ಶಿವಮೊಗ್ಗ ಲೋಕಾಯುಕ್ತ ದಾಳಿ: ಕೃಷಿ ವಿವಿ ಪ್ರಾಧ್ಯಾಪಕನ ₹6.34 ಕೋಟಿ ಮೌಲ್ಯದ ಆಸ್ತಿ ಪತ್ತೆ /Karnataka Lokayukta Crackdown: Disproportionate Assets Case Shakes Up State Officials
ಶಿವಮೊಗ್ಗ: ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪದಡಿ ರಾಜ್ಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು ನಿನ್ನೆ ದಿನ ಭರ್ಜರಿ ಕಾರ್ಯಾಚರಣೆ ನಡೆಸಿದ್ದರು. ಒಟ್ಟು 8 ಅಧಿಕಾರಿಗಳಿಗೆ ಸಂಬಂಧಿಸಿದ 45 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದ ಲೋಕಾಯುಕ್ತರು, ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.

ಈ ದಾಳಿಗಳ ಪೈಕಿ ಶಿವಮೊಗ್ಗದ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹಾಯಕ ಸಂಶೋಧನಾ ನಿರ್ದೇಶಕ (ADR ಕೋಆರ್ಡಿನೇಟರ್) ಮತ್ತು ಪ್ರಾಧ್ಯಾಪಕ ಡಾ. ಪ್ರದೀಪ್ ಅವರಿಗೆ ಸೇರಿದ ಸ್ಥಳಗಳಲ್ಲಿಯು ಶೋಧ ಕಾರ್ಯ ನಡೆದಿತ್ತು. ಸದ್ಯ ಈ ದಾಳಿಯಲ್ಲಿ ಡಾ. ಪ್ರದೀಪ್ ಅವರ ಒಟ್ಟು ₹6.34 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.


ಪತ್ತೆಯಾದ ಆಸ್ತಿ ವಿವರಗಳು: karnataka Lokayukta Crackdown
ಡಾ. ಪ್ರದೀಪ್ ಅವರ ಬಳಿ ಪತ್ತೆಯಾದ ಆಸ್ತಿಗಳ ಪಟ್ಟಿ ಹೀಗಿದೆ:
- ಸ್ಥಿರಾಸ್ತಿ: 5 ನಿವೇಶನಗಳು, 1 ವಾಸದ ಮನೆ ಮತ್ತು 16.7 ಎಕರೆ ಕೃಷಿ ಜಮೀನು – ಇವುಗಳ ಒಟ್ಟು ಮೌಲ್ಯ ₹4.45 ಕೋಟಿ ಎಂದು ಅಂದಾಜಿಸಲಾಗಿದೆ.
- ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್: ಬ್ಯಾಂಕ್ ಖಾತೆಗಳಲ್ಲಿ ₹29.75 ಲಕ್ಷ, ದಾಳಿ ವೇಳೆ ₹10 ಸಾವಿರ ನಗದು ಮತ್ತು ₹25 ಸಾವಿರ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ.
- ಇತರೆ ಚರಾಸ್ತಿಗಳು: ₹34.75 ಲಕ್ಷ ಮೌಲ್ಯದ ಚಿನ್ನಾಭರಣ, ₹30 ಲಕ್ಷ ಮೌಲ್ಯದ ವಾಹನಗಳು (ಮೂರು ಕಾರುಗಳು ಮತ್ತು ಮೂರು ಬೈಕ್ಗಳು), ₹15.50 ಲಕ್ಷ ಮೌಲ್ಯದ ಮೇಕೆ ಮತ್ತು ಹಸುಗಳು, ₹50 ಲಕ್ಷ ಮೌಲ್ಯದ ಫಾರ್ಮ್ ಹೌಸ್, ಮತ್ತು ₹28.75 ಲಕ್ಷ ಮೌಲ್ಯದ ಇತರೆ ವಸ್ತುಗಳು ಪತ್ತೆಯಾಗಿವೆ.
- ಇದಲ್ಲದೆ, ಜವಾರಿ ಕೋಳಿ ಫಾರಂ, ಬಾತುಕೋಳಿ, ಪಾರಿವಾಳ ಫಾರಂ, ಕುರಿ ಮತ್ತು ಗೋವುಗಳ ಫಾರಂಗಳು ಸಹ ಇರುವುದು ಕಂಡುಬಂದಿದೆ. 400 ಗ್ರಾಂ ಚಿನ್ನ, 3 ಕೆ.ಜಿ. ಬೆಳ್ಳಿ, 20 ಕೈಗಡಿಯಾರಗಳು (ಕೆಲವು ವಿದೇಶಿ ಬ್ರಾಂಡ್ಗಳು), ಮತ್ತು 50 ಜೊತೆ ಶೂಗಳು ಸಹ ದೊರೆತಿವೆ.
ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ. karnataka Lokayukta Crackdown


ಇನ್ನಷ್ಟು ಸುದ್ದಿಗಳಿಗಾಗಿ : malendutoday.com / shivamoggalive.com