಿದ್ದಾರೆ. ಈ ವೇಳೆ ಅದರಿಂದ ಫೈರ್ ಆಗಿದೆ.
ಇನ್ನೊಂದೆಡೆ ಅರುಣ್ ರವರೇ ಫೈರ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾದ ಸಂಶಯವನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನಡೆದ ಘಟನೆಯಾದ್ದರಿಂದ ಯಾವುದೂ ಸ್ಪಷ್ಟವಾಗಿಲ್ಲ
ಸದ್ಯ ಮೃತದೇಹವನ್ನು ಹಾಸ ಆಸ್ಪತ್ರೆಗೆ ರವಾನೆ ಮಾಡಿರುವ ಪೊಲೀಸರು ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
Shivamogga | 30 ಸಾವಿರ ಕ್ಯೂಸೆಕ್ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ
ಶಿವಮೊಗ್ಗ-ಶಿರಾಳಕೊಪ್ಪ ಟೋಲ್ ಗೇಟ್ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?
Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ | ನಾಲ್ವರು ಅರೆಸ್ಟ್