SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 20, 2024
ನಿನ್ನೆ ದಿನ ದಾವಣಗೆರೆಯಲ್ಲಿ ನಡೆದ ಕಲ್ಲು ತೂರಾಟದ ವಿಚಾರದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (K. S. Eshwarappa ) ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ದಾವಣಗೆರೆಯಲ್ಲಿ ಮನೆಗಳಿಗೆ, ಅಂಗಡಿಗಳಿಗೆ ಕಲ್ಲು ತೂರಾಟ ಆಗಿದೆ, ಇದನ್ನ ಹಿಂದೂ ಸಮಾಜ ಎಷ್ಟು ದಿನ ತಡೆದುಕೊಳ್ಳಬೇಕು ಎಂದು ಪೃಶ್ನಿಸಿದ ಅವರು, ರಾಜ್ಯ ಸರ್ಕಾರ ದುಷ್ಕರ್ಮಿಗಳ ವಿರುದ್ಧ ಕ್ರಮ ಆಗಬೇಕು ಎಂದು ಎಚ್ಚರಿಸಿದ್ದಾರೆ.
ಇದರ ಹಿಂದೆ ಯಾವ ಶಕ್ತಿ ಇದೆ ಎಂಬುದು ತನಿಖೆಯಾಗಬೇಕು ಎಂದ ಅವರು, ರಾಜ್ಯದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು, ಟಿಪ್ಪು ಸುಲ್ತಾನ್, ಔರಂಗ್ ಜೇಬ್ ಫ್ಲೇಕ್ಸ್ ಹಾಕ್ತಾ ಇದ್ದಾರೆ, ಪ್ಯಾಲೆಸ್ಟೈನ್ ಬಗ್ಗೆ ಅಭಿಮಾನ ತೋರಿಸುತ್ತಿದ್ದಾರೆ, ಈ ಬಗ್ಗೆ ಯಾಕೆ ಕಾಂಗ್ರೆಸ್ ಒಂದು ಉತ್ತರವು ಕೊಡ್ತಿಲ್ಲ ಎಂದು ಪ್ರಶ್ನಿಸಿದರು.
ರಾಷ್ಟ್ರದ್ರೋಹಿ ಚಟುವಟಿಕೆಗಳು ದೇಶದಲ್ಲಿ ಹೆಚ್ಚುತ್ತಿದೆ. ಅದರಲ್ಲೂ ಗಣೇಶ ಹಬ್ಬದ ಸಂದರ್ಭದಲ್ಲಿ ಹೆಚ್ಚು ಗಲಾಟೆಗಳಾಗುತ್ತಿವೆ. ರಾಜ್ಯ ಸರ್ಕಾರ ರಾಷ್ಟ್ರ ದ್ರೋಹಿಗಳನ್ನು ಬಗ್ಗು ಬಡೆಯಬೇಕು. ದಾವಣಗೆರೆ ಘಟನೆಗೆ ಪ್ರತಿ ಉತ್ತರ ಹಿಂದು ಸಮಾಜ ನೀಡಿದರೆ ಕಥೆ ಏನಾಗುತ್ತದೆ ಗೊತ್ತಾ ಎಂದು ಪ್ರಶ್ನಿಸಿದರು

ತಿರುಪತಿ ಲಡ್ಡು –tirupati laddu controversy
tirupati laddu controversy / ತಿರುಪತಿ ಲಡ್ಡು ವಿವಾದದ ಬಗ್ಗೆ ಬೇಸರ ವ್ಯಕ್ತಪಡಿಸಿದ ಕೆಎಸ್ಇ,
ತಿರುಪತಿ ಲಡ್ಡಿನಲ್ಲಿ ಗೋವಿನ ಕೊಬ್ಬು ಬೆರಕೆ ಮಾಡುತ್ತಿರುವ ವಿಚಾರ ಕೇಳಿ ಆಶ್ಚರ್ಯ ಆಯ್ತು
ತಿರುಪತಿ ತಿಮ್ಮಪ್ಪನ ಲಡ್ಡಿನಲ್ಲಿ ಹಿಂದೂಗಳ ಭಕ್ತಿ ತುಂಬಿರುತ್ತದೆ, ಆದರೆ ಇಂತಹದ್ದೊಂದು ವಿಚಾರ ಕೇಳಿ ತುಂಬಾನೇ ನೋವಾಯ್ತು ಎಂದು ಬೇಸರ ವ್ಯಕ್ತಪಡಿಸಿದರು
ಜಗನ್ ಮೋಹನ್ ರೆಡ್ಡಿ ಸರ್ಕಾರ ಇದ್ದಾಗ ಈ ರೀತಿ ಮಾಡಿದ್ದಾರೆ, ಇದರಿಂದಾಗಿ ಇಡೀ ಪ್ರಪಂಚದಲ್ಲಿರುವ ಹಿಂದೂಗಳಿಗೆ ನೋವಾಗಿದೆ. ಲಡ್ಡು tirupati laddu ತಯಾರಿಕೆಯಲ್ಲಿ ಮೀನಿನ ಎಣ್ಣೆ, ಗೋವಿನ ಕೊಬ್ಬು, ಹಂದಿ ಕೊಬ್ಬು ಬಳಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮತಾಂತರ ಗೊಂಡಿರುವ ಜಗನ್ ಮೋಹನ್ ರೆಡ್ಡಿ ಈ ರೀತಿ ಮಾಡಿದ್ದಾರೆ, ಅವರನ್ನ ಹಾಗೂ ಟಿಟಿಡಿ ಅಧ್ಯಕ್ಷರಾಗಿದ್ದ ಸುಬ್ಬಾರೆಡ್ಡಿಯವರನ್ನ ಬಂಧಿಸಬೇಕು, ಈ ಸಂಬಂಧ ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ತಿರುಪತಿ ಲಡ್ಡಿನ ವಿಚಾರದಲ್ಲಿ ಯಾವ ಕಾರಣಕ್ಕೂ ಇಂತಹ ಕೃತ್ಯ ಹಿಂದೂ ಸಮಾಜ ಒಪ್ಪುವುದಿಲ್ಲ ಎಂದ ಅವರು, ಇದು ಅಪ್ರತ್ಯಕ್ಷ ವಾಗಿ ವಿಷ ಕೊಟ್ಟಿರುವ ಕೆಲಸ ಎಂದು ಟೀಕಿಸಿದರು. ಸರ್ಕಾರ ಬದಲಾದ ಕಾರಣಕ್ಕೆ ಈ ವಿಚಾರ ಹೊರಕ್ಕೆ ಬಂದಿದೆ. ತಿಮ್ಮಪ್ಪನ ಭಕ್ತರಿಗೆ ಇದರಿಂದ ಬಹಳಷ್ಟು ನೋವಾಗಿದೆ. ಕೇಂದ್ರ ಸರ್ಕಾರವೇ ಈ ಬಗ್ಗೆ ತನಿಖೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ