SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 17, 2025

ಶಿವಮೊಗ್ಗ | ನನಗೆ ಕನ್ನಡ ಮಾತನಾಡುವುದರಲ್ಲಿ ಅನುಭವದ ಕೊರತೆ ಇರಬಹುದು ಆದರೆ ಕನ್ನಡದ ಮೇಲೆ ಅಭಿಮಾನದ ಕೊರತೆ ಇಲ್ಲ ನನ್ನ ಹೃದಯ ಪ್ಯೂರ್ ಕನ್ನಡದ್ದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಂದು ಸಚಿವರು ನಗರದ ಸಾಹಿತ್ಯ ಗ್ರಾಮದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ನ ಸಭಾಂಗಣದಲ್ಲಿ ನಿರ್ಮಾಣವಾಗುತ್ತಿರುವ ಬಂಗಾರಪ್ಪ ಗ್ರಂಥಾಲಯಕ್ಕೆ ವ್ಯಯಕ್ತಿಕವಾಗಿ 5 ಲಕ್ಷ ರೂಪಾಯಿ ದೇಣಿಗೆ ನೀಡಿ ಮಾತನಾಡಿದರು. ಈ ಗ್ರಂಥಾಲಯಕ್ಕೆ ನನ್ನ ತಂದೆಯವರ ಹೆಸರಿಟ್ಟಿದ್ದಾರೆ ಎಂಬ ಕಾರಣದಿಂದ ಹಣ ನೀಡುತ್ತಿಲ್ಲ. ಕನ್ನಡ ಉಳಿಯಬೇಕು ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಹಣ ನೀಡುತ್ತಿದ್ದೇನೆ. ಈ ಹಿಂದೆ ನಮ್ಮ ತಂದೆಯವರು ಕಷ್ಟಪಟ್ಟು ಬೀದಿ ದೀಪದಲ್ಲಿ ಓದಿಕೊಂಡು ಬಂದವರು. ಆಗ ರನ್ನ ಪಂಪರ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು ಹಳೆಗನ್ನಡವನ್ನಾಗಲಿ ಹೊಸಗನ್ನಡವಾಗಲಿ ನಿರರ್ಗಳವಾಗಿ ಮಾತನಾಡುವ ಶಕ್ತಿ ಹೊಂದಿದ್ದರು. ಆದರೆ ನಾವೆಲ್ಲ ಕಾನ್ವೆಂಟ್ ನಲ್ಲಿ ಓದಿದವರು. ಕನ್ನಡದ ಬಗ್ಗೆ ತಿಳಿದುಕೊಳ್ಳದೆ ಇದ್ದರೂ ಅದಕ್ಕಿಂತ ಮಿಗಿಲಾಗಿ ಕನ್ನಡದ ಬಗ್ಗೆ ಅಭಿಮಾನ ಇದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಭವನ ಎಲ್ಲಾ ರೀತಿಯಲ್ಲೂ ಸದ್ಭಳಕೆಯಾಗಬೇಕಿದೆ. ಈ ಹಿಂದೆ ಅದೆಷ್ಟೋ ಸಾಹಿತಿಗಳು ತಮ್ಮ ಜೀವನ ಕನ್ನಡಕ್ಕಾಗಿ, ಸಾಹಿತ್ಯಕ್ಕಾಗಿ ಮುಡುಪಾಗಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಪೋಷಕರು ಕನ್ನಡ ಮಾಧ್ಯಮಕ್ಕೆ ಸೇರಿಸುತ್ತಿಲ್ಲ. ಕನ್ನಡ ಮೀಡಿಯಂನಲ್ಲಿ ಕಲಿಕೆ ಎಂಬುದು ಪೋಷಕರ ವಿವೇಚನೆಗೆ ಬಿಟ್ಟಿದ್ದು.ನಮ್ಮ ಕಾರ್ಯ ಪ್ರಚಾರವಾಗಿ ಮತ್ತೊಬ್ಬರು ದೇಣಿಗೆ ನೀಡುವಂತಾಗಲಿ ಎಂದರು. ಕನ್ನಡ ಸಾಹಿತ್ಯ ಪರಿಷತ್ ಭವನದ ಮುಂದುವರೆದ ಕಾಮಗಾರಿ ಬೇಗ ಬೇಗನೇ ಮುಗಿಯಲಿ 2.5 ಕೋಟಿ ಬಹಳ ದೊಡ್ಡ ಮೊತ್ತವಾದರೂ ಕನ್ನಡಕ್ಕೆ ಅದು ದೊಡ್ಡ ಮೊತ್ತದ ಹಣವಲ್ಲ. ಸಾಹಿತ್ಯ ಸಭಾಂಗಣವನ್ನು ಮುಗಿಸಿಕೊಡುವ ಕೆಲಸ ನನ್ನದು. ಸರ್ಕಾರದಿಂದಲೂ ಹಣ ಕೊಡಿಸಲು ಪ್ರಯತ್ನಿಸುತ್ತೇನೆ. ಗ್ರಂಥಾಲಯ ಶಿಕ್ಷಕರಿಲ್ಲದ ವಿಶ್ವವಿದ್ಯಾಲಯವಿದ್ದಂತೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲ ಪ್ರಯತ್ನವನ್ನೂ ನಾನು ಮಾಡುತ್ತೇನೆ. ಹೆಜ್ಜೆಯನ್ನು ಪುಟ್ಟಪುಟ್ಟದಾಗಿ ಇಡೋಣ ಆದರೆ ವೇಗ ಹೆಚ್ಚು ಮಾಡುತ್ತೇನೆ. ಸ್ವಲ್ಪ ಸಮಯಬೇಕು. ಆದರೆ ವೇಗವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಭಾರತಾಂಬೆಯ ಹೆಸರನ್ನಿಟ್ಟುಕೊಂಡು ಬಿಜೆಪಿ ಜನರಿಗೆ ಮೋಸ ಮಾಡುತ್ತಿದೆ.
ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಜನರಿಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಬಿಜೆಪಿಯವರು ಈ ಹಿಂದೆ ಭಾರತ್ ಅಕ್ಕಿಯನ್ನು ಕೊಡುವ ಕೆಲಸ ಮಾಡಿದ್ದರು. ಅದು ಇದುವರೆಗೆ ಎಷ್ಟು ಮನೆಗೆ ತಲುಪಿದೆ ಎಂಬುದು ತಿಳಿದಿಲ್ಲ. ಸಂಸದರ ಚುನಾವಣೆ ಸಂದರ್ಭದಲ್ಲಿ ಜನರಿಗೆ ಮೋಸ ಮಾಡಲು ಬಿಜೆಪಿ ಭಾರತ್ ಅಕ್ಕಿಯನ್ನು ಘೋಷಣೆ ಮಾಡಿತು. ಆದರೆ ಅದನ್ನು ಮನೆಮನೆಗೆ ತಲುಪಿಸಲು ಬಿಜೆಪಿ ಸರ್ಕಾರ ವಿಫಲವಾಗಿದೆ. ನಾವು ಗ್ಯಾರಂಟಿ ಯೋಜನೆಗಳನ್ನು ಮನೆ, ಮನೆಗೆ ತಲುಪಿಸಿರುವ ತೃಪ್ತಿ ನಮಗಿದೆ ಎಂದರು.
SUMMARY | “I may lack experience in speaking Kannada but there is no dearth of respect for Kannada and my heart is pure Kannada,” education minister Madhu Bangarappa said.
KEYWORDS | Kannada, Madhu Bangarappa, education minister,