SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 10, 2024 Hosanagara stamps and paper scam
ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬ ಕರೀಂಲಾಲ್ ತೆಲಗಿ ಸ್ಟೈಲ್ನಲ್ಲಿ ನಕಲಿ ದಾಖಲೆಗಳನ್ನ ಸೃಷ್ಟಿಸುತ್ತಿದ್ದ. ಇದೀಗ ಆತನ ಬಂಡವಾಳ ಬಯಲಾಗಿದ್ದು, ಆತನ ಮನೆಯ ಮೇಲೆ ಸ್ವತಃ ಹೊಸನಗರ ತಹಶೀಲ್ದಾರ್ ಎಚ್ ಜೆ ರಶ್ಮಿ ರೇಡ್ ನಡೆಸಿದ್ದಾರೆ. ಈ ವೇಳೆ ಭೂಮಿಯ ಹಕ್ಕುಪತ್ರಗಳು, ಕೋರ್ಟ್ನಿಂದ ಹಿಡಿದು ಬ್ಯಾಂಕ್ನವರೆಗೂ ಪ್ರತಿಯೊಂದು ಸಂಸ್ಥೆಗಳ ಸೀಲ್ಗಳು ಹಾಗೂ ನಕಲಿ ದಾಖಲೆಗಳು ಪತ್ತೆಯಾಗಿದೆ
25 ಸಾವಿರಕ್ಕೆ ಹಕ್ಕುಪತ್ರ – land documents and seal
ಸರ್ಕಾರವಂತೂ ಹಕ್ಕುಪತ್ರ ಕೊಡುವುದಿಲ್ಲ ಎಂದುಕೊಂಡೋ ಏನೋ ಈತ ತನ್ನ ಮನೆಯಿಂದಲೇ ಜನರಿಗೆ ಹಕ್ಕುಪತ್ರ ಕೊಡಲು ಆರಂಭಿಸಿದ್ದ. 25 ಸಾವಿರ ರೂಪಾಯಿ ಇಸ್ಕೊಂಡು ಹಕ್ಕುಪತ್ರ ಕೊಡಿಸುವುದಾಗಿ ಹೇಳಿ ದಾಖಲೆಗಳನ್ನ ಪಡೆದುಕೊಳ್ಳುತ್ತಿದ್ದ. ಒಂದಷ್ಟು ದಿನ ಓಡಾಡಿದ ಹಾಗೆ ಮಾಡಿ ಆ ಬಳಿಕ ಮನೆಯಲ್ಲಿಯೇ ಹಕ್ಕುಪತ್ರವನ್ನ ತಯಾರಿಸಿ ಸಂಬಂಧಪಟ್ಟವರಿಗೆ ನೀಡುತ್ತಿದ್ದ. ವಿಶೇಷ ಅಂದರೆ, ಈತ ಅಕ್ರಮ ಕಟ್ಟಗಳಿಗೂ ಹಕ್ಕುಗಾರಿಕೆಯನ್ನ ಮಂಜೂರು ಮಾಡಿ ಅದರ ದಾಖಲೆಯನ್ನ ವಿತರಿಸುತ್ತಿದ್ದ

ನಕಲಿ ಸೀಲ್ಗಳ ಹಾವಳಿ Fake stamps and seal
ಶಿವಮೊಗ್ಗದಲ್ಲಿ ಡೂಪ್ಲಿಕೇಟ್ ದಾಖಲೆಗಳನ್ನ ಸೃಷ್ಟಿಸುವ ಹಗರಣ ತುಂಬಾನೆ ಹಳೆಯದ್ದು, ಈ ಹಿಂದೆ ಇಂತಹುದ್ದೆ ಒಂದು ಪ್ರಕರಣ ರಾಜ್ಯದಲ್ಲೆಡೆ ಸದ್ದು ಮಾಡಿತ್ತು. ಇದೀಗ ಅದೇ ಮಾದರಿಯಲ್ಲಿ ಹೊಸನಗರ ತಾಲ್ಲೂಕು ಜಯನಗರ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಎಲ್ ಗುಡ್ಡೆಕೊಪ್ಪ ನಿವಾಸಿ ರಾಜೇಂದ್ರ ಎಂಬಾತ ಖುದ್ದಾಗಿ ತನ್ನ ಮನೆಯಲ್ಲಿ ಕೋರ್ಟ್, ತಹಶೀಲ್ದಾರ್, ಗ್ರಾಮ ಪಂಚಾಯಿತಿ ಕಚೇರಿ, ಸಬ್ರಿಜಿಸ್ಟರ್ ಸೇರಿದಂತೆ ವಿವಿಧ ಬ್ಯಾಂಕ್ಗಳ ಸೀಲ್ಗಳನ್ನ ಇಟ್ಟುಕೊಂಡಿದ್ದ. ಯಾರಿಗೆ ಯಾವ ಕೆಲಸ ಆಗಬೇಕು ಎಂದು ನೋಡಿ ಸೀಲು ಹಾಕಿ ಸಹಿ ಮಾಡಿ ನೀಡುತ್ತಿದೆ. ಈತನ ಮನೆಯಲ್ಲಿ ತಹಶೀಲ್ದಾರ್ ರೇಡ್ ವೇಳೆಯಲ್ಲಿ 48 ಸೀಲ್ಗಳು ಪತ್ತೆಯಾಗಿವೆ.
ರೇಡ್ ವೇಳೆ ನಾಪತ್ತೆಯಾದ ಆರೋಪಿ
ವಿಶೇಷ ಅಂದರೆ, ತಹಶೀಲ್ದಾರ್ ರಶ್ಮೀ ನೇತೃತ್ವದ ಪಿಎಸ್ಐ ಶಂಕರಗೌಡ ಪಾಟೀಲ್ , ಕಂದಾಯ ಇಲಾಖೆಯ ಶಿರಸ್ತೆದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಆಂಜನೇಯ, ಗ್ರಾಮ ಲೆಕ್ಕಾಧಿಕಾರಿ ರೇಣುಕಯ್ಯ ಸೇರಿದಂತೆ ಹಲವರಿದ್ದ ತಂಡ ಆರೋಪಿ ರಾಜೇಂದ್ರ ಎಂಬವರ ಮನೆ ಮೇಲೆ ರೇಡ್ಗೆ ಮುಂದಾಗಿದ್ದೇ ತಡ, ಇತ್ತ ರಾಜೇಂದ್ರ ನಾಪತ್ತೆಯಾಗಿದ್ದಾನೆ. ಆತಮನ
ಕಳೆದ ಹಲವು ದಿನಗಳಿಂದ ತಾಲೂಕಿನಲ್ಲಿ ನಕಲಿ ಹಕ್ಕುಪತ್ರಗಳು ಸೇರಿದಂತೆ ಕೆಲವು ದಸ್ತಾವೇಜುಗಳು ಹರಿದಾಡುತ್ತಿರುವ ಕುರಿತು ಆಗಾಗ್ಗೆ ಆರೋಪಗಳು ಕೇಳಿಬರುತ್ತಿತ್ತು. ನಕಲಿ ದಾಖಲೆಗಳನ್ನು ಸೃಷ್ಠಿಸಿ ಸಾರ್ವಜನಿಕರಿಂದ ಸಾವಿರಾರು ರೂ. ಹಣ ಪಡೆದು ನೈಜ ದಾಖಲೆ ಎಂದು ನಂಬಿಸಲಾಗುತ್ತಿತ್ತು ಎನ್ನಲಾಗಿದೆ. ಆರೋಪಿಯು ಅಮಾಯಕ ಜನರಿಂದ ಪ್ರತಿ ಹಕ್ಕುಪತ್ರಕ್ಕೆ 25 ಸಾವಿರ ರೂ. ಹಣ ಪಡೆಯುತ್ತಿದ್ದ ಎನ್ನಲಾಗಿದೆ. ಆರೋಪಿ ನಾಪತ್ತೆಯಾಗಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ