SHIVAMOGGA | MALENADUTODAY NEWS | ಮಲೆನಾಡು ಟುಡೆ Oct 29, 2024
ಶಿವಮೊಗ್ಗ | ವಕ್ಫ್ ಬೋರ್ಡ್ನಿಂದ ರೈತರಿಗೆ ನೋಟಿಸ್ ನೀಡುತ್ತಿರುವ ವಿಚಾರಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ MLA ಚನ್ನಬಸಪ್ಪರವರು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ರಾಜ್ಯವನ್ನು ವಕ್ಫ ಬೋರ್ಡ್ ಮೂಲಕ ಮುಸ್ಲಿ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ ಅವರು, ರೈತರ ಜಮೀನು ಕಸಿದುಕೊಂಡು ವಕ್ಫ್ ಬೋರ್ಡ್ಗೆ ಸೇರಿಸುವ ಕುತಂತ್ರ ಬುದ್ದಿಯನ್ನು ಮಾಡಲಾಗುತ್ತಿದೆ. ಮುಸಲ್ಮಾನ್ ಲ್ಯಾಂಡ್ ಮಾಫೀಯಾವನ್ನು ವಕ್ಪ್ ಮೂಲಕ ಕಾಂಗ್ರೆಸ್ ಸರ್ಕಾರ ನಿರ್ವಹಿಸುತ್ತಿದೆ ಎಂದು ದೂರಿದರು.

ರೈತರಿಗೆ ವಕ್ಫ್ ಆಸ್ತಿ ಅಂತ ನೋಟಿಸ್ ನೀಡಲಾಗುತ್ತಿದೆ ಅಂದರೆ ಸರ್ಕಾರ ಏನು ಮಾಡುತ್ತಿದೆ? ಮುಖ್ಯಮಂತ್ರಿಗಳೇ ಇಡೀ ರಾಜ್ಯವನ್ನೆ ವಕ್ಪ್ಗೆ ಬರೆದುಕೊಡಿ ? ಎಂದ ಶಾಸಕರು ಕುತಂತ್ರದ ಮೂಲಕ ರಾಜ್ಯದ ರೈತರಿಗೆ ಅನ್ಯಾಯ ಮಾಡುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು.
ಶಿವಮೊಗ್ಗದಲ್ಲೂ ಈ ತರಹದ ಘಟನೆಗಳು ನಡೆದಿದೆ ಎಂದ ಅವರು, ಶಿವಪ್ಪನಾಯಕನ ವಂಶಸ್ಥರ ಸಮಾಧಿ ಜಾಗವನ್ನು ಸಹ ವಕ್ಫಗೆ ಸೇರಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಶಿವಮೊಗ್ಗದ ಈದ್ಗ ಮೈದಾನವನ್ನು ವಕ್ಫ್ ಜಾಗ ಎನ್ನುತ್ತಾರೆ, ಈ ಜಾಗ ಮಹಾನಗರ ಪಾಲಿಕೆ ಹೆಸರಿನಲ್ಲಿದೆ ಎಂದ ಶಾಸಕರು ವಕ್ಫ್ ಲ್ಯಾಂಡ್ ಮಾಫಿಯ ಪದ್ದತಿಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಸಚಿವರ ಜಮೀರ್ ಅಹಮದ್ ರವರು ತಮ್ಮ ಬಂಗಲೆ ಜಾಗವನ್ನ ವಕ್ಫ್ ಗೆ ಬರೆದುಕೊಡಲಿ ಎಂದು ಸವಾಲು ಹಾಕಿದ ಶಾಸಕರು ಈ ರಾಜ್ಯವನ್ನು ವಕ್ಫ್ ರಾಜ್ಯ ಮಾಡಲು ಹೊರಟರೆ ಬಿಜೆಪಿ ಬಿಡಲ್ಲ ಎಂದರು.
ಇದೇ ವೇಳೆ ಮಾತನಾಡಿದ ಸಾಗರದ ಮಾಜಿ ಶಾಸಕ ಹರತಾಳು ಹಾಲಪ್ಪರವರು ರಾಜ್ಯಾದ್ಯಂತ ವಕ್ಫ್ ಬೋರ್ಡ್ ವಿಚಾರ ಸುದ್ದಿ ಆಗುತ್ತಿದೆ. ರೈತರ ಜಮೀನನ್ನು ನಮ್ಮ ಜಮೀನು ಅಂತ ಹೇಳಿ ಸುಪರ್ಧಿಗೆ ತಗೊಳೊಕೆ ಜಮೀರ್ ಮುಂದಾಗಿದ್ದಾರೆ, ಸಚಿವ ಜಮೀರ್ ಅವರಿಗೆ ತಲೆ ಇಲ್ಲ ಬುಡಾ ಇಲ್ಲ. ಇವರು ರಾಜ್ಯದಲ್ಲಿ ಶಾಂತಿಕದಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು
ಪಹಣಿ ತಿದ್ದುಪಡಿಯಾಗಿದೆ ಅಂತ ಭೂಮಿ ಸ್ವಾದೀನಕ್ಕೆ ಹೋಗುವ ಮೂಲಕ ಶಾಂತಿಕದಡುವ ಕೆಲಸ ಜಮೀರ್ ಅಹಮದ್ ಮಾಡುತ್ತಿದ್ದಾರೆ.ದೇಶದಲ್ಲಿ ವಕ್ಫ್ ಕಾನೂನು ತಿದ್ದುಪಡಿ ಮಾಡಬೇಕು, ದೇಶದಲ್ಲಿ ವಕ್ಫ್ ಕಾಯ್ದೆ ಹಾಗೂ ಅರಣ್ಯ ಕಾಯ್ದೆಗಳು ಬದಲಾಗಬೇಕು ಎಂದ ಅವರು,ಸಾಗರದಲ್ಲೂ ಸಹ ವಕ್ಫ್ ಪ್ರಕರಣ ಆಗಿತ್ತು, ಗಣಪತಿ ಕರೆ ಜಾಗವನ್ನು ಒತ್ತುವರಿ ಮಾಡಿಕೊಂಡು ವಕ್ಫ್ ಜಮೀನು ಹೇಳಿಕೊಂಡು ಬಂದಿದ್ದರು ಎಂದು ಆರೋಪಿಸಿದರು.
SUMMARY | dispute over waqf board property controversy, waqf board property dispute in Shivamogga and Sagar taluks, Sagar MLA Haratalu Halappa , Shivamogga MLA S N Channabasappa said,
KEYWORDS | dispute over waqf board property controversy, waqf board property dispute in Shivamogga and Sagar taluks, Sagar MLA Haratalu Halappa , Shivamogga MLA S N Channabasappa said,