Shivamogga news today ಶಿವಮೊಗ್ಗ : ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಜನ ಕಾಣೆಯಾಗಿದ್ದು, ಮಾಹಿತಿ ನೀಡಲು ಪೊಲೀಸ್ ಪ್ರಕಟಣೆ ತಿಳಿಸಿದೆ.
ಸಾಗರ ತಾಲೂಕು ಪಡವಗೋಡು ಗ್ರಾಮದ ನವೀನ್ ಹೆಚ್.ಕೆ. ಎಂಬ 29 ವರ್ಷದ ಯುವಕ ಸೆ.20 ರಂದು ಶಾಮಿಯಾನ ಹಾಕಲು ಹೋಗುವುದಾಗಿ ಹೇಳಿ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.5 ಅಡಿ ಎತ್ತರ ಕೋಲುಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ.

ಹೆಗ್ಗೋಡು ಗ್ರಾಮದ ರಮೇಶ್ ಶಿವಾನಂದ ಭಟ್ ಎಂಬುವವರ ಮಗ ಅಶ್ವಿನ್ ಭಟ್ ಎಂಬ 29 ವರ್ಷದ ಯುವಕ ಏ. 05 ರಂದು ಕುಟುಂಬ ವ್ಯಾಜ್ಯದ ಸಲುವಾಗಿ ಠಾಣೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.7 ಅಡಿ ಎತ್ತರ.ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾರೆ.

ಕಮಲಾಪುರ ಆವಿನಹಳ್ಳಿ ಗ್ರಾಮದ ದಾಮೋದರ ಎಂಬುವವರ ಮಗ ರವಿರಾಜ ಎಂಬ 26 ವರ್ಷದ ಯುವಕ ಮಾರ್ಚ್ 2024 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತ ಚಹರೆ 5.3 ಅಡಿ ಎತ್ತರ. ಕೋಲುಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಬಲಗೈಯಲ್ಲಿ ಶಿವರಾಜ ಹಚ್ಚೆ ಗುರುತು ಇರುತ್ತದೆ.

ಈ ಮೂರು ಜನ ಕಾಣೆಯಾದವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ದೂ.ಸಂ. 08182-261400/ 08183-226082/ 9480803361/ 9480803385 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

