ನಾಳೆ ನಗರದ ಕೆಲವೆಡೆ ವಾಹಾನ ಸಂಚಾರ ಮಾರ್ಗ ಬದಲಾವಣೆ : ಎಲ್ಲಿ ಹಾಗೂ ಕಾರಣವೇನು

prathapa thirthahalli
Prathapa thirthahalli - content producer

route change ಆಗಸ್ಟ್​ 16 ರಂದು ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆಡಿಕೃತ್ತಿಕೆ ಹರೋಹರ  ಜಾತ್ರೆ ನಡೆಯುತ್ತಿದೆ. ಆಹಿನ್ನೆಲೆ ಜಾತ್ರೆಯ  ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಲಿರುವುದರಿಂದ  ಸಂಚಾರಕ್ಕೆ ತೊಡಕಲು ಉಂಟಾಗಲಿದ್ದು ನಗರದ ಕೆಲವೆಡೆ ವಾಹನಗಳ ಸಂಚಾರ ನಿಷೇಧ-ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.  ಈ ಸಂಚಾರ ಬದಲಾವಣೆಗಳು ಬೆಳಿಗ್ಗೆ 6:00 ರಿಂದ ರಾತ್ರಿ 10:00 ರವರೆಗೆ ಜಾರಿಯಲ್ಲಿರುತ್ತವೆ. 

route change ಎಲ್ಲೆಲ್ಲಿ ಮಾರ್ಗ ಬದಲಾವಣೆ ಆಗಲಿದೆ.

ಬೆಂಗಳೂರು, ಭದ್ರಾವತಿ, ಮತ್ತು ಎನ್.ಆರ್.ಪುರದಿಂದ ಬರುವ ವಾಹನಗಳು: ಎಲ್ಲಾ ಭಾರೀ ವಾಹನಗಳು, ಬಸ್‌ಗಳು ಮತ್ತು ಕಾರುಗಳು ಎಂ.ಆರ್.ಎಸ್. ಸರ್ಕಲ್‌ನಿಂದ ಬೈಪಾಸ್ ರಸ್ತೆಯ ಮೂಲಕ ಸಂಚರಿಸಬೇಕು.

- Advertisement -

ಶಿವಮೊಗ್ಗದಿಂದ ಬೆಂಗಳೂರು, ಭದ್ರಾವತಿ, ಮತ್ತು ಚಿತ್ರದುರ್ಗಕ್ಕೆ ಹೋಗುವ ವಾಹನಗಳು: ಎಲ್ಲಾ ಭಾರೀ ವಾಹನಗಳು, ಬಸ್‌ಗಳು ಮತ್ತು ಕಾರುಗಳು ಬೈಪಾಸ್ ರಸ್ತೆ ಮತ್ತು ಎಂ.ಆರ್.ಎಸ್. ಸರ್ಕಲ್ ಮೂಲಕ ಹೋಗಬೇಕು.

ಚಿತ್ರದುರ್ಗ ಮತ್ತು ಹೊಳೆಹೊನ್ನೂರಿನಿಂದ ಬರುವ/ಹೋಗುವ ಭಾರೀ ವಾಹನಗಳು ಮತ್ತು ಬಸ್‌ಗಳು: ಈ ವಾಹನಗಳು ಭದ್ರಾವತಿ ಮಾರ್ಗವಾಗಿ, ಬೈಪಾಸ್ ರಸ್ತೆಯ ಮೂಲಕ ಶಿವಮೊಗ್ಗ ನಗರಕ್ಕೆ ಪ್ರವೇಶಿಸಬೇಕು ಮತ್ತು ಹೊರ ಹೋಗಬೇಕು.

ಚಿತ್ರದುರ್ಗ ಮತ್ತು ಹೊಳೆಹೊನ್ನೂರಿನಿಂದ ಬರುವ ಲಘು ವಾಹನಗಳು (ಕಾರುಗಳು, ದ್ವಿಚಕ್ರ ವಾಹನಗಳು): ಈ ವಾಹನಗಳು ಪಿಳ್ಳಂಗಿರಿ ಕ್ರಾಸ್ ಅಥವಾ ಹೊಳಬೆನವಳ್ಳಿ ತಾಂಡ ಕ್ರಾಸ್‌ನಿಂದ ಯಲವಟ್ಟಿ ಮಾರ್ಗವಾಗಿ, ಮಲವಗೊಪ್ಪದ ಮೂಲಕ ಬಿ.ಹೆಚ್. ರಸ್ತೆ ಸೇರಿ, ಬೈಪಾಸ್ ರಸ್ತೆಯ ಮೂಲಕ ಶಿವಮೊಗ್ಗ ನಗರಕ್ಕೆ ಹೋಗಬೇಕು.

ಶಿವಮೊಗ್ಗದಿಂದ ಹೊಳೆಹೊನ್ನೂರು ಮತ್ತು ಚಿತ್ರದುರ್ಗಕ್ಕೆ ಹೋಗುವ ಲಘು ವಾಹನಗಳು: ಈ ವಾಹನಗಳು ಬೈಪಾಸ್ ರಸ್ತೆಯ ಮೂಲಕ ಮಲವಗೊಪ್ಪದ ಯಲವಟ್ಟಿ ಕ್ರಾಸ್ ತಲುಪಿ, ಅಲ್ಲಿಂದ ಯಲವಟ್ಟಿ ಮಾರ್ಗವಾಗಿ ಪಿಳ್ಳಂಗಿರಿ ಕ್ರಾಸ್ ಮೂಲಕ ಹೊಳೆಹೊನ್ನೂರು ಮತ್ತು ಚಿತ್ರದುರ್ಗಕ್ಕೆ ಹೋಗಬೇಕು.

ಹರಿಹರ ಮತ್ತು ಹೊನ್ನಾಳಿಯಿಂದ ಬರುವ ಭಾರೀ ವಾಹನಗಳು ಮತ್ತು ಬಸ್‌ಗಳು: ಈ ವಾಹನಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಕೆ.ಇ.ಬಿ. ಸರ್ಕಲ್, ಉಷಾ ನರ್ಸಿಂಗ್ ಹೋಂ ಸರ್ಕಲ್, ಮತ್ತು 100 ಅಡಿ ರಸ್ತೆ, ವಿನೋಬನಗರ ಮಾರ್ಗವಾಗಿ ಸಂಚರಿಸಬೇಕು.

ಹೊಳೆಹೊನ್ನೂರು ಸರ್ಕಲ್‌ನಿಂದ ಗುರುಪುರದ ಯಲವಟ್ಟಿ ಕ್ರಾಸ್‌ವರೆಗೆ ಸಾರ್ವಜನಿಕರ ವಾಹನಗಳು ಓಡಾಡದಂತೆ ಸಂಚಾರ ನಿಷೇಧ ಮಾಡಲಾಗಿದೆ.

route change
route change
Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
1 Comment

Leave a Reply

Your email address will not be published. Required fields are marked *