SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 28, 2024 | ಸೈಬರ್ ಕ್ರೈಂನ ವಿಚಾರವಾಗಿ ಜಾಗೃತಿ ಮೂಡಿಸುವ ಸಲುವಾಗಿ ಮಲೆನಾಡು ಟುಡೆ ಇತ್ತೀಚೆಗೆ ಮುಂಬೈ ಪೊಲೀಸರು ಎಂದು ಹೇಳಿಕೊಂಡು ಕರೆ ಮಾಡುವವರ ಬಗ್ಗೆ ವರದಿ ಮಾಡಿತ್ತು. ಅದರ ವಿವರ ಹೀಗಿದೆ ಏಪ್ರಿಲ್ ಫೂಲ್ ಅಲ್ಲಾ, ಹುಷಾರು ಬಾಸು | ಪೊಲೀಸ್ ಸ್ಟೈಲ್ನಲ್ಲಿಯೇ ಕಾಲ್ ಮಾಡಿ ನಿಂತಲ್ಲೆ ಅರೆಸ್ಟ್ ಮಾಡ್ತಾರೆ
ವಿಶೇಷ ಅಂದರೆ, ಇದೀಗ ಅಂತುಹುದ್ದೆ ಒಂದು ಕಾಲ್ ಶಿವಮೊಗ್ಗಕ್ಕೆ ಬಂದಿದ್ದು 70 ವರ್ಷದ ಸೀನಿಯರ್ ಸಿಟಿಜನ್ ಒಬ್ಬರಿಂದ ಬರೋಬ್ಬರಿ 41 ಲಕ್ಷ ರೂಪಾಯಿ ಸುಲಿಗೆ ಮಾಡಲಾಗಿದೆ. ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕನ್ನಡದಲ್ಲಿ ಮಾತನಾಡಿ
ನಿಮ್ಮ ಗುರುತು, ನಿಮ್ಮ ಸುತ್ತಮುತ್ತ ಯಾರಿದ್ದಾರೆ, ನಿಮ್ಮವರು ಯಾರು ಎಂದು ತಿಳಿದುಕೊಳ್ಳುವ ಮುಂಬೈ ಆಸಾಮಿಗಳನ್ನು ನಿಮ್ಮ ವೀಕ್ನೆಸನ್ನ ಬಳಸಿಕೊಂಡು ನಿಮ್ಮನ್ನ ಯಾಮಾರಿಸುತ್ತಿದ್ದಾರೆ. ಕನ್ನಡದಲ್ಲಿ ಮಾತನಾಡುವುದರಿಂದ ಇಂತಹವರ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ ಅಂತಾ ಪೊಲೀಸ್ ವಲಯದಲ್ಲಿನ ಅಭಿಪ್ರಾಯ. ಖದೀಮರಿಗೆ ನಾವು ಏನು ಮಾತನಾಡುತ್ತಿದ್ದೇವೆ ಎಂದು ಅರ್ಥವಾಗದೇ ಅವರು ಯಾಮಾರಿಸುವುದು ಕಷ್ಟವಾಗುತ್ತದೆ.
ಮುಂಬೈ ಚಂಬೂರು ಪೊಲೀಸ್ ಹೆಸರಲ್ಲಿ ದೋಖಾ
ಆದರೆ ಈ ಪ್ರಕರಣದಲ್ಲಿ ಸೀನಿಯರ್ ಸಿಟಿಜನ್ ವ್ಯಕ್ತಿಯೊಬ್ಬರಿಗೆ ಮುಂಬೈನ ಚೆಂಬೂರು ಪೊಲೀಸ್ ಠಾಣೆಯ ಪೊಲೀಸರು ಎಂದು ಹೇಳಿಕೊಂಡ ದುಷ್ಕರ್ಮಿಗಳು ಬ್ಯಾಂಕ್ ಅಕೌಂಟ್ನಲ್ಲಿನ ಹಣವನ್ನೆಲ್ಲಾ ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ವಿಷಯ ಅಂದರೆ, ಮೊದಲು ಒಬ್ಬಾತ ಕರೆ ಮಾಡಿ, ಟೆಲಿಕಾಂ ಡಿಪಾರ್ಟ್ಮೆಂಟ್ನಿಂದ ಅಂತಾ ಹೇಳಿಕೊಂಡು ಹಿರಿಯರಿಗೆ ಫೋನ್ ಮಾಡಿದ್ದಾನೆ. ಆನಂತರ ಮೊಬೈಲ್ ನಂಬರ್ ರಿ-ಆಕ್ಟಿವೇಟ್ ಮಾಡಲಾಗುತ್ತಿದೆ. ನಿಮ್ಮ ಆದಾರ್ ಸಂಖ್ಯೆ ಮೂಲಕ ದೊಡ್ಡ ಹಗರಣವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂಬೈ ಚಂಬೂರು ಪೊಲೀಸ್ ರಿಗೆ ಕನೆಕ್ಟ್ ಮಾಡುತ್ತೇವೆ ಎಂದು ಹೇಳಿ ಕನೆಕ್ಸ್ ಮಾಡಿದ್ದಾರೆ.
ಅಲ್ಲಿಂದ ಮುಂಬೈ ಚಂಬೂರು ಪೊಲೀಸ್ ಠಾಣೆಯ ಹೆಸರಲ್ಲಿನ ನಕಲಿ ಪೊಲೀಸ್ ವಿನಯ್ ಎಂಬಾತ ಮಾತನಾಡಿದ್ದು, ಮುಂಬೈನ ಬ್ಯಾಂಕ್ ಆಪ್ ಬರೋಡದಲ್ಲಿ ಖಾತೆ ಓಪನ್ ಆಗಿದೆ. ನಿಮ್ಮ ಮನೆಯಲಿ.. ಎಷ್ಟು ಜನರಿದ್ದಾರೆ, ಯಾವ ಕೆಲಸ ಮಾಡುತ್ತೀರ ಎಂದೆಲ್ಲಾ ವಿಚಾರಿಸಿದ್ದಾರೆ. ಅಕ್ಕಪಕ್ಕಾ ಯಾರಿಲ್ಲ ಎಂಬುದನ್ನ ಖಚಿತಪಡಿಸಿಕೊಂಡ ಮೇಲೆ ವಿಡಿಯೋ ಕಾಲ್ ಮಾಡಿದ್ದಾನೆ.
ಪೊಲೀಸ್ ಡ್ರೆಸ್ ಹಾಕಿದ್ದರಿಂದ ಹಿರಿಯರು ಸಹ ಆತ ಪೊಲೀಸ್ ಎಂದು ಭಯಬಿದ್ದಿದ್ದಾರೆ. ಇನ್ನೂ ವಿಡಿಯೋ ಕಾಲ್ ಮಾಡಿಸಿದಾತ ಹಿರಿಯರ ಪತ್ನಿಯ ಪೋನ್ ಕೂಡ ಸ್ವಿಚ್ ಆಪ್ ಮಾಡಿಸಿದ್ದ. ಹೀಗೆ ವಿಡಿಯೋ ಕಾಲ್ ಸೈಬರ್ ಕ್ರೈಂನಿಂದ ಬಹಳಷ್ಟು ಮಂದಿ ಮೋಸ ಹೋಗುತ್ತಿದ್ದಾರೆ.ಇದರಲ್ಲಿ ನಿಮ್ಮನ್ನು ಸಹ ಮೋಸ ಮಾಡಲಾಗಿದೆ. ನಿಮಗೆ ಸಹಾಯ ಮಾಡುತ್ತೇವೆ. ನೀವು ಒಪ್ಪಿಲ್ಲವಾದರೆ, ಒಂದುವರೆ ವರ್ಷ ಜೈಲಿಗೆ ಹೋಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಪಾಪ ಹಿರಿಯ ದಂಪತಿಗಳು ಇವರ ಮಾತು ಕೇಳಿ ಭಯಬಿದ್ದಿದ್ದರು. ಅಷ್ಟರಲ್ಲಿ ಇನ್ನೊಬ್ಬಾತ ತಾನೊಬ್ಬ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ದಂಪತಿಗೆ ಕರೆ ಮಾಡಿ, ಇದೊಂದು 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆಯ ಪ್ರಕರಣ. ಇದರಲ್ಲಿ 200 ಮಂದಿ ಆರೋಪಿ ಇದ್ದಾರೆ. ಅದರಲ್ಲಿ ನಿಮ್ಮದೆ ಮೊದಲ ಹೆಸರು. ನಿಮ್ಮ ಅಕೌಂಟ್ನಲ್ಲಿ ಎಷ್ಟು ಹಣವಿದೆ ಅಷ್ಟು ಹಣವನ್ನು ಮೊದಲು ನಮಗೆ ವರ್ಗಾವಣೆ ಮಾಡಿ , ಹಾಗಾದರೆ ಮಾತ್ರ ಕೇಸ್ನಿಂದ ಬಿಡುತ್ತೇವೆ ಎಂದಿದ್ದಾರೆ. ಪೊಲೀಸ್ ಭಾಷೆಯ ನಕಲಿ ಧಮ್ಕಿಯನ್ನ ಕೇಳಿದ ದಂಪತಿ ಆತನ ಅಕೌಂಟ್ಗೆ ಹಣ ಹಾಕಿದ್ದಾರೆ. ಆ ಬಳಿಕ ತಾವು ಮೋಸ ಹೋಗಿದ್ದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸ್ತಿದ್ದಾರೆ.