SHIVAMOGGA | MALENADUTODAY NEWS | Aug 13, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆ ಭದ್ರಾವತಿ ಪೊಲೀಸರು ದರೋಡೆ ಪ್ರಕರಣವೊಂದನ್ನ ಬೇಧಿಸಿದ್ದಾರೆ. ಇಲ್ಲಿನ ನ್ಯೂಟೌನ್ ಠಾಣೆ ಪೊಲೀಸರು,(New Town Police) ಇಬ್ಬರು ಆರೋಪಿಗಳನ್ನು ಬಂಧಿಸಿ ₹1.5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
New Town Police
ಭದ್ರಾವತಿ ನಗರದಲ್ಲಿ ಕಳೆದ ಆಗಸ್ಟ್ 9 ರಂದು ಮುರುಳೀಧರ್ (64) ಎಂಬುವರು ಶಾರದಾ ಮಂದಿರದ ಬಳಿ ನಿಂತಿದ್ದರು. ಈ ವೇಳೆ ಬೈಕ್ನಲ್ಲಿ ಬಂದಿದ್ದ 4 ರಿಂದ 5 ಜನ ಅವರನ್ನು ಹೆದರಿಸಿ ಉಂಗುರ, ಚಿನ್ನದ ಸರ, ನಗದು ಹಾಗೂ ಇತರ ವಸ್ತುಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು.
ತುಂಬಿದ ಭದ್ರಾ | ಎಷ್ಟಿದೆ ಡ್ಯಾಮ್ನಲ್ಲಿ ನೀರು | ಭದ್ರಾ ಜಲಾಶಯದ ಇವತ್ತಿನ ನೀರಿನ ಮಟ್ಟ

ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನನ್ವಯ ದರೋಡೆ ಕೇಸ್ ಫಿಟ್ ಆಗಿತ್ತು. ಪ್ರಕರಣ ಸಂಬಂಧ ಭದ್ರಾವತಿ ನಗರ ವೃತ್ತದ ಸಿಪಿಐ ನೇತೃತ್ವದ ಟೀಂ ರಚನೆ ಮಾಡಲಾಗಿತ್ತು
ಭದ್ರಾವತಿ ಪೊಲೀಸ್
ಇದೀಗ ಆರೋಪಿಗಳನ್ನ ಬಂಧಿಸಿರುವ ಪೊಲೀಸರು, ಬಂಧಿತರಿಂದ ₹1.59 ಲಕ್ಷ ಮೌಲ್ಯದ 24.5 ಗ್ರಾಂ ತೂಕದ ಚಿನ್ನದ ಸರ, ಉಂಗುರ ಹಾಗೂ ಕೃತ್ಯಕ್ಕೆ ಬಳಸಿದ್ದ ಅಂದಾಜು ₹35,000 ಮೌಲ್ಯದ ಬೈಕ್ ಜಪ್ತಿ ಮಾಡಿದ್ದಾರೆ.
ಬಂಧಿತರು
ಭದ್ರಾವತಿ ನಗರದ ಮೋಮಿನ್ ಮೊಹಲ್ಲಾ ಹಾಗೂ ಅನ್ವರ್ ಕಾಲೊನಿ ನಿವಾಸಿಗಳಾದ ಜಬೀವುಲ್ಲಾ ಯಾನೆ ಮಲ್ಲಿ (23) ಮತ್ತು ಮಹಮದ್ ಗೌಸ್ ಯಾನೆ ಗುಂಡಾ (24)
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ