ಶಿವಮೊಗ್ಗ : ಅಪರಿಚಿತ ವ್ಯಕ್ತಿಗಳು ಏಕಾ ಏಕಿ ಮನೆ ಹತ್ತಿರ ಬರೋದು ತಾವು ಸಾಕಿದ ಬೆಕ್ಕು ಅಥವಾ ನಾಯಿಯ ಮರಿಗಳನ್ನು ಇಟ್ಟು ಹೋಗೋದು ದನ ಕರುಗಳನ್ನು ಬಿಟ್ಟು ಹೋಗೋದನ್ನ ನೀವೆಲ್ಲಾ ನೋಡಿಯೇ ಇರ್ತೀರ. ಆದರೆ ಯಾರೋ ಅರಿಚಿತ ವ್ಯಕ್ತಿಗಳು ಏಕಾಏಕಿ ಮನೆಗೆ ನುಗ್ಗಿ ಕಾಂಪೌಂಡ್ ಒಳಗೆ ವಿಷಪೋರಿತ ಹಾವನ್ನು ಮನೆಯೊಳಗೆ ಬಿಟ್ಟು ಪರಾರಿಯಾಗಿರುವ ಸುದ್ದಿಯನ್ನು ಕೇಳಿದ್ದೀರಾ ಕೇಳಿಲ್ಲಾ ಅಂದ್ರೆ ಒಂದೊಮ್ಮೆ ಈ ಸುದ್ದಿಯನ್ನು ನೋಡಿ. ಇಂತಹದ್ದೊಂದು ವಿಚಿತ್ರ ಹಾಗೂ ಭಯಾನಕ ಘಟನೆ ಭದ್ರಾವತಿ ತಾಲೂಕಿನ ಪಿತಾರಿ ನಂಜಪ್ಪ ರಸ್ತೆಯಲ್ಲಿ ಸಂಭವಿಸಿದೆ.
ಶಿವಮೊಗ್ಗ : ಮರದ ಕೊಂಬೆಗಳನ್ನು ಕತ್ತರಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಕ್ರಿಕೆಟ್ ಆಟಗಾರ ಸಾವು
ಘಟನೆಯ ವಿವರ
ಘಟನೆ ನಡೆದ ಸಮಯದಲ್ಲಿ ಯುವತಿಯೊಬ್ಬರು ಮನೆಯಲ್ಲಿ ಒಬ್ಬರೇ ಇದ್ದರು. ಆಕೆಯ ತಾಯಿ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಯುವಕರು ಯುವತಿಯ ಮನೆಯ ಬಳಿ ಬಂದಿದ್ದಾರೆ. ಬಂದು ಸುಮ್ಮನೆ ಹೋಗಿದ್ದರೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ಆದರೆ, ಆ ಇಬ್ಬರು ವ್ಯಕ್ತಿಗಳು ಏಕಾಏಕಿ ಮನೆಯ ಕಾಂಪೌಂಡ್ ಒಳಗಡೆ ನುಗ್ಗಿದ್ದಾರೆ.ಮನೆಯ ಒಳಗಿನಿಂದಲೇ ಈ ಎಲ್ಲ ಚಟುವಟಿಕೆಗಳನ್ನು ಯುವತಿ ಭಯದಿಂದ ಗಮನಿಸುತ್ತಿದ್ದಳು. ಈ ಸಂದರ್ಭದಲ್ಲಿ ಆ ಯುವಕರು ತಮ್ಮ ಬಳಿಯಿದ್ದ ಚೀಲವನ್ನು ತೆರೆದು, ಅದರಲ್ಲಿದ್ದ ವಿಷಪೂರಿತ ಹಾವೊಂದನ್ನು ಕಾಂಪೌಂಡ್ ಒಳಗಡೆ ಬಿಟ್ಟಿದ್ದಾರೆ. ಇದನ್ನು ನೋಡಿ ಗಾಬರಿಗೊಂಡ ಯುವತಿ ಜೋರಾಗಿ ಕಿರುಚಿಕೊಂಡಿದ್ದಾರೆ. ಯುವತಿ ಕಿರುಚಿಕೊಳ್ಳುತ್ತಿದ್ದಂತೆ ಹೆದರಿದ ದುಷ್ಕರ್ಮಿಗಳು ತಕ್ಷಣವೇ ಬೈಕ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳ ಈ ಕೃತ್ಯದ ಸಂಪೂರ್ಣ ದೃಶ್ಯಾವಳಿಗಳು ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
