ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10 2025: ಶಿವಮೊಗ್ಗದಲ್ಲಿ ನಾಳೆ ಇಷ್ಟಲಿಂಗ ಪೂಜೆ, ಧರ್ಮಸಭೆ ಆಯೋಜನೆ: ಕೇದಾರ ಪೀಠದ ಶ್ರೀಗಳ ಆಗಮನ :
ಶಿವಶಕ್ತಿ ಸಮಾಜದ ವತಿಯಿಂದ ನಾಳೆ ಅಂದರೆ ಅಕ್ಟೋಬರ್ 11 ರಂದು ಇಷ್ಟಲಿಂಗ ಪೂಜೆ ಮತ್ತು ಮಹತ್ವದ ಧರ್ಮಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಕೇದಾರ ಪೀಠದ ಭೀಮಾಶಂಕರ ಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಆಗಮಿಸಲಿದ್ದಾರೆ. ಈ ಬಗ್ಗೆ ನಿನ್ನೆ ದಿನ ಸುದ್ದಿಗೋಷ್ಟಿ ನಡೆಸಿ ಸಮಾಜದ ನಿರ್ದೇಶಕರಾದ ಬಳ್ಳೇಕೆರೆ ಸಂತೋಷ್ ಮಾಹಿತಿ ನೀಡಿದರು.
ಇಷ್ಟಲಿಂಗ ಪೂಜೆ, ಧರ್ಮಸಭೆ
- ಎನ್.ಟಿ. ರಸ್ತೆಯಲ್ಲಿರುವ ಶಿವಶಕ್ತಿ ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಎಚ್. ಪಾರ್ವತಮ್ಮರವರ ಖಾಸಗಿ ನಿವಾಸದಲ್ಲಿ ಬೆಳಿಗ್ಗೆ 8 ಗಂಟೆಗೆ ಇಷ್ಟಲಿಂಗ ಪೂಜೆ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಯಿಂದ ಧರ್ಮಸಭೆ ನಡೆಯಲಿದೆ.
- ಕೇದಾರ ಸ್ವಾಮೀಜಿಗಳಲ್ಲದೆ, ಇತರ ಮಠಾಧಿಪತಿಗಳು ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ಬಾಳೆಹೊನ್ನೂರು ಶಾಖಾಮಠದ ಎಡೆಯೂರು ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ.
- ಕೇದಾರ ಮಠದ ಸ್ವಾಮೀಜಿಗಳು ಇಂದು ಮಧ್ಯಾಹ್ನ 4 ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಅವರನ್ನು ಶಿವಪ್ಪನಾಯಕ ವೃತ್ತದಿಂದಆನೆಯ ಮೇಲೆ ಮೆರವಣಿಗೆಯಲ್ಲಿ ಕರೆದೊಯ್ಯಲು ಸಿದ್ಧತೆ ನಡೆಸಲಾಗಿದೆ.
- ಆನೆ ಮೇಲೆ ಮೆರವಣಿಗಾಗಿ ಬೀರನಕೆರೆ ಮಠದವರಿಂದ ಆನೆಯ ವ್ಯವಸ್ಥೆ ಮಾಡಲಾಗಿದೆ, ಅರಣ್ಯ ಇಲಾಖೆಯಿಂದ ಅಗತ್ಯವಿರುವ ಅನುಮತಿಗ ಪಡೆದು ಅಂಬಾರಿ ಮೆರವಣಿಗೆಯನ್ನು ಆಯೋಜಿಸಲಾಗುತ್ತಿದೆ

Kedara Peetha Swamiji Shivamogga visit to Grace Ishtalinga Pooja
Kedara Peetha Swamiji Shivamogga visit, Dharma Sabha Shivamogga, Ishtalinga Pooja Oct 11, Bhimashankaralinga Shivacharya Swamiji, Shivashakti Samaj Shivamogga, Kedara Swamiji Programme details, Attend Dharma Sabha Shivamogga, Religious event Shivamogga, Swamiji arrival procession, ಕೇದಾರ ಸ್ವಾಮೀಜಿ ಶಿವಮೊಗ್ಗ, ಇಷ್ಟಲಿಂಗ ಪೂಜೆ, ಧರ್ಮಸಭೆ, ಶಿವಶಕ್ತಿ ಸಮಾಜ, ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ, ಮಠಾಧೀಶರ ಸಮಾಗಮ, ಆನೆ ಮೆರವಣಿಗೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!