SHIVAMOGGA | MALENADUTODAY NEWS | Apr 25, 2024
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕುಂಕುಮ ವಿಚಾರ ವ್ಯಾಪಕ ಸದ್ದು ಮಾಡುತ್ತಿದೆ. ಹಣೆಗೆ ಹಚ್ಚಿದ್ದ ಕುಂಕಮವನ್ನ ಗೀತಾ ಶಿವರಾಜಕುಮಾರ್ ಹಾಗೂ ಶಿವರಾಜಕುಮಾರ್ ಅಳಿಸಿದ್ದರು ಎಂಬಂತ ವಿಡಿಯೋವೊಂದು ಹರಿದಾಡಿತ್ತು ಮತ್ತು ಇದನ್ನ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪರವರು ಟೀಕಿಸಿದ್ದರು.. ಇದಕ್ಕೀಗ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಉತ್ತರಿಸಿದ್ದಾರೆ.
ಹಣೆಗೆ ಕುಂಕುಮ ಇಡುವ ಸಂಸ್ಕೃತಿಯನ್ನು ಟೀಕಾಕಾರರಿಂದ ಕಲಿಯಬೇಕಿಲ್ಲ. ವಿಡಿಯೊಗಳನ್ನು ತಿರುಚಿ ಅಪಪ್ರಚಾರ ನಡೆಸುವ ಮೊದಲು ಪ್ರಜ್ಞಾವಂತಿಕೆ ಇರಬೇಕು ಎಂದಿರುವ ಅವರು ಮುಸ್ಲಿಂ ಮತದಾರರ ಓಲೈಕೆಗೆ ಹಣೆಯಲ್ಲಿದ್ದ ಕುಂಕುಮ ಅಳಿಸಿಕೊಂಡು ಪ್ರಚಾರ ಸಭೆಯಲ್ಲಿ ಗೀತಾ ಶಿವರಾಜಕುಮಾರ್ ಪಾಲ್ಗೊಂಡಿದ್ದರೆಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ ಬಿಸಿಲ ಝಳದಿಂದ ಕುಂಕುಮದ ಗಾತ್ರವನ್ನು ಚಿಕ್ಕದು ಮಾಡಿಕೊಂಡಿದ್ದೇವೆ ಹೊರತು ಅಳಿಸಿಕೊಂಡಿಲ್ಲ ಎಂದಿದ್ದಾರೆ.
ನಿನ್ನೆ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ನನ್ನ ತವರು, ಇಲ್ಲಿನ ಹೆಣ್ಣುಮಕ್ಕಳು ನನಗೆ ತವರು ಮನೆಯ ಪ್ರೀತಿ- ವಾತ್ಸಲ್ಯ ತೋರುತ್ತಿದ್ದಾರೆ. ಹಣೆಗೆ ಕುಂಕುಮ ಇರಿಸಿ, ಉಡಿ ತುಂಬಿ ಹರಸುತ್ತಿದ್ದಾರೆ. ಆದರೆ ಬೆವರಿಗೆ ಕುಂಕುಮ ಮುಖದ ತುಂಬೆಲ್ಲ ಹರಡುತ್ತಿದೆ. ಈ ಕಾರಣಕ್ಕೆ ಕೆಲವು ಸಲ ಕುಂಕುಮವನ್ನ ಸರಿ ಮಾಡಿಕೊಂಡಿದ್ದೇನೆ. ಇದನ್ನ ತಿರುಚಿ ವಿಡಿಯೋ ಮಾಡಿ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು. ಅಲ್ಲದೆ ಪಕ್ಷದಿಂದ ಹೊರಗುಳಿದು ಪಕ್ಷದ ಅಸ್ತಿತ್ವವೇ ಇಲ್ಲದವರೂ ಟೀಕಿಸುತ್ತಿರುವವರು ಮೊದಲು ತಮ್ಮ ಅಸ್ತಿತ್ವವನ್ನು ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com ![]() |
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com |