waqf : ಸಾಗರ | ಮುಸ್ಲಿಂ ಸಮುದಾಯದಿಂದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ವಿದ್ಯುತ್ ದೀಪ ಆರಿಸುವುದರ ಮೂಲಕ ನಗರದ ಹಲವು ಬಡಾವಣೆಗಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

waqf : ಪ್ರತಿಭಟನೆ ನಡೆಸಲು ಕಾರಣವೇನು
ರಾತ್ರಿ 09 ಗಂಟೆಯಿಂದ 9:15 ರ ವರಗೆ ಏಕ ಕಾಲದಲ್ಲಿ ಮನೆಯಲ್ಲಿ ‘ಬತ್ತಿ ಗುಲ್’ ಎಂಬ ಹೆಸರಿನಲ್ಲಿ ಲೈಟ್ ಅನ್ನು ಆರಿಸಿ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರತಿಭಟನೆ ನಡೆಸಿತು. ಹಾಗೆಯೇ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿತು. ಈ ಪ್ರತಿಭಟನೆಗೆ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕರೆ ನೀಡಿತ್ತು.
ನಗರದ ಎಸ್ ಎನ್ ನಗರ,ಜನ್ನತ್ ನಗರ , ನೆಹರೂ ನಗರ , ರಾಮನಗರ, ಗಾಂಧಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ 15 ನಿಮಿಷಗಳ ಕಾಲ ಲೈಟ್ ಅನ್ನು ಆರಿಸುವುದರ ಮೂಲಕ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೀಡಿದ ಕರೆಯ ಮೇರೆಗೆ ವಕ್ಫ್ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
