SHIVAMOGGA | MALENADUTODAY NEWS | ಮಲೆನಾಡು ಟುಡೆ Feb 5, 2025
ಸಾಮಾನ್ಯವಾಗಿ ವಿಶೇಷವಾದ ಹಲವು ವಿಚಾರಕ್ಕೆ ಸರ್ಕಾರದ ಸಚಿವರುಗಳಿಗೆ ಮನವಿ ಕೊಡುತ್ತಾರೆ. ಈ ನಡುವೆ ಒಂದು ವಿಶೇಷವಾದ ಮನವಿಯೊಂದು ಶಿವಮೊಗ್ಗದಿಂದ ಸಚಿವ ರಾಮಲಿಂಗಾರೆಡ್ಡಿಯವರಿಗೆ ಸಲ್ಲಿಕೆಯಾಗಿದೆ. ಅದೇನಂದರೆ, ಬಡಕುಟುಂಬದಲ್ಲಿ ಮೃತರಾದವರ ಅಂತ್ಯಸಂಸ್ಕಾರಕ್ಕೆ ಸರ್ಕಾರದಿಂದ 10 ಸಾವಿರ ರೂಪಾಯಿ ಒದಗಿಸುವಂತೆ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ನ ಟ್ರಸ್ಟಿ ಕಲ್ಲೂರು ಮೇಘರಾಜ್ ಮನವಿ ಮಾಡಿದ್ದಾರೆ.
ಈ ಮೊದಲು BPL ಕಾರ್ಡ್ದಾರರ ಕುಟುಂಬದಲ್ಲಿ ಯಾರಾದರೂ ಮೃತಪಟ್ಟಲ್ಲಿ ಅವರ ಅಂತ್ಯಕ್ರಿಯೆ ಸರ್ಕಾರದಿಂದ ಐದು ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಆನಂತರ ಈ ಪರಿಪಾಠ ನಿಂತು ಹೋಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಪುನಃ ಯೋಜನೆಗೆ ಚಾಲನೆ ನೀಡಿ, ಕನಿಷ್ಟ 10 ಸಾವಿರ ರೂಪಾಯಿಯನ್ನು ಬಡ ಕುಟುಂಬಸ್ಥರಿಗೆ ದುಃಖಕರ ಸಂದರ್ಭದಲ್ಲಿ ಒದಗಿಸಬೇಕು ಎಂಬ ವಿಚಾರ ಮನವಿಯಲ್ಲಿದೆ
ಬೆಂಗಳೂರಿನಲ್ಲಿ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾದ ಕಲ್ಲೂರು ಮೇಘರಾಜ್, ಈ ಸಂಬಂಧ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಸಚಿವರು ಸಹ ಈ ಸಂಬಂಧ ಭರವಸೆಯ ಮಾತುಗಳನ್ನ ಆಡಿದ್ದಾರೆ ಎನ್ನಲಾಗಿದೆ.
ಅಂತ್ಯಕ್ರಿಯೆಗೆ ನೆರವು ಯೋಜನೆಯ ಅಡಿಯಲ್ಲಿ ಮೊದಲು ಒಂದು ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಆನಂತರ 2015-16 ನೇ ಬಜೆಟ್ನಲ್ಲಿ ಈ ಮೊತ್ತವನ್ನು 5 ಸಾವಿರಕ್ಕೆ ಏರಿಸಲಾಗಿತ್ತು. ತದನಂತರ ಯೋಜನೆ ಬಹುತೇಕ ನಿಂತು ಹೋಗಿದೆ. ಈ ನಿಟ್ಟಿನಲ್ಲಿ ಕನಿಷ್ಟ 10 ಸಾವಿರ ರೂಪಾಯಿ ನೀಡುವಂತೆ ಮನವಿ ಸಲ್ಲಿಸಲಾಗಿದೆ.
ಇನ್ನೂ ಕೇಂಧ್ರ ಸರ್ಕಾರದ National Family Benefit Scheme ನಡಿಯಲ್ಲಿಯು ಬಿಪಿಎಲ್ ಕಾರ್ಡ್ದಾರರ ಕುಟುಂಬದಲ್ಲಿ ಮನೆಯ ಯಜಮಾನ ಅಥವಾ ದುಡಿಯುವ ವ್ಯಕ್ತಿ ಮೃತಪಟ್ಟರೆ 20 ಸಾವಿರ ರೂಪಾಯಿ ನೆರವು ಆ ಕುಟುಂಬಕ್ಕೆ ಸಿಗಲಿದೆ. ಕೆಲವು ನಿಯಮಗಳನ್ನು ಈ ಯೋಜನೆಯ ಅಡಿಯಲ್ಲಿ ಪೂರೈಸಬೇಕಿದೆ. ಮೃತರ ಸಂಬಂಧಿಕರು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು.
ಇನ್ನು ಕಾರ್ಮಿಕ ವಲಯದಲ್ಲಿ ನೋಂದಾಯಿತ ಕಾರ್ಮಿಕರು ಮೃತಪಟ್ಟ ಪಕ್ಷದಲ್ಲಿ ಅವರ ಅಂತ್ಯಕ್ರಿಯೆಗೆ ತತ್ತಕ್ಷಣದ ನೆರವು ನೀಡುವ ಯೋಜನೆ ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ಅದರ ವಿವರ ಇಲ್ಲಿದೆ ಕ್ಲಿಕ್ ಮಾಡಿ
SUMMARY | funeral assistance from karnataka government scheme, funeral assistance,Minister Ramalinga Reddy
KEY WORDS | funeral assistance from karnataka government scheme, funeral assistance,Minister Ramalinga Reddy