SHIVAMOGGA | MALENADUTODAY NEWS
Sep 7, 2024 shimoga Fast news
ಶಿವಮೊಗ್ಗದಲ್ಲಿ ನಡೆದ ವಿವಿಧ ಘಟನೆಗಳ ಸಂಕ್ತಿಪ್ತ ವಿವರಗಳನ್ನ ನೀಡುವ ಮಲೆನಾಡು ಟುಡೆ ಸುದ್ದಿವಿಭಾಗದ ಇವತ್ತಿನ shimoga Fast news ವರದಿ ಹೀಗಿದೆ.
ಶ್ರೀಗಂಧ ಮರ ಕಡಿದವನು ಅರೆಸ್ಟ್
ಶಿವಮೊಗ್ಗದ ಕುಂಸಿಯಲ್ಲಿ ಅರಣ್ಯಾಧಿಕಾರಿಗಳು ಶ್ರೀಗಂಧ ಮರವನ್ನ ಕಡಿದ ಆರೋಪದ ಅಡಿಯಲ್ಲಿ ಓರ್ವನನ್ನ ಅರೆಸ್ಟ್ ಮಾಡಿದ್ದಾರೆ. ಹಣಗೆರೆಯ ವನ್ಯಜೀವಿ ವಲಯದ ಅಧಿಕಾರಿಗಳು ಈ ಸಂಬಂಧ ಕಾರ್ಯಾಚರಣೆ ನಡೆಸಿ ಒಬ್ಬನನ್ನ ಅರೆಸ್ಟ್ ಮಾಡಿದ್ದಾರೆ. ಪ್ರಕರಣದಲ್ಲಿ ಉಳಿದ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ
ಮಂಡ್ಲಿಯಲ್ಲಿ 29 ಅಡಿಯ ಕಲಾಕೃತಿ
ಇನ್ನೂ ಗಣೇಶೋತ್ಸವದ ಹಿನ್ನೆಲೆಯಲ್ಲಿ ಶಿವಮೊಗ್ಗದ ಶಿವಪ್ಪನಾಯಕ ವೃತ್ತದಬಳಿ ನಿರ್ಮಾಣವಾಗಲಿರುವ ಕಲಾಕೃತಿಯ ಬಗ್ಗೆ ಕುತೂಹಲ ಮೂಡಿದೆ. ಇದರ ನಡುವೆ ಇತ್ತ ಮಂಡ್ಲಿಯಲ್ಲಿ ಇವತ್ತು 29 ಅಡಿಯ ಹನುಮಾನ್ ಮೂರ್ತಿ ನಿರ್ಮಾಣವಾಗಲಿದೆ. ಶ್ರೀರಾಮಲಕ್ಷ್ಮಣರನ್ನ ಹೆಗಲ ಮೇಲೆ ಕೂರಿಸಿಕೊಂಡು ಹನುಮಾನ್ ಮೂರ್ತಿಯ ಕಲಾಕೃತಿ ರಚನೆ ಅಂತಿಮ ಹಂತಕ್ಕೆ ಬಂದಿದ್ದು, ಇವತ್ತು ಕಲಾಕೃತಿ ಅನಾವರಣಗೊಳ್ಳಲಿದೆ

ಗ್ರಾಮಲೆಕ್ಕಾಧಿಕಾರಿ ನಾಪತ್ತೆ
ಸೊರಬ ತಾಲೂಕು ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ. ಉಮೇಶ ಎಂಬ ಸರ್ಕಾರಿ ನೌಕರರೊಬ್ಬರು ಕಳೆದ ಸೆಪ್ಟೆಂಬರ್ ನಾಲ್ಕರಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಗಂಜೇನಹಳ್ಳಿ ಗ್ರಾಮದ ಉಮೇಶ್ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಮತ್ತೆ ಮನೆಗೆ ವಾಪಸ್ ಆಗಿಲ್ಲ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ