ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣದ ಶಿಶಿರ ಋತು, ಮಾಘ ಮಾಸ, ಶುಕ್ಲಪಕ್ಷದ ಈ ದಿನ, ರಾತ್ರಿ 1.35 ರವರೆಗೆ ಚೌತಿ ತಿಥಿ ಇರಲಿದ್ದು, ತದನಂತರ ಪಂಚಮಿ ತಿಥಿ ಆರಂಭವಾಗುತ್ತದೆ. ಮಧ್ಯಾಹ್ನ 2.17 ರವರೆಗೆ ಶತಭಿಷ ನಕ್ಷತ್ರವಿದ್ದು, ಆ ಬಳಿಕ ಪೂರ್ವಾಭಾದ್ರ ನಕ್ಷತ್ರ ಇರುತ್ತದೆ. ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರ ತನಕ ಇದ್ದರೆ, ಯಮಗಂಡ ಕಾಲವು ಬೆಳಿಗ್ಗೆ 6.00 ರಿಂದ 7.30 ರ ವರೆಗೆ ಇರುತ್ತದೆ.

ಹೊಸನಗರ ತಹಶೀಲ್ದಾರ್ ಸಾಗರ ತಾಲ್ಲೂಕಿಗೆ ವರ್ಗ!
ಇವತ್ತಿನ ರಾಶಿಫಲ
ಮೇಷ | ಹೊಸ ಪರಿಚಯ ಸಿಗಲಿದೆ, ಆರ್ಥಿಕ ವಿಷಯಗಳಲ್ಲಿ ಪ್ರಗತಿ. ಬಾಲ್ಯದ ಕೆಲವು ಘಟನೆ ನೆನಪಿಗೆ ಬರುವ ಸಾಧ್ಯತೆ, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಆಶಾದಾಯಕವಾಗಿರಲಿದೆ.
ವೃಷಭ |ಹೊಸ ಕೆಲಸಗಳಿಗೆ ಶ್ರೀಕಾರ, ಶುಭ ಸುದ್ದಿ. ಆಸ್ತಿ ಲಾಭ, ಕುಟುಂಬದಲ್ಲಿನ ಸಮಸ್ಯೆಗಳು ದೂರವಾಗುವುದು, ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ.
ಮಿಥುನ | ಹೊಸದಾಗಿ ಸಾಲ ಆಗಬಹುದು. ಶುಭ ಸುದ್ದಿಗಳು ಕೇಳಿಬರಲಿದೆ, ವಾಹನ ಯೋಗ, ದಿನಿವಿಡಿ ಅನುಕೂಲಕರವಾಗಿರುವುದು, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಗೊಂದಲ ಕಾಡುತ್ತದೆ.
ಕರ್ಕಾಟಕ | ಒತ್ತಡ ಹೆಚ್ಚಾಗಲಿದ್ದು, ದೇವಾಲಯಗಳಿಗೆ ಭೇಟಿ ನೀಡುವರು. ಹಠಾತ್ ಪ್ರಯಾಣ, ಅತಿಯಾದ ಶ್ರಮ ಮತ್ತು ಅನಾರೋಗ್ಯ, ವಿವಾದ, ವ್ಯಾಪಾರ, ಉದ್ಯೋಗದಲ್ಲಿ ಕಿರಿಕಿರಿ.
ಸಿಂಹ | ವಿವಾದ ಬಗೆಹರಿಯಲಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅಂದುಕೊಂಡ ಕೆಲಸ ಸಕಾಲದಲ್ಲಿ ಪೂರ್ಣಗೊಳ್ಳಲಿದ್ದು, ಗೌರವ ಪ್ರಾಪ್ತಿಯಾಗುತ್ತದೆ ಮತ್ತು ವ್ಯಾಪಾರ, ಉದ್ಯೋಗದಲ್ಲಿದ್ದ ಒಡ್ಡುಗಳು ಬಗೆಹರಿಯಲಿದೆ.
ಕನ್ಯಾ | ಆದಾಯದಲ್ಲಿ ಏರಿಕೆಯಾಗಲಿದ್ದು, ಆಲೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ಪಟ್ಟ ಶ್ರಮಕ್ಕೆ ತಕ್ಕ ಫಲ, ಪರಿಸ್ಥಿತಿ ಪರವಾಗಿರಲಿದೆ ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಉತ್ಸಾಹದಾಯಕ.
ತುಲಾ | ಜಗಳ, ಕದನ,ತಗಾದೆ. ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಕೆಲಸ ಮುಂದೂಡುವ ಪ್ರವೃತ್ತಿ ತೋರುತ್ತಾರೆ. ಪ್ರಯಾಣದಲ್ಲಿ ಬದಲಾವಣೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಮಂದಗತಿಯಲ್ಲಿ ಸಾಗಲಿದೆ. ವೃಶ್ಚಿಕ | ವ್ಯವಹಾರ ಅತ್ಯಂತ ನಿಧಾನಗತಿಯಲ್ಲಿ ಸಾಗಲಿದೆ, ಅನಾರೋಗ್ಯ , ಅತಿಯಾದ ಶ್ರಮ. ದೂರ ಪ್ರಯಾಣ ಸಾಲ ಆಗಬಹುದು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ.

ಸಾಗರ ತಾಲೂಕಿನಲ್ಲಿ ನಾಳೆ ಕರೆಂಟ್ ಇರಲ್ಲ! ಮೆಸ್ಕಾಂ ಮಾಹಿತಿ! ವಿವರ ಓದಿ
ಧನು | ಅಚ್ಚರಿಯ ವಿಷಯತಿಳಿಯಲಿದ್ದು, ಪ್ರತಿಭೆ ಬೆಳಕಿಗೆ ಬರಲಿವೆ. ಧನ ಮತ್ತು ವಸ್ತು ಲಾಭ, ಹಳೆಯ ಸ್ನೇಹಿತರ ಭೇಟಿ. ಉದ್ಯೋಗ ಪ್ರಾಪ್ತಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರೋತ್ಸಾಹ ಸಿಗಲಿದೆ.
ಮಕರ | ಕೆಲಸ ಮಂದಗತಿಯಲ್ಲಿ ಸಾಗಲಿದ್ದು, ಅತಿಯಾದ ಶ್ರಮ ಮತ್ತು ದೂರ ಪ್ರಯಾಣ. ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದ್ದು, ನಿರ್ಧಾರ ಬದಲಾಯಿಸಿಕೊಳ್ಳುವರು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸಾಮಾನ್ಯ ದಿನ.
ಕುಂಭ | ಬಂಧುಗಳೊಂದಿಗೆ ಉತ್ತಮ ಬಾಂಧವ್ಯ, ಕಾರ್ಯಜಯ, ಆಸ್ತಿ ಲಾಭ ಹಾಗೂ ಆಪ್ತರೊಂದಿಗೆ ಅತ್ಯಂತ ಉತ್ಸಾಹದಿಂದ ಸಮಯ ಕಳೆಯುವರು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ.
ಮೀನ | ವ್ಯವಹಾರಗಳಲ್ಲಿ ಅಡೆತಡೆ ನಿವಾರಣೆಯಾಗಲಿದೆ. ಭೂಮಿ ಮತ್ತು ವಾಹನ ಯೋಗ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದು, ಶುಭ ಸುದ್ದಿ ಕೇಳುವರು. ವ್ಯಾಪಾರ ವಿಸ್ತರಿಸಲಿದ್ದು, ಉದ್ಯೋಗದಲ್ಲಿನ ಸಂಕಷ್ಟ ನಿವಾರಣೆ

ಶಿವಮೊಗ್ಗದಲ್ಲಿ ಬೆಳ್ಳಿ 3 ಲಕ್ಷ! ಬಂಗಾರ 1.5 ಲಕ್ಷ! ಬಾನಿಗೇರಿದ ಬೆಲೆ, ಬಸವಳಿದ ಗ್ರಾಹಕ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
