Friday, 11 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

Belur gopalakrishna july 11, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರ ಜನಪರ ಕಾಳಜಿ: ವೃದ್ಧೆಯೊಂದಿಗೆ ಆತ್ಮೀಯ ಸಂವಾದದ ವಿಡಿಯೋ ವೈರಲ್!

prathapa thirthahalli
Last updated: July 11, 2025 3:15 pm
Prathapa thirthahalli - content producer
Share
SHARE

Belur gopalakrishna july 11, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರ ಜನಪರ ಕಾಳಜಿ: ವೃದ್ಧೆಯೊಂದಿಗೆ ಆತ್ಮೀಯ ಸಂವಾದದ ವಿಡಿಯೋ ವೈರಲ್ !

Belur gopalakrishna  ಶಿವಮೊಗ್ಗ: ಶಾಸಕರೆಂದರೆ ಸಾಮಾನ್ಯವಾಗಿ ಐಷಾರಾಮಿ ಕಾರುಗಳಲ್ಲಿ ಸಂಚರಿಸುವುದು, ಸಭೆಗಳಿಗೆ ಹಾಜರಾಗುವುದು ಮತ್ತು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಇಷ್ಟೇ ಅವರ ಕೆಲಸಗಳಾಗಿರುತ್ತವೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ತಮ್ಮ ಕಾರ್ಯಕರ್ತರ ಜೊತೆಗಷ್ಟೇ ಒಡನಾಟವಿಟ್ಟುಕೊಂಡು, ಸಾರ್ವಜನಿಕರೊಂದಿಗೆ ಬೆರೆಯುವುದು ಅಥವಾ ಅವರ ಕಷ್ಟಗಳನ್ನು ಆಲಿಸುವ ಗೋಜಿಗೆ ಹೋಗುವುದಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಇದರ ನಡುವೆಯೂ ಕೆಲವು ಶಾಸಕರು ಸಾರ್ವಜನಿಕರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಆಲಿಸುವ ಮೂಲಕ ಶಾಸಕನೆಂಬ ಹಮ್ಮು-ಬಿಮ್ಮು ಇಲ್ಲದೆ ನಡೆದುಕೊಳ್ಳುತ್ತಾರೆ. ಇದಕ್ಕೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಾಜಾ ಉದಾಹರಣೆಯಾಗಿದ್ದಾರೆ.

Belur gopalakrishna ಬೇಳೂರು ಗೋಪಾಲಕೃಷ್ಣ ಅವರು ಯಾವಾಗಲೂ ಜನರೊಂದಿಗೆ ಬೆರೆಯುವ ವ್ಯಕ್ತಿ. ಅವರಿಗೆ ಬಡವರು ಮತ್ತು ವೃದ್ಧರೆಂದರೆ ಎಲ್ಲಿಲ್ಲದ ಪ್ರೀತಿ. ಇದಕ್ಕೆ ನಿದರ್ಶನವೆಂಬಂತೆ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಕಾರಿನಲ್ಲಿ ತೆರಳುತ್ತಿದ್ದ ಗೋಪಾಲಕೃಷ್ಣನವರಿಗೆ ರಸ್ತೆಯಲ್ಲಿ ಕೋಲು ಹಿಡಿದು ನಡೆದುಕೊಂಡು ಹೋಗುತ್ತಿದ್ದ ಸುಮಾರು 90 ವರ್ಷ ಆಸುಪಾಸಿನ ವೃದ್ಧೆಯೊಬ್ಬರು ಕಾಣಸಿಗುತ್ತಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅವರನ್ನು ಕಂಡ ಗೋಪಾಲಕೃಷ್ಣ ತಕ್ಷಣವೇ ತಮ್ಮ ಗಾಡಿ ನಿಲ್ಲಿಸಿ, ಆ ವೃದ್ಧೆ ಇರುವಲ್ಲಿಗೆ ಬರುತ್ತಾರೆ. ನಂತರ, ತಮ್ಮ ಮುಗ್ಧ ಮನಸ್ಸಿನಿಂದ ನಾಟಿ ಧೀವರ ಭಾಷೆಯಲ್ಲಿ ತಮ್ಮನ್ನು ತಾವು ಪರಿಚಯ ಮಾಡಿಕೊಳ್ಳುತ್ತಾರೆ. “ಯಾವೂರಮ್ಮ ನಿಂದು? ಯಾಕ್ ಮಾರೇತಿ, ಈ ಇಳಿ ವಯಸ್ಸಲ್ಲಿ ಈತರ ಓಡಾಡ್ತೀಯಾ? ನಿನಗೆ ಮನೇಲಿ ಇರಕ್ಕಾಗಲ್ಲೇನೇ?” ಎಂದು ಆಪ್ಯಾಯತೆಯಿಂದ ಮಾತನಾಡಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ವೃದ್ಧೆ, “ನನಗೆ ಬೇಜಾರಾಗುತ್ತೆ, ಅದಕ್ಕೆ ತಿರುಗಾಡುತ್ತೇನೆ” ಎಂದು ಹೇಳುತ್ತಾರೆ. ನಂತರ ಗೋಪಾಲಕೃಷ್ಣ, “ನಿಂಗೆ ಏನು ಬೇಕು ಕೇಳು, ಕೊಡುತ್ತೇನೆ” ಎನ್ನುತ್ತಾರೆ. ಆಗ ವೃದ್ಧೆ, “ನೀನೇನು ಕೊಟ್ಟರೂ ಸಹ ನಾನು ತೆಗೆದುಕೊಳ್ಳುತ್ತೇನೆ” ಎನ್ನುತ್ತಾರೆ. ಕೊನೆಗೆ ಗೋಪಾಲಕೃಷ್ಣ ವೃದ್ಧೆಗೆ ಒಂದಿಷ್ಟು ಹಣವನ್ನು ನೀಡಿ ಕಳುಹಿಸುತ್ತಾರೆ.

car decor

ಹೀಗೆ ಶಾಸಕರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, “ಶಾಸಕರೆಂದರೆ ಈ ರೀತಿ ಇರಬೇಕು” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಈ ಹಿಂದೆ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಸಹ ಶಿವಮೊಗ್ಗ ನಗರದ ಕೆಲವೆಡೆ ಸ್ಕೂಟರ್‌ನಲ್ಲಿ ತೆರಳುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

Belur gopalakrishna ವೃದ್ದೆಯನ್ನು ಆತ್ಮೀಯವಾಗಿ ಮಾತನಾಡಿಸುತ್ತಿರುವ ಶಾಸಕರು
Belur gopalakrishna ವೃದ್ದೆಯನ್ನು ಆತ್ಮೀಯವಾಗಿ ಮಾತನಾಡಿಸುತ್ತಿರುವ ಶಾಸಕರು

 

View this post on Instagram

 

A post shared by KA on line (@kaonlinekannada)

malenadutoday add
TAGGED:belur gopalakrishna
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article bommanakatte murder case sp mithun kumar Bommanakatte Murder case july 11 : ಶಿವಮೊಗ್ಗದಲ್ಲಿ ಎಣ್ಣೆ ಪಾರ್ಟಿ ವೇಳೆ ನಡೆದ ಕಿರಿಕ್ ಕೊಲೆಯಲ್ಲಿ ಅಂತ್ಯ : ಎಸ್ ​ಪಿ ಹೇಳಿದ್ದೇನು
Next Article power cut tomorrow shivamogga power cut tomorrow shivamogga :  ಜುಲೈ 12 ರಂದು ನಗರದ 15 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ
Leave a Comment

Leave a Reply Cancel reply

Your email address will not be published. Required fields are marked *

You Might Also Like

SHIVAMOGGA NEWS TODAY

ಹರಿಗೆಯಲ್ಲಿ ಸ್ಮಶಾನ ನಿರ್ಮಾಣಕ್ಕೆ ನಾಲ್ಕು ಮುಕ್ಕಾಲು ಎಕರೆ ಭೂಮಿ ಮಂಜೂರು 

By 131

ಪೇಂಟ್‌ ಬಕೆಟ್‌ನಲ್ಲಿ ಮಾರುವ ಜೇನುತುಪ್ಪ ಖರೀಸುವಾಗ ಹುಷಾರ್‌

By 13
accident
SHIVAMOGGA NEWS TODAY

accident : ಕಾರು ಹಾಗೂ ಟಿಪ್ಪರ್​ ನಡುವೆ ಭೀಕರ ಅಪಘಾತ | ಇಬ್ಬರು ಸ್ಥಳದಲ್ಲೇ ಸಾವು

By Prathapa thirthahalli
power cut tomorrow
SHIVAMOGGA NEWS TODAY

mescom power cut : ಜೂನ್​ 22 ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up