SHIVAMOGGA | MALENADUTODAY NEWS | Aug 21, 2024 ಮಲೆನಾಡು ಟುಡೆ
ಅಪರೂಪದ ಸುದ್ದಿ ಎನ್ನುವುದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ಪೊಲೀಸ್ ಸ್ಟೇಷನ್ ಒಂದರಲ್ಲಿ ಕೇರೆ ಹಾವು ಕಾಣಿಸಿಕೊಂಡಿದ್ದು, ಪೊಲೀಸರಿಗೂ ಕೆಲ ಕಾಲ ಆತಂಕ ಮೂಡಿಸಿದೆ ಘಟನೆಯೊಂದು ವರದಿಯಾಗಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ನುಗ್ಗಿದ ಕೇರೆ ಹಾವು
ಮಳೆಗಾಲದಲ್ಲಿ ಮಲೆನಾಡಿನಲ್ಲಿ ಹಾವುಗಳು ಸಹ ಸುದ್ದಿಯಲ್ಲಿರುತ್ತದೆ. ಕಾಳಿಂಗ ಸರ್ಪವೊಂದು ಶಾಲೆಯ ಬಿಸಿಯೂಟದ ಕೊಠಡಿಯ ಟೇಬಲ್ನಡಿ ಕುಳಿತು ಆತಂಕ ಸೃಷ್ಟಿಸಿದ ಘಟನೆ ಇವತ್ತು ಓದಿರುತ್ತೀರಿ. ಅದರ ಲಿಂಕ್ ಇಲ್ಲಿದೆ ಬಿಸಿಯೂಟಕ್ಕೆ ಬಂದ ಕಾಳಿಂಗ ಸರ್ಪ | ಸರ್ಕಾರಿ ಶಾಲೆಯ ಕೊಠಡಿಯಲ್ಲಿದ್ದ ಹಾವು ಸೆರೆಯಾಗಿದ್ದು ಹೇಗೆ ಗೊತ್ತಾ?

ಇದರೆ ಬೆನ್ನಲ್ಲೆ ಶಿವಮೊಗ್ಗ ಸಿಟಿಯಲ್ಲಿರುವ ಶಿವಮೊಗ್ಗ ಉಪವಿಭಾಗ ಬಿ ಡಿವೈಎಸ್ಪಿ ಕಚೇರಿಯು ಹೊಂದಿರುವ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇರೆ ಹಾವೊಂದು ಕಾಣಿಸಿಕೊಂಡಿತ್ತು. ಪೊಲೀಸ್ ಸಿಬ್ಬಂದಿಗಳ ಟೇಬಲ್ ಅಡಿಗಳಲ್ಲಿ ಓಡಾಡುತ್ತಿದ್ದ ಹಾವು, ಸಿಬ್ಬಂದಿಯಲ್ಲಿ ಆತಂಕವನ್ನು ಸಹ ಮೂಡಿಸಿತ್ತು.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಸುಮಾರು ನಾಲ್ಕು ಅಡಿ ಉದ್ದವಿದ್ದ ಹಾವನ್ನ ಕಂಡು ಪೊಲೀಸರು ಸಹ ಕ್ಷಣಕಾಲ ಆತಂಕಗೊಂಡಿದ್ದರು. ಆ ಬಳಿಕ ಸ್ನೇಕ್ ಕಿರಣ್ಗೆ ಫೋನಾಯಿಸಿದ್ದಾರೆ. ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಠಾಣೆಗೆ ಬಂದ ಸ್ನೇಕ್ ಕಿರಣ್ ಮತ್ತವರ ತಂಡ ಹಾವನ್ನ ಸುರಕ್ಷಿತವಾಗಿ ಹಿಡಿದಿದ್ದಾರೆ. ಆ ಬಳಿಕ ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಹಾವನ್ನ ಹಿಡಿದ ಸ್ನೇಕ್ ಕಿರಣ್ಗೆ malenadu today ಶಿವಮೊಗ್ಗ ಗ್ರಾಮಾಂತರ ಠಾಣೆ ಸಿಬ್ಬಂದಿ ಥ್ಯಾಂಕ್ಸ್ ಹೇಳಿದ್ದು,ಠಾಣಾಧಿಕಾರಿ ಸ್ನೇಕ್ ಕಿರಣ್ರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
-
ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ | ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ
-
ಜೋಗ್ಪಾಲ್ಸ್ ಗೆ ಹೋಗುವಾಗ ಇರಲಿ ಎಚ್ಚರ | ಪ್ರಯಾಣಿಕನ ಮೇಲೆಯೇ ಹರಿಯಿತು ಬಸ್ | ನಡೆದಿದ್ದೇನು?
-
Shikaripura | ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಲು ಯತ್ನ |
-
ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ | ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಏಳು ಪ್ರಮುಖ ಸೂಚನೆ
-
ಭದ್ರಾ ಭರ್ತಿ : ರೈತರ ಮೊಗದಲ್ಲಿ ಮಂದಹಾಸ | ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದೇನು?
-
ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ