tunga dam water flow ತುಂಗಾ ನದಿಯಲ್ಲಿ ಅಪಾಯ ಮಟ್ಟಕ್ಕೆ ತಲುಪಿದ ನೀರಿನ ಮಟ್ಟ | ಸಾರ್ವಜನಿಕರಿಗೆ ಎಚ್ಚರಿಕೆ
tunga dam water flow ಶಿವಮೊಗ್ಗ: ಜಿಲ್ಲೆಯಲ್ಲಿ ಭಾರೀ ಮಳೆಯಾತ್ತಿದ್ದು, ಗಾಜನೂರಿನ ತುಂಗಾ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದು ಡ್ಯಾಂ ನಿಂದ 43 ಸವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಶಿವಮೊಗ್ಗದ ಕೊರ್ಪಾಲಯ್ಯನ ಮಂಟಪ ಬಹುತೇಕ ಮುಳುಗಡೆ ಹಂತ ತಲುಪಿದೆ.
ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಜಲಾಶಯಕ್ಕೆ 43 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು 22 ಕ್ರಸ್ಟ್ ಗೇಟ್ ಗಳಿಂದ ಹೊರಬಿಡಲಾಗಿದೆ.
ತುಂಗಾ ಜಲಾಶಯದ ಅಧಿಕಾರಿಗಳು ನದಿ ಪಾತ್ರದಲ್ಲಿ ವಾಸಿಸುವ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ನದಿ ದಂಡೆಗೆ ತೆರಳದಂತೆ, ಜಾನುವಾರುಗಳನ್ನು ನದಿ ಬಳಿ ಬಿಡದಂತೆ ಮತ್ತು ಯಾವುದೇ ಕಾರಣಕ್ಕೂ ನದಿ ದಾಟಲು ಪ್ರಯತ್ನಿಸದಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
