22 ವರ್ಷಗಳಲ್ಲಿ ಸಿಗದ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ
22 ವರ್ಷಗಳಲ್ಲಿ ಸಿಗದ ನಕ್ಸಲ್ ನಾಯಕ
22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರೀಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ (bg krishnamurthy) 2021 ರ ಡಿಸೆಂಬರ್ ತಿಂಗಳು ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಆದ್ರೆ ಅದುವರೆಗೂ ಬಿ.ಜಿ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ ಎಂಬುದೇ ಗೊತ್ತಿರಲಿಲ್ಲ. ಕೇರಳ ಪೊಲೀಸರಿಗೆ ಬಿ.ಜಿ.ಕೆ ಬಂಧನಕ್ಕೂ ಮುನ್ನಾ ನಕ್ಸಲ್ ವಿಚಾರದಲ್ಲಿ ದೊಡ್ಡ ಲೀಡ್ ಸಿಕ್ಕಿತ್ತು. ಲಿಜೇಶ್ ಅಲಿಯಾಸ್ ರಾಮು ಎಂಬಾತ 2021 ರ ಅಕ್ಟೋಬರ್ ಅಂತ್ಯದಲ್ಲಿ ಕೇರಳ ಪೊಲೀಸರ ಮುಂದೆ ಶರಣಾಗಿದ್ದ. ಅಲ್ಲದೆ ರಾಘವೇಂದ್ರ ಎಂಬಾತನನ್ನ ಕೇರಳ ಪೊಲೀಸರು ಅದಕ್ಕೂ ಎರಡು ದಿನದ ಹಿಂದಷ್ಟೆ ಬಂಧಿಸಿದ್ದರು. ಇವರಿಬ್ಬರ ವಿಚಾರಣೆ ವೇಳೆ ಹೇಳಿಕೊಂಡಂತೆ, ಕಬಿನಿ ದಳದಲ್ಲಿ ಡೆಪ್ಯೂಟಿ ಕಮಾಂಡರ್ ಆಗಿದ್ದ ಲಿಜೇಶ್ ಅಲಿಯಾಸ್ ರಾಮು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ. ಇನ್ನೂ ಕಳೆದ ಕೆಲವು ವರ್ಷಗಳಿಂದ ನಕ್ಸಲ್ ಗುಂಪಿನ ಕೊರಿಯರ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಘವೇಂದ್ರ ಬಿಜಿಕೆ ಹಾಗೂ ಸಾವಿತ್ರಿ ಸೇರಿದಂತೆ ಹಲವರ ಬಗ್ಗೆ ಮಾಹಿತಿ ನೀಡಿದ್ದ.
ಮೈಸೂರು ಊಟಿ ಮಾರ್ಗದಲ್ಲಿ ನಿಶ್ಚಿಂತೆಯಾಗಿ ಓಡಾಡಿಕೊಂಡಿದ್ದ ಬಿಜಿಕೆ
ಬಿ.ಜಿ ಕೃಷ್ಣಮೂರ್ತಿ ಕೇರಳದ ಗಡಿಭಾಗದಲ್ಲಿದ್ದರೂ. ಮೈಸೂರಿನಲ್ಲಿಯೇ ಹೆಚ್ಚು ಓಡಾಡಿಕೊಂಡಿದ್ದ ಎಂಬುದು ಮೂಲಗಳಿಂದ ತಿಳಿದು ಬಂದಿದೆ.ಮೈಸೂರಿನಲ್ಲಿ ಸಾರ್ವಜನಿಕವಾಗಿ ಓಡಾಡಿಕೊಂಡಿದ್ದರೂ ಪೊಲೀಸರಿಗೆ ಈತನೇ ಬಿಜಿಕೆ ಎಂದು ಗುರುತಿಸಲು ಸಾಧ್ಯವಾಗಿರಲಿಲ್ಲ. ಪೊಲೀಸರಿಗೆ ಶರಣಾದ ನಕ್ಸಲರು ಯಾವಾಗ ಮಾಹಿತಿದಾರರಾಗಿ ಬದಲಾಗುತ್ತಾರೋ..ಆಗ ಬಿಜಿಕೆಯ ಗೃಹಚಾರವೇ ಕೆಟ್ಟುಹೋಗಿತ್ತು. ನಕ್ಸಲ್ ಸಂಘಟನೆಗೆ ಅದು ದೊಡ್ಡ ಸೆಟ್ ಬ್ಯಾಕ್ ಕೂಡ ಆಗಿ ಹೋಯ್ತು. ಶರಣಾದ ನಕ್ಸಲರು ನೀಡಿದ ಮಾಹಿತಿ ಕೇರಳ ಪೊಲೀಸರಿದೆ ದೊಡ್ಡ ಲೀಡ್ ಸಿಕ್ಕಂತಾಯಿತು. ಆಗ ಕೇರಳ ಪೊಲೀಸರು ಬಿಜಿಕೆಗೆ ಬಲೆ ಬೀಸಲು ಖೆಡ್ಡಾ ತೋಡಿದ್ರು. ಅಂದುಕೊಂಡಂತೆ ಅಂದು ಮೈಸೂರು ಕೇರಳ ಗಡಿಭಾಗದ ಟ್ರೈ ಜಂಕ್ಷನ್ ಮಾರ್ಗವಾಗಿ ಬಿ.ಜಿ ಕೃಷ್ಣಮೂರ್ತಿ ಕಾರಿನಲ್ಲಿ ಪಯಣಿಸುತ್ತಿರುವ ಮಾಹಿತಿ ಕೇರಳ ವೈನಾಡು ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ಅಲರ್ಟ್ ಆದ ಪೊಲೀಸರು ಕಾರ್ಯತಂತ್ರ ರೂಪಿಸಿದರು. ಮಾರುವೇಶದಲ್ಲಿ ಶಸ್ತ್ರಸಜ್ಜಿತರಾದರೂ, ನಿರಾಯುಧರಂತೆ ಕುಟುಂಬದವರು ಪ್ರಯಾಣಕ್ಕೆ ಹೋಗುವಂತೆ ರಸ್ತೆಯಲ್ಲಿ ಬಿಜಿಕೆಯನ್ನು ಹಿಂಬಾಲಿಸಿದರು.ಮುಂದೆ ಕಾರಿನಲ್ಲಿ ಸಾಗುತ್ತಿದ್ದ ಬಿಜಿಕೆ ಕಾರು ಇದ್ದಕ್ಕಿದ್ದ ಹಾಗೆ ಕೈ ಕೆಟ್ಟಿದೆ. ಆಗ ಬಿಜಿಕೆ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ದಾರಿಹೋಕರ ಬಳಿ ಡ್ರಾಪ್ ಕೇಳುತ್ತಿದ್ದ. ಹಿಂಬದಿಯಿಂದ ಮಾರುವೇಶದಲ್ಲಿ ಫಾಲೋ ಮಾಡಿಕೊಂಡ ಬಂದ ಪೊಲೀಸರು ವಾಹನ ಚಲಾಯಿಸಿಕೊಂಡು ಬಿಜಿಕೆ ಸನಿಹವೇ ಬಂದರು. ಬಿಜಿಕೆ ಆ ಮಾರುವೇಶಧ ಪೊಲೀಸರಿಗೂ ಕೈ ಮಾಡಿ ನಿಲ್ಲಿಸುವಂತೆ ಮನವಿ ಮಾಡಿದ. ಪೊಲೀಸರು ಬಿಜಿಕೆ ಸಮಸ್ಯೆ ತಿಳಿಯುವ ನೆಪದಲ್ಲಿ ಡ್ರಾಪ್ ಮಾಡುವುದಾಗಿ ಕಾರು ಹತ್ತಿಸಿಕೊಂಡಿದ್ದಾರೆ ಅಷ್ಟೆ. ಆದ್ರೆ ಕಾರಿನಲ್ಲಿ ಸಾಗುತ್ತಿದ್ದಾಗಲೇ ಪೊಲೀಸರು ಗನ್ ಟ್ರಿಗ್ಗರ್ ಒತ್ತಿದಾಗಲೇ ನಾನು ಅಂದರ್ ಆಗಿದ್ದೇನೆ ಎಂದು ಬಿಜಿಕೆಗೆ ಗೊತ್ತಾಗಿದೆ.
ಸಾವನ್ನಪ್ಪಿದ್ದಾಳೆ ಎಂದವಳು, ತಮಿಳುನಾಡು ಪೊಲೀಸರಿಗೆ ಶರಣಾಗಿದ್ದಳು
2010 ರಲ್ಲಿ ಪ್ರಭಾ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು
2010 ರಲ್ಲಿ ನಕ್ಸಲ್ ಪ್ರಭಾ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಗ್ರಾಮದ ಮುಖಂಡರೊಬ್ಬರಿಗೆ ಪ್ರಭಾ ಸಾವನ್ನಪ್ಪಿದ್ದಾಳೆ ಆಕೆಗೆ ಶೃದ್ದಾಂಜಲಿ ಅರ್ಪಿಸಿ ಎಂದು ದೂರವಾಣಿ ಕರೆ ಬಂದಿತ್ತು. ಹೀಗಾಗಿ ಅಂದು ಗ್ರಾಮಸ್ಥರೆಲ್ಲಾ ಪ್ರಭಾ ಮನೆ ಮುಂದೆ ಜಮಾಯಿಸಿದ್ದರು. ಆದರೆ ಪೊಲೀಸರು ಪ್ರಭಾ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಆದರೆ ಆಕೆಯ ಶವ ಸಿಗದೆ ಡೆತ್ ಡಿಕ್ಲೇರ್ ಮಾಡಲು ಸಾಧ್ಯವಿಲ್ಲ ಎಂದು ಅಂದಿನ ಎಸ್ಪಿ ಮುರುಗನ್ ಹೇಳಿದ್ದರು. ಆದರೆ ನಕ್ಸಲ್ ಪ್ರಭಾ ಕೇರಳದಲ್ಲಿ ನಕ್ಸಲ್ ಸಂಘಟನೆಯಲ್ಲಿ ಸಕ್ರೀಯಳಾಗಿರುವ ಬಗ್ಗೆ ಆನಂತರದ ವರ್ಷಗಳಲ್ಲಿ ಪೊಲೀಸರಿಗೆ ಮಾಹಿತಿ ದಟ್ಟವಾಗಿ ಸಿಕ್ಕಿತ್ತು. ಈ ಮಧ್ಯೆ ಬಿ.ಜಿ ಕೃಷ್ಣಮೂರ್ತಿ ಸಾವಿತ್ರಿ ಕೇರಳ ಪೊಲೀಸರಿಂದ ಬಂಧನಕ್ಕೊಳಗಾದ ಒಂದು ತಿಂಗಳಲ್ಲಿ ಪ್ರಭಾ ತಮಿಳು ನಾಡು ಪೊಲೀಸರಿಗೆ ಶರಣಾಗಿದ್ದಳು. ಇದು ಆ ಕಾಲಕ್ಕೆ ಹಾಗೂ ಮಲೆನಾಡಿನ ಮೇನ್ ಸ್ಟ್ರೀಮ್ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.