Andhra Woman Rescued ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ತನ್ನ ಪತಿಯ ಕಿರುಕುಳ ತಾಳಲಾರದೆ, ಆಂಧ್ರ ಪ್ರದೇಶದಿಂದ ಶಿವಮೊಗ್ಗಕ್ಕೆ ಬಂದ ಮಹಿಳೆಯೊಬ್ಬಳನ್ನ ರಕ್ಷಣೆ ಮಾಡಲಾಗಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ದಳ ಮಹಿಳೆಯನ್ನ ರಕ್ಷಣೆ ಮಾಡಿದ್ದು, ಆಕೆಯನ್ನು ಸುರಕ್ಷಿತ ಆಶ್ರಯಕ್ಕೆ ಒಪ್ಪಿಸಿದ್ದಾರೆ.

ರೈಲಿನಲ್ಲಿ ಪಟಾಕಿ ಸಾಗಣೆ : ಶಿವಮೊಗ್ಗದಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲು
ಏನಿದು ಘಟನೆ
ಆಂಧ್ರಪ್ರದೇಶದ ಕಡಪ ಜಿಲ್ಲೆಗೆ ಸೇರಿದ ಮಹಿಳೆಯೊಬ್ಬರು, ತನ್ನ ಪತಿ ನೀಡುತ್ತಿದ್ದ ಹಿಂಸೆಗೆ ಬೇಸತ್ತು ಹೋಗಿದ್ದಳು. ಅಲ್ಲದೆ ಆತನ ಹಿಂಸೆ ತಾಳಲಾಗದೆ ತನ್ನ ಮಗುವನ್ನು ಸಹ ಅಲ್ಲಿಯೆ ಬಿಟ್ಟು ರೈಲೊಂದನ್ನ ಹತ್ತಿಕೊಂಡು ರಾಜ್ಯಕ್ಕೆ ಬಂದಿದ್ದಾಳೆ. ಹೀಗೆ ಪ್ರಯಾಣ ಮುಂದುವರಿಸಿ ಸೀದಾ ಶಿವಮೊಗ್ಗ ರೈಲು ನಿಲ್ದಾಣಕ್ಕೆ ರೈಲೊಂದರಲ್ಲಿ ಬಂದಿಳಿದಿದ್ದಾರೆ.
ಈ ಮಹಿಳೆಯ ಚಲನವಲನದ ಬಗ್ಗೆ ಅನುಮಾನಗೊಂಡ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ, ಮಹಿಳೆಯನ್ನು ತಡೆದು ವಿಚಾರಿಸಿದ್ದಾಳೆ. ಆಗ ಮಹಿಳೆಯು ತನಗಾದ ಅನ್ಯಾಯದ ಬಗ್ಗೆ ವಿವರಿಸಿದ್ದಾರೆ. 28 ವರುಷದ ಮಹಿಳೆಯ ಸಮಸ್ಯೆಯನ್ನು ಆಲಿಸಿದ ಸಿಬ್ಬಂದಿ ಬಳಿಕ ಆಕೆಯನ್ನು ಹೆಚ್ಚಿನ ಆರೈಕೆ ಮತ್ತು ಕೌನ್ಸೆಲಿಂಗ್ಗಾಗಿ ಸಖಿ ಸಾಂತ್ವನ ಕೇಂದ್ರದ ಸುಪರ್ಧಿಗೆ ಒಪ್ಪಿಸಿದ್ದಾರೆ.

ದೀಪಾವಳಿ ವಿಶೇಷ: ಯಶವಂತಪುರ-ತಾಳಗುಪ್ಪ ಮಾರ್ಗದಲ್ಲಿ ಎಕ್ಸ್ಪ್ರೆಸ್ ರೈಲು ಸೇವೆ ವಿಸ್ತರಣೆ
Andhra Woman Escapes Husband’s Harassment, Rescued by Police at Shivamogga Railway Station
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
