SHIVAMOGGA | MALENADUTODAY NEWS | Aug 19, 2024
ಮಲೆನಾಡು ಟುಡೆ | ಶಿವಮೊಗ್ಗದಿಂದ ಪ್ರಸಾರವಾಗುವ ಮಲೆನಾಡಿನ ವಿಶೇಷ ಡಿಜಿಟಲ್, ನ್ಯೂಸ್, ಮೀಡಿಯಾ
ಶಿವಮೊಗ್ಗ ನಗರದಲ್ಲಿ ಸಾಕಷ್ಟು ಸಮಸ್ಯೆಗಳನ್ನ ಜನರು ಎದುರಿಸುತ್ತಿದ್ದಾರೆ. ಅದರಲ್ಲಿಯು ಮಳೆ ಆರ್ಭಟಕ್ಕೆ ಸ್ಮಾರ್ಟ್ ಸಿಟಿಯ ರಸ್ತೆಯಲ್ಲಿ ಗುಂಡಿಗಳು ಬಾಯ್ತೆತೆರದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ಪೈಕಿ ಮಲೆನಾಡು ಟುಡೆಗೆ ಓದುಗರೊಬ್ಬರು ತಾವು ಎದುರಿಸಿದ ಸಮಸ್ಯೆಯೊಂದನ್ನ ವಿವರಿಸಿದ್ದಾರೆ.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ

ಶಿವಮೊಗ್ಗದ ಎನ್ಟಿ ರೋಡ್ನಲ್ಲಿ ಕಾಮತ್ ಪೆಟ್ರೋಲ್ ಬಂಕ್ ಸಮೀಪ ರಸ್ತೆಯ ಒಂದು ಬದಿಯಲ್ಲಿ ಗುಂಡಿ ಬಿದ್ದಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯಲ್ಲಿ ದ್ವಿಚಕ್ರವಾಹನ ಸವಾರು ಗುಂಡಿ ಗೊತ್ತಾಗದೇ ಸ್ಕಿಡ್ ಆಗುತ್ತಿದ್ದಾರೆ. ಇನ್ನೂ ಗುಂಡಿಗಿಳಿವ ನಾಲ್ಕು ಚಕ್ರದ ವಾಹನಗಳ ಟಯರ್ಗಳು ಬ್ಲಾಸ್ಟ್ ಆಗುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಟುಡೆಯ ಓದುಗರೊಬ್ಬರು ಇದೇ ಮಾರ್ಗದಲ್ಲಿ ಸಾಗುವ ತಮ್ಮ ಕಾರಿನ ಟಯರ್ ಗುಂಡಿಗಿಳಿದ ತಕ್ಷಣ ಬ್ಲಾಸ್ಟ್ ಆಗಿದೆ. ಅದೃಷ್ಟಕ್ಕೆ ಯಾವುದೆ ಅಪಾಯ ಸಂಭವಿಸಿಲ್ಲ.
ಗುಂಡಿ ಅಪಾಯಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಹಲವು ತಿಂಗಳಿನಿಂದ ಸಂಬಂಧಪಟ್ಟವರಿಗೆ ದೂರು ಕೊಟ್ಟು ಸಮಸ್ಯೆ ಸರಿಪಡಿಸಿ ಎಂದು ಮನವಿ ಮಾಡಿದ್ದೆವು. ಆದರೆ ಇದುವರೆಗೂ ಯಾರೊಬ್ಬರು ರಸ್ತೆಯಲ್ಲಿ ಬಿರುಕುಬಿಟ್ಟಂತಿರುವ ಅಪಾಯಕಾರಿ ಗುಂಡಿಯನ್ನ ಮುಚ್ಚಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿದರೇ, ವಾಹನ ಸವಾರಿಗೆ ಸಮಸ್ಯೆಯಾಗುವುದು ತಪ್ಪಲಿದೆ
ಇನ್ನಷ್ಟು ಸುದ್ದಿಗಳು
-
ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ | ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ
-
ಜೋಗ್ಪಾಲ್ಸ್ ಗೆ ಹೋಗುವಾಗ ಇರಲಿ ಎಚ್ಚರ | ಪ್ರಯಾಣಿಕನ ಮೇಲೆಯೇ ಹರಿಯಿತು ಬಸ್ | ನಡೆದಿದ್ದೇನು?
-
Shikaripura | ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಲು ಯತ್ನ |
-
ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ | ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಏಳು ಪ್ರಮುಖ ಸೂಚನೆ
-
ಭದ್ರಾ ಭರ್ತಿ : ರೈತರ ಮೊಗದಲ್ಲಿ ಮಂದಹಾಸ | ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದೇನು?
-
ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ