SHIVAMOGGA | MALENADUTODAY NEWS | Aug 12, 2024 ಮಲೆನಾಡು ಟುಡೆ
ಜಯನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ ನಿನ್ನೆ ದಿನ ಸಾರ್ವಜನಿಕರನ್ನ ಅಡ್ಡಗಟ್ಟಿ ಕೊಲೆ ಮಾಡಲು ಯತ್ನಿಸಿದ್ದ ರೌಡಿಶೀಟರ್ ಭವಿತ್ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ರವರು ಮಾಹಿತಿ ನೀಡಿದ್ದಾರೆ.
ನಿನ್ನೆ ನಡೆದಿದ್ದೇನು?
ಭವಿತ್ ಶಿವಮೊಗ್ಗದ ಪೊಲೀಸ್ ಇಲಾಖೆಯ ರೌಡಿ ಶೀಟರ್. ಈತ ಗಡಿಪಾರಾಗಿದ್ದ. ನಿನ್ನೆ ಶಿವಮೊಗ್ಗಕ್ಕೆ ಬಂದಿದ್ದಾನೆ. ಅಲ್ಲದೆ, ಜಯನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ಜನರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಜನರನ್ನ ಅಡ್ಡಗಟ್ಟಿ ಅವರನ್ನ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ.
ಈತನ ವಿರುದ್ಧ ಒಟ್ಟು ಏಳು ಕೇಸ್ಗಳಿದ್ದು, ಆ ಪೈಕಿ ಕೊಲೆ ಹಾಗೂ ಕೊಲೆ ಯತ್ನ ಮತ್ತು ದರೋಡೆ ಪ್ರಕರಣಗಳು ಸಹ ಇವೆ. ಸಾರ್ವಜನಿಕ ಜೀವನಕ್ಕೆ ಶಾಂತಿ ಭಂಗ ತಂದ ಈತನನ್ನ ಹಿಡಿಯಲು ಎಸ್ಐ ಸುನಿಲ್ ತೆರಳಿದ್ದರು. ಈ ವೇಳೆ ಸುನೀಲ್ರವರ ನೇತೃತ್ವದ ತಂಡದ ಸಿಬ್ಬಂದಿಯ ಮೇಲೆಯೇ ಹಲ್ಲೆ ಮಾಡಿದ್ದಾನೆ. ಹೀಗಾಗಿ ವಿಧಿಯಿಲ್ಲದೆ ಸುನೀಲ್ ಭವಿತ್ ಕಾಲಿಗೆ ಗುಂಡೇಟು ನೀಡಿದ್ದಾರೆ.
ವಿವಿಧ ಹಬ್ಬಗಳ ಹಿನ್ನೆಲೆಯಲ್ಲಿ ಮೊನ್ನೆಯಷ್ಟೆ ರೌಡಿ ಪರೇಡ್ ನಡೆಸಿದ್ದ ಎಸ್ಪಿ ಮಿಥುನ್ ಕುಮಾರ್ ಇದೀಗ ರೌಡಿಗಳಿಗೆ ಪರೋಕ್ಷವಾಗಿ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ಶಿವಮೊಗ್ಗ ಪೊಲೀಸ್ ಇಲಾಖೆ ಮತ್ತೊಮ್ಮೆ ತನ್ನ ಪಿಸ್ತೂಲ್ಗೆ ಕೆಲಸ ನೀಡಿದ್ದು ರೌಡಿಶೀಟರ್ ಒಬ್ಬನ ಕಾಲಿಗೆ ಗುಂಡು ಬಿದ್ದಿದೆ. ವಿನೋಭಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭವಿತ್ ಎನ್ನುವ ಆರೋಪಿಯ ಕಾಲಿಗೆ ಪಿಎಸ್ಐ ಗುಂಡು ಹಾರಿಸಿದ್ದಾರೆ. ಸದ್ಯ ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
SP Mithun Kumar | ರೌಡಿ ಪರೇಡ್ | 110 ಹಿಸ್ಟರಿ ಶೀಟರ್ಸ್ಗೆ ಎಸ್ಪಿ ಮಿಥುನ್ ಕುಮಾರ್ ವಾರ್ನಿಂಗ್