SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 28, 2024 | ಕಾಂಗ್ರೆಸ್ ನವರು ಸಿಎಂ ಸಿದ್ದರಾಮಯ್ಯ ಏನು ಮಾಡಿಲ್ಲ ಅಂತಿದ್ದಾರೆ ಹಾಗಾಗಿ ಮಂತ್ರಿಗಳೆಲ್ಲ ರಾಜೀನಾಮೆ ಕೊಟ್ಟು ನ್ಯಾಯಾಧೀಶರಾಗಿಬಿಡಿ ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚೆನ್ನಬಸಪ್ಪ (Shivamogga City MLA Chennabasappa)ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿದರಷ್ಟೆ ಅಲ್ಲದೆ ಮುಖ್ಯಮಂತ್ರಿಯವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ನ್ಯಾಯಾಲಯದ ಆದೇಶ ಪ್ರಕಾರ ಎಫ್ ಐ ಆರ್ ದಾಖಲಾಗಿದೆ.
ಮುಡಾ ಹಗರಣದ ಬಗ್ಗೆ ತನಿಖೆ ಮಾಡಬೇಕು. ತನಿಖೆ ಮಾಡಿ ತಪಿಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಕೋರ್ಟ್ ಆದೇಶ ನೀಡಿದೆ. ನ್ಯಾಯಾಲಯ ಹೇಳುವ ಮುಂಚೆಯೇ ಹಗರಣದ ಬಗ್ಗೆ ಬಿಜೆಪಿ ಪಕ್ಷ ಪ್ರಾಮಾಣಿಕವಾಗಿ ಜನರಿಗೆ ತಿಳಿಸುವ ಕೆಲಸ ಮಾಡಿತ್ತು ಆಗ ಧಿಕ್ಕಾರದ ಧೋರಣೆ ಕಾಂಗ್ರೆಸ್ ಅನುಸರಿಸಿತ್ತು ಎಂದು ಚೆನ್ನಿ ಆರೋಪಿಸಿದರು
187 ಕೋಟಿ ಹಗರಣ ಆಗಿದ್ರು ಮಂತ್ರಿ ಮೇಲೆ FIR ದಾಖಲು ಮಾಡಲಿಲ್ಲ. ಆಗ ಇಡಿ ಅವರು ಎಂಟ್ರಿಯಾಗಿ ಸಚಿವರ ಮೇಲೆ FIR ದಾಖಲು ಮಾಡಿದ್ರು ̤ ಸಿದ್ದರಾಮಯ್ಯ ಪರ ಮಂತ್ರಿಮಂಡಲ ಅವರು ರಾಜೀನಾಮೆ ಕೊಡಲ್ಲ ಅಂತಿದ್ದಾರೆ. ಮಂತ್ರಿಗಳೇ ಜಡ್ಜ್ ಗಳಾಗಿ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಲ್ಲಿದ್ರೆ ತನಿಖೆಗೆ ನ್ಯಾಯ ಸಿಗೋಲ್ಲ

ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು. ರಾಜೀನಾಮೆ ಕೊಟ್ಟು ಹೊರಗೆ ಬರೋದು ನೈತಿಕತೆಯ ವ್ಯವಸ್ಥೆ . ಕಾಂಗ್ರೆಸ್ ನವರು ಸಿದ್ದರಾಮಯ್ಯ ಏನು ಮಾಡಿಲ್ಲ ಅಂತಿದ್ದಾರೆ. ಮಂತ್ರಿಗಳೆಲ್ಲ ರಾಜೀನಾಮೆ ಕೊಟ್ಟು ನ್ಯಾಯಾಧೀಶರಾಗಿಬಿಡಿ ಎಂದು ಚೆನ್ನಬಸರಪ್ಪವರು ಲೇವಡಿ ಮಾಡಿದರು.
ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚೆನ್ನಬಸಪ್ಪ, ಮುಡಾ ಹಗರಣ, ಸಿಎಂ ಸಿದ್ದರಾಮಯ್ಯ , Shivamogga City MLA Chennabasappa, MUDA scam, CM Siddaramaiah,