SHIVAMOGGA | MALENADUTODAY NEWS | Aug 22, 2024 ಮಲೆನಾಡು ಟುಡೆ
ವ್ಯಾಪಕ ಮಳೆ ಕಾರಣಕ್ಕೆ ಹಾಗೂ ಹುಚ್ಚಾಟದ ಚಟುವಟಿಕೆಗೆ ಮುಂದಾಗುವ ಅಪಾಯದ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಕಳೆದ ಜುಲೈ ನಲ್ಲಿ ಹಿಡ್ಲು ಮನೆ ಫಾಲ್ಸ್ ಸೇರಿದಂತೆ ವನ್ಯ ಜೀವಿ ಇಲಾಖೆಗೆ ಒಳಪಟ್ಟ ಎಲ್ಲಾ ಜಲಪಾತಗಳಿಗೆ ಪ್ರವೇಶ ನಿರ್ಬಂಧ ಹೇರಿ ಅರಣ್ಯ ಇಲಾಖೆ ಪ್ರಕಟಣೆ ನೀಡಿತ್ತು,
ಕೊಡಚಾದ್ರಿ ಚಾರಣ ಆರಂಭ
ಇದೀಗ ಕೊಡಚಾದ್ರಿ, ಹಿಡ್ಲುಮನೆ ಜಲಪಾತಕ್ಕೆ ಚಾರಣ ಪುನಾರಂಭಗೊಂಡಿದೆ.ಸದ್ಯ ಕೊಡಚಾದ್ರಿ ಮತ್ತು ಹಿಡ್ಲುಮನೆ ಜಲಪಾತಕ್ಕೆ ಚಾರಣವನ್ನು ಮತ್ತೆ ಪುನಾರಂಭಗೊಳಿಸಿ ಅರಣ್ಯ ವನ್ಯಜೀವಿ ವಿಭಾಗ ಆದೇಶ ಹೊರಡಿಸಿದೆ.
ಮಲೆನಾಡು ಭಾಗದಲ್ಲಿ ಸುರಿದ ವಿಪರೀತ ಮಳೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಜುಲೈ 4ರಿಂದ ಕೊಡಚಾದ್ರಿ, ಹಿಡ್ಲುಮನೆ ಜಲಪಾತ ಸೇರಿದಂತೆ ವನ್ಯಜೀವಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಎಲ್ಲ ಪ್ರವಾಸಿ ತಾಣಗಳಿಗೆ ಚಾರಣ ಮಾಡಲು ನಿರ್ಬಂಧ ಹೇರಲಾಗಿತ್ತು. ಮೊನ್ನೆ ಮಂಗಳವಾರದಿಂದ ಇಲಾಖೆ ನಿಗದಿಪಡಿಸಿದ ಶುಲ್ಕ ಪಾವತಿಸಿ ಚಾರಣ ನಡೆಸಲು ಅನುಮತಿ ನೀಡಲಾಗಿದೆ.
ಇನ್ನಷ್ಟು ಸುದ್ದಿಗಳು
-
ಪತ್ರಕರ್ತನಿಗೆ ಪೋಕ್ಸೋ ಕೇಸ್ ವಾರ್ನಿಂಗ್ ಕೊಟ್ಟ ಪೊಲೀಸ್ ಆಫಿಸರ್ | ತೀರ್ಥಹಳ್ಳಿಯಲ್ಲಿ ಇದು ಸಾಧ್ಯನಾ?
-
ನೋಟು ಎಕ್ಸ್ಚೇಂಜ್ಗೆ ಡಬ್ಬಲ್ ದುಡ್ಡು ಆಫರ್ | ಹೊಸನಗರದ ವ್ಯಕ್ತಿಗೆ ಬಾಕ್ಸ್ ಕೊಟ್ಟು ಮೋಸ ಮಾಡಿದ ಐವರು ಅರೆಸ್ಟ್
-
ನಾಯಿ, ಬೆಕ್ಕುಗಳಿಗಾಗಿಯೇ ಶಿವಮೊಗ್ಗದಲ್ಲಿ ಓಪನ್ ಆಗಲಿದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ | ಏಲ್ಲಿ ಗೊತ್ತಾ