Friday, 1 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ನ್ಯಾಯದ ಹೋರಾಟದ ನಡುವೆ ಸಿಕ್ಕ ಪರಿಹಾರ | ಚೆಕ್‌ ಕೊಟ್ಟ ಸಿಎಂ ಸಿದ್ದರಾಮಯ್ಯ | ಸಂಜೆಯೊಳಗೆ 25 ಲಕ್ಷ ಅಕೌಂಟ್‌ಗೆ |

13
Last updated: September 24, 2024 10:22 pm
13
Share
SHARE

SHIVAMOGGA | MALENADUTODAY NEWS 

 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Sep 24, 2024

 

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ಕಳೆದ ಮೇ ತಿಂಗಳಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಆತ್ಮಹತ್ಯೆ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿತ್ತಷ್ಟೆ ಅಲ್ಲದೆ ಅಕ್ರಮ ಹಣ ವರ್ಗಾವಣೆ ಸರ್ಕಾರದಲ್ಲಿಯು ಹಲ್‌ಚಲ್‌ ಮೂಡಿಸಿತ್ತು. ಆನಂತರ ನಡೆದ ಬೆಳವಣಿಗೆಗಳ ನಡುವೆ ಚಂದ್ರಶೇಖರನ್‌ರವರ ಕುಟುಂಬ, ತಮ್ಮವರ ಸಾವಿಗೆ ನ್ಯಾಯ ಕೊಡಿಸುವಂತೆ ತಮ್ಮ ಮನೆಗೆ ಬಂದವರ ಬಳಿ ಅಲವತ್ತುಕೊಳ್ಳುತ್ತಲೇ ಬಂದಿತ್ತು. ಚಂದ್ರಶೇಖರನ್‌ ಪತ್ನಿ ಹಾಗೂ ಮಕ್ಕಳ ನ್ಯಾಯದ ಹೋರಾಟದ ನಡುವೆ ಅವರ ಕುಟುಂಬಕ್ಕೆ ಸರ್ಕಾರ ಪರಿಹಾರವನ್ನ ನೀಡಿದೆ. 

car decor
NES Head Office, Balaraja Urs Road, Shivamogga

malenadutoday

 

ಮೃತ ಚಂದ್ರಶೇಖರನ್‌ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹಲವರಿಂದ ಆಗ್ರಹ ವ್ಯಕ್ತವಾಗಿತ್ತು. ಸರ್ಕಾರದ ಮೇಲೆ ಒತ್ತಡ ಸೃಷ್ಟಿಯಾಗಿತ್ತು. ಇದೆಲ್ಲದರ ನಡುವೆ ಸರ್ಕಾರ ತಾನು ನೀಡಿದ್ದ ಪರಿಹಾರದ ಭರವಸೆಯನ್ನು ಇವತ್ತು ಈಡೇರಿಸಿದೆ. 

 

ಈ ಕುರಿತಾಗಿ ದಿನಾಂಕ: 19-07-2024 ರಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ, ಅಭಿವೃದ್ಧಿ ನಿಗಮದ ಕಛೇರಿ ಅಧೀಕ್ಷಕರಾಗಿದ್ದ ಚಂದ್ರಶೇಖರನ್ ಪಿ ಇವರ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ಕುಟುಂಬಕ್ಕೆ ರೂ.25.00 ಲಕ್ಷಗಳ ಸಹಾಯಧನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಅದರಂತೆ ಇವತ್ತು ಸಿಎಂ ಸಿದ್ದರಾಮಯ್ಯ 25 ಲಕ್ಷ ರೂಪಾಯಿಗಳ ಚೆಕ್‌ನ್ನ ಮೃತ ಚಂದ್ರಶೇಖರನ್‌ ರವರ ಪತ್ನಿಗೆ ಹಸ್ತಾಂತರಿಸಿದ್ದಾರೆ. ಇವತ್ತು ಸಂಜೆ ಹೊತ್ತಿಗೆ ಈ ಚೆಕ್‌ನಲ್ಲಿನ ಹಣ ಚಂದ್ರಶೇಖರನ್‌ ಪತ್ನಿ ಕವಿತಾರವರ ಖಾತೆಗೆ ಜಮೆ ಆಗಲಿದೆ ಅಂತಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

malenadutoday

 

ಏನಿದೆ ಪ್ರಕಟಣೆಯಲ್ಲಿ

ದಿನಾಂಕ:18.09.2024ರ ಸರ್ಕಾರದ ಆದೇಶದಂತೆ ದಿವಂಗತ ಚಂದ್ರಶೇಖರನ್ ಪಿ ಇವರ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ಕುಟುಂಬಕ್ಕೆ ರೂ.25.00 ಲಕ್ಷಗಳ ಸಹಾಯಧನವನ್ನು ಬಿಡುಗಡೆಗೊಳಿಸಲಾಗಿದೆ. ಈ ಸಂಬಂಧ ಮೃತರ ಪತ್ನಿ ಶ್ರೀಮತಿ ಕವಿತಾ ರವರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತಿದೆ. ಖಜಾನೆ ಬಿಲ್ ಸಲ್ಲಿಸಲಾಗಿದ್ದು, ಇಂದು ಸಂಜೆ 4.30ರ ಒಳಗಾಗಿ ಶ್ರೀಮತಿ ಕವಿತಾ ರವರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

 

malenadutoday

ವಿನೋಬನಗರ ಪೊಲೀಸ್‌ ಠಾಣೆ

ಇನ್ನೂ  ವಿನೋಬನಗರ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಷೇಧ ಕಾಯ್ದೆ-1989ರಡಿ ಸಿಐಡಿಯ ವಿಶೇಷ ತನಿಖಾ ತಂಡ(Special Investigation Team)ವು  ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ. 

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಷೇಧ ಕಾಯ್ದೆಯಡಿ ಪರಿಹಾರ

 

ಇದರ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಷೇಧ ಕಾಯ್ದೆಯ ನಿಯಮಗಳಂತೆ ರೂ.8.25 ಲಕ್ಷಗಳನ್ನು ಸಹ ಚಂದ್ರಶೇಖರನ್‌ ಕುಟುಂಬಕ್ಕೆ ಮಂಜೂರು ಮಾಡಲಾಗಿದೆ. ಜೊತೆಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದಿಂದ ಪಾವತಿಸಬೇಕಾದ ಸಂಬಳ ಮತ್ತು ರಜೆ ನಗದೀಕರಣಗಳಿಗೆ ಸಂಬಂಧಿಸಿದ ರೂ.1,41,361ಗಳನ್ನು  ಶ್ರೀಮತಿ ಕವಿತಾ ರವರ ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ. 

malenadutoday

ಶಿವಮೊಗ್ಗ ಸಚಿವ, ಶಾಸಕರ ಉಪಸ್ಥಿತಿ

 

ಜೊತೆಯಲ್ಲಿ ಚಂದ್ರಶೇಖರನ್‌ರವರ ಮಗನಿಗೆ ಉದ್ಯೋಗ ನೀಡುವ ಕುರಿತು ಕ್ರಮವಹಿಸಲಾಗುತ್ತಿದೆ ಎಂದು ಸರ್ಕಾರವೇ ತಿಳಿಸಿದೆ. ಇವತ್ತು ಬೆಂಗಳೂರಿನಲ್ಲಿ ಚೆಕ್‌ ವಿತರಿಸುವ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪರವರು ಕುಟುಂಬಸ್ಥರ ಪರವಾಗಿ ಸಿದ್ದರಾಮಯ್ಯರ ಬಳಿಯಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು. 

 

ಪರಿಹಾರ ವಿತರಣೆಯ ಸಂದರ್ಭದಲ್ಲಿ ಮೃತರ ಕುಟುಂಬಸ್ಥರ ಜೊತೆಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಲವೊಂದು ಸಲಹೆಗಳನ್ನ ಸಹ ನೀಡಿದರಷ್ಟೆ ಅಲ್ಲದೆ ದೈರ್ಯ ಕಳೆದುಕೊಳ್ಳಬೇಡಿ ಎಂದು ವಿಶ್ವಾಸ ತುಂಬಿದರು. ಜೊತೆಯಲ್ಲಿ ಮೃತರ ಮಗ ತಮ್ಮ ಆಶೀರ್ವಾದ ಪಡೆದಾಗ, ಸಮಸ್ಯೆಗಳು ಎದುರಾದಲ್ಲಿ ತಿಳಿಸಿ, ಭವಿಷ್ಯದ ಬಗ್ಗೆ ಯೋಚಿಸಿ ಎಂದು ಧೈರ್ಯ ತುಂಬಿದರು. 

ಒಟ್ಟಾರೆ, ಸರ್ಕಾರದ ಈ ಸಹಾಯ ಮೃತ ಚಂದ್ರಶೇಖರನ್‌ರವರ ಕುಟುಂಬಕ್ಕೆ ಆಸರೆಯಾಗಲಿದ್ದು, ಆ ನಿಟ್ಟಿನಲ್ಲಿ ಶ್ರಮಿಸಿದ ರಾಜಕಾರಣದ ಮನಸ್ಸುಗಳನ್ನು ಮೆಚ್ಚುವಂತದ್ದು. 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಆಗುಂಬೆಯ ಕಮಲಮ್ಮ ಕಾಣೆ | ಬೈಕ್‌ ಡಿಕ್ಕಿಯಾಗಿ ಲಾರಿ ಚಾಲಕ ಸಾವು | ಭದ್ರಾ ಚಾನಲ್‌ನಲ್ಲಿ ಸಿಕ್ತು ಮತ್ತೊಬ್ಬ ಮಹಿಳೆಯ ಶವ
Next Article ಶಿವಮೊಗ್ಗ ವಿಮಾನ ನಿಲ್ದಾಣ | ಲೈಸೆನ್ಸ್‌ ಬಗ್ಗೆ ಮತ್ತೊಂದು ಬಿಗ್‌ ಅಪ್‌ಡೇಟ್ಸ್‌ ಕೊಟ್ಟ ಸಂಸದ ಬಿ ವೈ ರಾಘವೇಂದ್ರ
Leave a Comment

Leave a Reply Cancel reply

Your email address will not be published. Required fields are marked *

You Might Also Like

12 Zodiac Signs Horoscope Astrological Predictions for July 17thJuly 17th Horoscope Unveiled  Astrological Predictions for All Zodiac Signs Career & Work: Insights Daily horoscope july 01Today Shivamogga Horoscope Kannada Astrology today june 27 2025June 25 2025 Astrology Forecast today Horoscope June 24 Horoscope Today astrological predictiondaily Panchang & rashi Bhavishya accurate daily horoscope today
STATE NEWS

horoscope today important decisions / 12 ರಾಶಿಗಳ ಇವತ್ತಿನ ಫಲಾಫಲ! ಧನಲಾಭ

By Malenadu Today

DINA-BHAVISHYA-DECEMBER-31 | ದಿನ ಭವಿಷ್ಯ | ಈ ದಿನ ಹೇಗಿದೆ ? ರಾಶಿಗಳ ಫಲಾಫಲ

By 13

DINA BHAVISHYA OCTOBER 26 | ಸಂಬಂಧಿಕರಿಂದ ಕರೆ ಬರುವುದು | ದಿನಭವಿಷ್ಯ ಹೇಗಿದೆ?

By 13

DINA BHAVISHYA OCTOBER 12 | ನಿಮ್ಮ ಯೋಚನೆಗೆ ಇಲ್ಲಿದೆ ಪರಿಹಾರ | ದಿನಭವಿಷ್ಯ!

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up