Bommanakatte Murder case july 11 : ಶಿವಮೊಗ್ಗದಲ್ಲಿ ಎಣ್ಣೆ ಪಾರ್ಟಿ ವೇಳೆ ನಡೆದ ಕಿರಿಕ್ ಕೊಲೆಯಲ್ಲಿ ಅಂತ್ಯ : ಎಸ್ ​ಪಿ ಹೇಳಿದ್ದೇನು

Bommanakatte Murder case : ಶಿವಮೊಗ್ಗದಲ್ಲಿ ಎಣ್ಣೆ ಪಾರ್ಟಿ ವೇಳೆ ನಡೆದ ಕಿರಿಕ್ ಕೊಲೆಯಲ್ಲಿ ಅಂತ್ಯ : ಎಸ್​ಪಿ ಹೇಳಿದ್ದೇನು

ಶಿವಮೊಗ್ಗ ನಗರ ಹೊರವಲಯದ ಬೊಮ್ಮನಕಟ್ಟೆಯಲ್ಲಿ  ಸ್ನೇಹಿತರ ನಡುವೆ ಜಗಳ ನಡೆದು ಕೊಲೆಯಾಗಿದ್ದು, ಈ ಘಟನೆ ಕುರಿತು ಇದೀಗ ಎಸ್​ಪಿ ಜಿ.ಕೆ ಮಿಥುನ್​ ಕುಮಾರ್​ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಪಿ ಮಿಥುನ್ ಕುಮಾರ್, “ಪವನ್ ಮತ್ತು ಶಿವಕುಮಾರ್ ಎಂಬ ಇಬ್ಬರು ಕಳೆದ ರಾತ್ರಿ ಪಾರ್ಟಿ ಮುಗಿಸಿ ಊಟ ಮಾಡಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಮನಸ್ತಾಪ ಉಂಟಾಗಿದೆ. ಇದೇ ದ್ವೇಷದಲ್ಲಿ ಶಿವಕುಮಾರ್, ಪವನ್‌ನನ್ನು ಹತ್ಯೆ ಮಾಡಿದ್ದಾನೆ  ಎಂದು ವಿವರಿಸಿದರು.

ಆರೋಪಿ ಶಿವಕುಮಾರ್‌ನನ್ನು  ಪೊಲೀಸರು ವಶಕ್ಕೆ ಪಡೆದಿದ್ದು, ರಾತ್ರಿ ಎರಡೂವರೆ ಹೊತ್ತಿಗೆ ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ಶಿವಕುಮಾರ್ ಬಾಯಿ ಬಿಟ್ಟಿದ್ದಾನೆ ಎಂದು ಎಸ್.ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

bommanakatte murder case sp mithun kumar
bommanakatte murder case sp mithun kumar

 

Leave a Comment