SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 26, 2024
ಪ್ಲೈಓವರ್ ಕೆಳಗೆ ಹುಷಾರು
ಶಿವಮೊಗ್ಗ ಹೊನ್ನಾಳಿ ರಸ್ತೆಯ ಪ್ಲೈ ಓವರ್ ಕೆಳಗೆ ಮತ್ತೊಂದು ಕ್ರೈಂ ನಡೆದಿದೆ. ಈ ಭಾಗದಲ್ಲಿ ಆಗಾಗ ದರೋಡೆ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅಪರಿಚಿತ ವ್ಯಕ್ತಿಗಳು ಇಲ್ಲಿ ಓಡಾಡುವುದನ್ನ ಗಮನಿಸುವ ದುಷ್ಕರ್ಮಿಗಳು ಅವರನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹೊನ್ನಾಳಿ ರಸ್ತೆಯ ಪ್ಲೈಓವರ್ ಇಳಿದು ಮುಂದಕ್ಕೆ ಸಾಗುತ್ತಿದ್ದ ವಾಹನ ಸವಾರನ್ನ ತಡೆದು ಅವರಿಂದ ಮೊಬೈಲ್ ಕಿತ್ತುಕೊಂಡು ದರೋಡೆಗೆ ಯತ್ನಿಸಿ ಹಲ್ಲೆ ಮಾಡಿ ಬೆದರಿಕೆ ಹಾಕಿದ ಪ್ರಕರಣವೊಂದು ನಡೆದಿದೆ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೈಸೂರು ನಲ್ಲಿ ಶಿವಮೊಗ್ಗದವರಿಗೆ ನೆರವು
ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ (ಕೆಆರ್ಎಸ್) ನಲ್ಲಿರುವ ಬೃಂದಾವನ ಗಾರ್ಡನ್ನಲ್ಲಿ ಫೋಟೋ ತೆಗೆದುಕೊಳ್ಳುವ ಶಿವಮೊಗ್ಗದ ಪ್ರವಾಸಿಗರು ತಮ್ಮ ಬ್ಯಾಗ್ ಅಲ್ಲಿಯೇ ಬಿಟ್ಟು ಮೆರತು ಹೋಗಿದ್ದರು. ಅಲ್ಲಿನ ಗ್ರಿಲ್ವೊಂದಕ್ಕೆ ನೇತು ಹಾಕಿದ್ದ ಬ್ಯಾಗ್ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯ ಚಿನ್ನಾಭರಣಗಳಿದ್ದವು. ಆದರೆ ಬ್ಯಾಗ್ ಮೆರೆತ ಕುಟುಂಬ ಅಲ್ಲಿಂದ ಒಂದುವರೆ ಕಿಲೋಮೀಟರ್ ದೂರು ಹೋಗಿತ್ತು. ಆ ಬಳಿಕ ನೆನಪಾಗಿ ಬ್ಯಾಗ್ ಇಟ್ಟ ಸ್ಥಳಕ್ಕೆ ವಾಪಸ್ ಬಂದಿದ್ದಾರೆ. ಅಲ್ಲಿ ಬ್ಯಾಗ್ ಇಲ್ಲದಿರುವುದನ್ನ ಗಮನಿಸಿ ಸುತ್ತಮುತ್ತಾ ವಿಚಾರಿಸಿದ್ದಾರೆ. ಈ ನಡುವೆ ಅದೃಷ್ಟಕ್ಕೆ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್ಐಎಸ್ಎಫ್) ಇಬ್ಬರು ಸಿಬ್ಬಂದಿ ಬ್ಯಾಗ್ ಇರುವುದು ಗಮನಿಸಿ ಅದನ್ನ ಸುರಕ್ಷಿತವಾಗಿ ಎತ್ತಿಟ್ಟಿದ್ದರು. ಆ ಬಳಿಕ ವಿಚಾರಣೆ ನಡೆಸಿ ಪ್ರವಾಸಿಗರಿಗೆ ಬ್ಯಾಗ್ ವಾಪಸ್ ನೀಡಿದ್ದಾರೆ
ಸಾಗರದಲ್ಲಿ ಹುಬ್ಬಳ್ಳಿ ಮಂದಿ ಅರೆಸ್ಟ್
ಸಾಗರ ಟೌನ್ನಲ್ಲಿ ದಿನಾಂಕ: 26-08-2024 ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಇಲ್ಲಿನ ಪೊಲೀಸರು ಬೇಧಿಸಿದ್ದಾರೆ.ಪರಮೇಶ್ವರ್ ಎಂಬವರು ಸಾಗರ ಪೇಟೆಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಅವರ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ದೂರು ದಾಖಲಿಸಿದ್ದರು. ಇದೀಗ ಸಾಗರ ಟೌನ್ ಪೊಲೀಸರು ಪ್ರಕರಣ ಬೇಧಿಸಿದ್ದು ಪರಶುರಾಮ ಕ್ಯಾರಕಟ್ಟಿ, 32 ವರ್ಷ ಸೆಟಲ್ಮೆಂಟ್ ಕಾಲೋನಿ, ಗಂಗಾಧರ ನಗರ, ಹುಬ್ಬಳ್ಳಿ ಧಾರವಾಡ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ 1,00,000/- ರೂ ನಗದು ಹಣವನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. ಅಲ್ಲದೆ ಹಣವನ್ನ ವಾರಸ್ಸುದಾರರಿಗೆ ವಾಪಸ್ ನೀಡಿದ್ದಾರೆ.
