SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 30, 2024 | ಶಿವಮೊಗ್ಗಕ್ಕೆ ವಂದೇಭಾರತ್ ಟ್ರೈನ್ ಸಿಗುವ ಅವಕಾಶ ಇದೆ ಎಂದು ಈಗಾಗಲೇ ಹಲವು ಸಲ ಶಿವಮೊಗ್ಗ-ಬೈಂದೂರು ಲೋಕಸಭಾ ಸಂಸದ ಬಿ ವೈ ರಾಘವೇಂದ್ರರವರು ತಿಳಿಸಿದ್ದಾರೆ. ಇತ್ತಿಚೆಗೆ ಶಿವಮೊಗ್ಗಕ್ಕೆ ಬಂದಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಸಹ ಶಿವಮೊಗ್ಗಕ್ಕೆ ವಂದೇಭಾರತ್ ಟ್ರೈನ್ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರವರ ಜೊತೆಗೆ ಮಾತನಾಡುವುದಾಗಿ ಹೇಳಿದ್ದರು.
ಇದೀಗ ಈ ವಂದೇ ಭಾರತ್ ಟ್ರೈನ್ ಶಿವಮೊಗ್ಗ ಟು ಬೆಂಗಳೂರು ನಡುವೆ ಸಂಚರಿಸಲಿದೆ ಎಂಬ ವಿಚಾರದ ಬಗ್ಗೆ ಬಹುತೇಕ ಖಾತರಿಯಾಗುತ್ತಿದೆ. ಇದಕ್ಕೆ ಕಾರಣವಾಗಿದ್ದು ಸಂಸದ ಬಿವೈಆರ್ ಠವರ ಟ್ವೀಟ್ . ಸಚಿವ ಸೋಮಣ್ಣರವರು ಶಿವಮೊಗ್ಗ ಪ್ರವಾಸ ಕೈಗೊಂಡು ರೈಲ್ವೆ ಪ್ರಗತಿ ಪರಿಶೀಲನೆ ನಡೆಸಿದ ಬೆನ್ನಲ್ಲೆ ಅವರಿಗೆ ಧನ್ಯವಾದ ಅರ್ಪಿಸುವ ಟ್ವೀಟ್ ಮಾಡಿದ್ದಾರೆ ಬಿವೈ ರಾಘವೇಂದ್ರ. ಈ ಟ್ವೀಟ್ನಲ್ಲಿ ಅವರು ಬೆಂಗಳೂರು ಟು ಶಿವಮೊಗ್ಗ ನಡುವೆ ವಂದೇ ಭಾರತ್ ಟ್ರೈನ್ ಒದಗಿಸುವ ಬಗ್ಗೆ ಆಶ್ವಾಸನೆ ನೀಡಿರುವ ಸೋಮಣ್ಣರವರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.
ಅಲ್ಲದೆ ಈ ಅವಕಾಶದಿಂದಾಗಿ ಶಿವಮೊಗ್ಗ-ಬೆಂಗಳೂರು ನಡುವಿನ ಸಂಚಾರದ ಅವಧಿ ಕಡಿಮೆಯಾಗಲಿದೆ. ಅಷ್ಟೆ ಅಲ್ಲದೆ ಶಿವಮೊಗ್ಗದ ಪ್ರವಾಸೋಧ್ಯಮಕ್ಕೆ ಇನ್ನಷ್ಟು ನೆರವಾಗಲಿದೆ. ಹೊಸ ಹೂಡಿಕೆದಾರರನ್ನ ಸೆಳೆಯಲಿದೆ. ಒಟ್ಟಾರೆ ಶಿವಮೊಗ್ಗದ ಸಮಗ್ರ ಹಾಗೂ ಶೀಘ್ರ ಅಭಿವೃದ್ಧಿಗೆ ವಂದೇಭಾರತ್ ಟ್ರೈನ್ ಪೂರಕವಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.
ಸಂಸದ BY Ragavendra ರವರ ಟ್ವೀಟ್ನಿಂದ ವಂದೇ ಭಾರತ್ ಟ್ರೈನ್ ಶಿವಮೊಗ್ಗ ಟು ಬೆಂಗಳೂರು ನಡುವೆ ಸಂಚರಿಸುವುದು ಬಹುತೇಕ ನಿಕ್ಕಿಯೇ? ಎಂಬ ವಿಶ್ವಾಸ ಮೂಡಿಸುತ್ತಿದೆ
Grateful to the Hon’ble MoS Railways Shri @VSOMANNA_BJP for promising a Vande Bharat train from Bengaluru to Shivamogga!
This will significantly cut travel time, boost tourism, and attract new investments, setting Shivamogga on a path to rapid growth.
Thank you, Hon’ble PM Shri… pic.twitter.com/nzCrRUVJ1s
— B Y Raghavendra (@BYRBJP) September 27, 2024