SHIVAMOGGA | MALENADUTODAY NEWS | Aug 12, 2024 ಮಲೆನಾಡು ಟುಡೆ
ಸಕ್ರೇಬೈಲು ಆನೆ ಬಿಡಾರದ ಆನೆಯೊಂದಕ್ಕೆ ವಿಶ್ವ ಆನೆ ದಿನಾಚರಣೆಯ ಹಿನ್ನೆಲೆಯಲ್ಲಿ ನಾಮಕರಣ ಮಾಡಲಾಗಿದೆ. ಶಾಸ್ತ್ರೋಕ್ತವಾಗಿ ಆನೆಗೆ ಪೂಜೆ ಸಲ್ಲಿಸಿ, ಆನೆಯೊಂದಕ್ಕೆ ಅಶ್ವತ್ಥಾಮ ಎಂದು ಹೆಸರನ್ನ ಇಡಲಾಗಿದೆ.
ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆ (Chikkamagaluru district)ಮೂಡಿಗೆರೆ ತಾಲ್ಲೂಕು ಆಲ್ದೂರು ಸಮೀಪ ಜನರಿಗೆ ತೊಂದರೆ ಕೊಡುತ್ತಿದ್ದ ಆನೆಯನ್ನ ಅರಣ್ಯ ಇಲಾಖೆಯ ಕಾರ್ಯಾಚರಣೆ ನಡೆಸಿ ಹಿಡಿದಿದ್ದರು. 2023 ರ ನವೆಂಬರ್ 16 ರಂದು ಕಾಡಾನೆಯನ್ನು ಸಕ್ರೆಬೈಲ್ ಆನೆ ಬಿಡಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಹಲವು ತಿಂಗಳ ಕಾಲ ಪಳಗಿಸಲಾಗಿತ್ತು.
ಇದೀಗ ಇವತ್ತು ವಿಶ್ವ ಆನೆ ದಿನಾಚರಣೆ ಹಿನ್ನೆಲೆಯಲ್ಲಿ ಅರಣ್ಯ ವನ್ಯಜೀವಿ ಇಲಾಖೆಯ ಡಿಎಫ್ಒ ಪ್ರಸನ್ನ ಕೃಷ್ಣ ಪಟಗಾರ್ ನೇತೃತ್ವದಲ್ಲಿ ಆನೆಗೆ ನಾಮಕರಣವನ್ನು ನಡೆಸಲಾಗಿದೆ.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ