SHIVAMOGGA | MALENADUTODAY NEWS | ಮಲೆನಾಡು ಟುಡೆ Feb 22, 2025
ಶಿವಮೊಗ್ಗ ರಾಜಕಾರಣ ಮತ್ತೊಮ್ಮೆ ಎರಡನೇ ತಲೆಮಾರಿನ ಯುವ ರಾಜಕಾರಣಕ್ಕೆ ಸಜ್ಜಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪರವರ ಪುತ್ರ ಸ್ಥಳೀಯ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ ಎಂಬ ವರದಿಯೊಂದು ಹೊರಬಿದ್ದಿದೆ. ಮಲೆನಾಡು ಟುಡೆಯ ಮಿತ್ರ ಪತ್ರಿಕೆ ಮಲೆನಾಡು ಮಿತ್ರದಲ್ಲಿ ಈ ಬಗ್ಗೆ ವರದಿ ಪ್ರಕಟಿಸಲಾಗಿದೆ. ಈ ವರದಿಯ ಪ್ರಕಾರ, ಸ್ಥಳೀಯ ಸಂಸ್ಥೆ ಚುನಾವಣೆ ಶೀಘ್ರದಲ್ಲೇ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ.
ಈ ನಿಟ್ಟಿನಲ್ಲಿ ಶಿವಮೊಗ್ಗ ತಾಲೂಕು ಕುಂಸಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮೇಲೆ ಪ್ರಭಾವಿ ನಾಯಕರು ಕಣ್ಣಿಟ್ಟಿದ್ದು, ಕ್ಷೇತ್ರದಲ್ಲಿ ತಮ್ಮ ಪುತ್ರನನ್ನು ಕಣಕ್ಕಿಳಿಸಲು ಹರತಾಳು ಹಾಲಪ್ಪ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿ ಮಾಡಲಾಗಿದೆ. ಹೊಸನಗರ ಕ್ಷೇತ್ರದ ಮೂಲಕವೇ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿರುವ ಹರತಾಳು ಹಾಲಪ್ಪರವರು ಕುಂಸಿಗೂ ಚಿರಪರಿಚಿತರು, ಈ ಕ್ಷೇತ್ರ ಮೊದಲು ಹೊಸನಗರ ವ್ಯಾಪ್ತಿಯಲ್ಲಿತ್ತು, ಮರು ವಿಂಗಡನೆ ಸಮಯದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಒಳಪಟ್ಟಿತ್ತು. ಸಮುದಾಯದ ಓಟುಗಳು ಹೆಚ್ಚಿದ್ದು, ತಮ್ಮದೆ ದೊಡ್ಡ ಮಿತ್ರ ಬಳಗವನ್ನು ಹೊಂದಿರುವ ಹಾಲಪ್ಪನವರು ಇದೇ ಕ್ಷೇತ್ರದಿಂದ ತಮ್ಮ ಮಗನ ರಾಜಕಾರಣ ರಂಗಪ್ರವೇಶಕ್ಕೆ ಮುಂದಾಗಿದ್ದಾರಂತೆ.
ಇನ್ನೂ ಹರತಾಳು ಹಾಲಪ್ಪರವರ ಪುತ್ರ ಚೇತನ್ ಹಾಲಪ್ಪ ಈ ಹಿಂದೆ ತಂದೆಯ ಚುನಾವಣೆಗಾಗಿ ಕ್ಷೇತ್ರದೆಲ್ಲೆಡೆ ಕೆಲಸ ಮಾಡಿದ್ದು, ಅವರಿಗೆ ರಾಜಕಾರಣದ ಪರಿಚಯ ಹಾಗು ಅದರ ಪ್ರಾಥಮಿಕ ಹೆಜ್ಜೆಗಳು ತಿಳಿದೆಯಿದೆ. ಈ ನಿಟ್ಟಿನಲ್ಲಿ ಅವರ ರಾಜಕಾರಣ ಪ್ರವೇಶ ತುಸು ಜೋರಾಗೆ ಇರಲಿದೆ. ಹಾಗಂತ ಸಲುಭವಾಗಂತು ಇಲ್ಲ. ಏಕೆಂದರೆ ಈ ಕುಂಸಿ ಕ್ಷೇತ್ರದಿಂದಲೇ ಕಲಗೋಡು ರತ್ನಾಕರ್ , ಆಯನೂರು ಮಂಜುನಾಥ್ ರವರ ಪುತ್ರ ಹಾಗೂ ಎಂ ಬಿ ರಾಜಪ್ಪ ಸೇರಿದಂತೆ ಹಲವರು ಕಣ್ಣಿಟ್ಟಿದ್ದಾರೆ. ಅಲ್ಲದೆ ಬಿಜೆಪಿಯಿಂದಲೇ ಸಾಕಷ್ಟು ಮಂದಿ ಆಕಾಂಕ್ಷಿಗಳು ಕುಂಸಿಯಲ್ಲಿ ನೆಲೆಯೂರಲು ತಯಾರಿದ್ದಾರೆ.
SUMMARY | haratalu halappa son entry to politics
KEY WORDS | haratalu halappa son entry to politics