SHIVAMOGGA | MALENADUTODAY NEWS | Sep 16, 2024 ಮಲೆನಾಡು ಟುಡೆ
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ನಾಳೆ ಅಂದರೆ ಸೆಪ್ಟೆಂಬರ್ 17 ರಂದು ನಡೆಯಲಿದೆ. ಇದಕ್ಕಾಗಿ ಶಿವಮೊಗ್ಗ ನಗರ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ.
ಹಿಂದೂ ಮಹಾಸಭಾ ಗಣಪತಿ
ಶಿವಮೊಗ್ಗ ನಗರದೆಲ್ಲೆಡೆ ಬಣ್ಣ ಬಣ್ಣದ ದೀಪಗಳನ್ನ ಅಳವಡಿಸಲಾಗಿದ್ದು, ರಾಜಬೀದಿ ಉತ್ಸವವನ್ನು ಸ್ವಾಗತಿಸುವ ಬೃಹತ್ ಪ್ಲೆಕ್ಸ್ಗಳು ನಗರದ ಜಾಹಿರಾತು ಪ್ಲೆಕ್ಸ್ಗಳಿದ್ದ ಜಾಗದಲ್ಲಿ ಕಾಣಿಸಿಕೊಳ್ಳುತ್ತಿದೆ. ಇನ್ನೂ ಗಣಪತಿ ಮೆರವಣಿಗೆ ಸಾಗುವ ದಾರಿಯಲ್ಲಿ ಹಿಂದೂ ದೇವರುಗಳ ಪ್ಲೆಕ್ಸ್ಗಳನ್ನ ನಿಲ್ಲಿಸಲಾಗಿದ್ದು ಕೇಸರಿ ಧ್ವಜಗಳನ್ನ ಅಳವಡಿಸಲಾಗಿದೆ.

ನಗರದ ಕೋಟೆ ರಸ್ತೆಯ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ಮೆರವಣಿಗೆ ಸಾಗಿ ಬರುವ ಬಿಬಿ ಸ್ಟ್ರೀಟ್, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತದ ವರೆಗೂ ಕೇಸರಿ ಅಲಂಕಾರ ಜಗಮಗಿಸುತ್ತಿದೆ
ಗಾಂಧಿ ಬಜಾರ್
ಗಾಂಧಿ ಬಜಾರ್ನ ಮುಖ್ಯ ಧ್ವಾರದಲ್ಲಿ ಕಾಶಿ ವಿಶ್ವನಾಥನ ಅಲಂಕಾರದ ಟ್ಯಾಬ್ಲೋ ನಿಲ್ಲಿಸಲಾಗಿದೆ. ಇನ್ನೂ ಆಮೀರ್ ಅಹ್ಮದ್ ಸರ್ಕಲ್ನಲ್ಲಿ ರಾಮಾಂಜನೆಯ ಮೂರ್ತಿಯನ್ನ ನಿಲ್ಲಿಸಲಾಗಿದೆ. ಸಾವರ್ಕರ್ ಪ್ರತಿಮೆಯನ್ನ ನಿಲ್ಲಿಸಲಾಗಿದೆ. ಇದಷ್ಟೆ ಅಲ್ಲದೆ ಶಿವಲಿಂಗ ಹಾಗೂ ನಂದಿಯ ಕಲಾಕೃತಿ ಆಕರ್ಷಿಸುತ್ತಿದೆ. ಎಂಆರ್ಎಸ್ ಸರ್ಕಲ್ನಲ್ಲಿ ಶಿವಾಜಿಯ ಪ್ರತಿಮೆಯನ್ನ ನಿಲ್ಲಿಸಲಾಗಿದೆ. ನೆಹರೂ ರಸ್ತೆ, ದುರ್ಗಿಗುಡಿಯೆಲ್ಲ ಕೇಸರಿ ಬಂಟಿಂಗ್ಸ್ ರಾರಾಜಿಸತೊಡಗಿದೆ.
ಈ ಸಲ ಡಿಜೆ ಇರುತ್ತಾ, ರನ್ನಿಂಗ್ ಡಿಜೆಗೆ ಅವಕಾಶ ಕೊಟ್ಟಿದ್ದಾರಾ? ಅಥವಾ ಸ್ಟ್ಯಾಂಡಿಂಗ್ ಡಿಜೆ ಮಾತ್ರನಾ? ಹೀಗೆ ಹಲವಾರು ಪ್ರಶ್ನೆಗಳು ಹಿಂದೂ ಯುವಕರಿಂದ ಕೇಳಿಬರುತ್ತಿದೆ. ಆದರೆ ಇದಕ್ಕೆಲ್ಲಾ ನಾಳೆಯ ಉತ್ತರ ಸಿಗುತ್ತದೆ.
ಇನ್ನೂ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಗರದೆಲ್ಲೆಡೆ ಹೆಚ್ಚುವರಿ ಪೊಲೀಸ್ ಅಧಿಕಾರಿ ಹಾಗೂ ಹೆಚ್ಚುವರಿ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ರಾಜ ಬೀದಿ ಉತ್ಸವದ ಹಾದಿ
ಹಿಂದೂ ಮಹಾಸಭಾದ ಗಣಪತಿ ಮೆರವಣಿಗೆಯು ಭೀಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಎಸ್.ಪಿ.ಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಎಸ್.ಎನ್. ವೃತ್ತ, ಬಿ.ಹೆಚ್. ರಸ್ತೆ, ಎ.ಎ. ವೃತ್ತ, ನೆಹರು ರಸ್ತೆ, ಟಿ.ಸೀನಪ್ಪ ವೃತ್ತ (ಗೋಪಿ ವೃತ್ತ). ದುರ್ಗಿಗುಡಿ, ಜೈಲ್ವೃತ್ತ ಮಾರ್ಗವಾಗಿ ಮಹಾವೀರ ವೃತ್ತ, ಡಿ.ವಿ.ಎಸ್ ವೃತ್ತ, ಕಾನ್ವೆಂಟ್ ರಸ್ತೆ, ಕೋಟೆ ರಸ್ತೆ ಮಾರ್ಗವಾಗಿ ಭೀಮೇಶ್ವರ ದೇವಸ್ಥಾನದ ಹತ್ತಿರ ತುಂಗಾ ನದಿಯಲ್ಲಿ ವಿಸರ್ಜನೆ ನಡೆಯಲಿದೆ
ಇನ್ನಷ್ಟು ಸುದ್ದಿಗಳು
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ