SHIVAMOGGA | MALENADUTODAY NEWS | Apr 24, 2024
ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗಮಿಸಿದ್ದಾರೆ. ವಿಶೇಷ ಹೆಲಿಕಾಪ್ಟರ್ ನಲ್ಲಿ ಶಿವಮೊಗ್ಗಕ್ಕೆ ಬಂದ ಅವರಿಗೆ ಮೊದಲು ಸ್ವಾಗತ ಕೊಟ್ಟಿದ್ದು ಚುನಾವಣಾ ಅಧಿಕಾರಿಗಳು.
ಅಧಿಕಾರಿಗಳ ಚೆಕ್ಕಿಂಗ್
ಹೌದು ಹೆಲಿಕಾಪ್ಟರ್ ನಿಂದ ಇಳಿಯುತ್ತಲೇ ಸ್ಥಳಕ್ಕೆ ಬಂದ ಚುನಾವಣಾ ಅಧಿಕಾರಿಗಳು ಕ್ಯಾಮರಾ ಸಮೇತ ಹೆಲಿಕಾಪ್ಟರ್ ಬಳಿಗೆ ಹೋಗಿ ಪರಿಶೀಲನೆ ನಡೆಸಿದರು. ಎಲೆಕ್ಷನ್ ನೀತಿ ಸಂಹಿತೆಗೆ ಅನುಗುಣವಾಗಿ ಹೆಲಿಕಾಪ್ಟರ್ ರನ್ನ ಪರಿಶೀಲಿಸಿದ ಅಧಿಕಾರಿಗಳು ಪ್ರತಿಯೊಂದನ್ನ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡರು.
ಇನ್ನೂ ಶಿವಮೊಗ್ಗಕ್ಕೆ ಬಂದ ಅಣ್ಣಾಮಲೈರರವರನ್ನ ಬಿಜೆಪಿ ಕಾರ್ಯಕರ್ತರ ಹೂಗುಚ್ಚ, ಹೂವಿನ ಹಾರ ಹಾಕಿ ಬರಮಾಡಿಕೊಂಡರು. ಶಿವಮೊಗ್ಗ ನಗರ ಶಾಸಕ ಎಸ್ಎನ್ ಚನ್ನಬಸಪ್ಪ, ಬೆಳ್ಳಿಕೆರೆ ಸಂತೋಷ್ ಹಾಗೂ ತಮಿಳು ಸಮುದಾಯದ ಮುಖಂಡರು ಅಣ್ಣಾಮಲೈರನ್ನ ಬರಮಾಡಿಕೊಂಡರು. ಅಣ್ಣಾಮಲೈ ಚುನಾವಣಾ ಪ್ರಚಾರದ ಅಂಗವಾಗಿ ಭದ್ರಾವತಿ ಹಾಗೂ ಮಿಳಘಟ್ಟದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಸದರ ಸ್ವಾಗತ
ಇನ್ನೂ ಶಿವಮೊಗ್ಗ ನಗರಕ್ಕೆ ಬಂದಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈರನ್ನ K.Annamalai ಸಂಸದ ಬಿವೈ ರಾಘವೇಂದ್ರ ಹಾಗೂ ಬಿಜೆಪಿ ಹಿರಿಯ ಮುಖಂಡ ಬಾನುಪ್ರಕಾಶ್ ಬರಮಾಡಿಕೊಂಡು ಸ್ವಾಗತ ನೀಡಿದರು.

ಅಣ್ಣಾಮಲೈರಿಗೆ ಪೊಲೀಸ್ ಸೆಲ್ಯೂಟ್
ಅಣ್ಣಾಮಲೈರವರು ಈಗ ರಾಜಕಾರಣಿ. ಇದಕ್ಕೂ ಮೊದಲು ಖಡಕ್ ಐಪಿಎಸ್ ಅಧಿಕಾರಿ. ಅವರ ಸೂಪರ್ವೈಸ್ನಡಿಯಲ್ಲಿ ಕೆಲಸ ಮಾಡಿದ ಪೊಲೀಸ್ ಸಿಬ್ಬಂದಿ ಅವರನ್ನ ಇವತ್ತಿಗೂ ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ಇವತ್ತಿನ ಸನ್ನಿವೇಶ ಸಹ ಸಾಕ್ಷಿಯಾಗಿತ್ತು. ಹೆಲಿಪ್ಯಾಡ್ನಿಂದ ಕೆಳಕ್ಕೆ ಇಳಿದು ಬಂದ ಅಣ್ಣಾಮಲೈರಿಗೆ ಕೆಲವು ಸಿಬ್ಬಂದಿ ಸೆಲ್ಯೂಟ್ ಮಾಡಿದರು. ಅದಕ್ಕೆ ಪರ್ಯಾಯವಾಗಿ ಅಣ್ಣಾಮಲೈ ಕೈ ಮುಗಿದು ಸಿಬ್ಬಂದಿಯ ಕೈ ಕುಲುಕಿ ಹೇಗಿದ್ದೀರಿ ಎಂದು ವಿಚಾರಿಸಿದರು.