SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 17, 2024
ಶಿವಮೊಗ್ಗದಲ್ಲಿ ನಗರಪಾಲಿಕೆಯ ಕೆಲ ಅಧಿಕಾರಿಗಳು ಈ ಸ್ವತ್ತನ್ನು ಮಾಡಿಸಿಕೊಡಲು ಲಕ್ಷ ಲಕ್ಷ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಮಾಜಿ ಡಿ ಸಿ ಎಂ ಈಶ್ವರಪ್ಪ ಗಂಭೀರ ಆರೋಪ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇತ್ತೀಚೆಗೆ ಪಾಲಿಕೆಯ ಸ್ಥಿತಿ ಬಹಳ ಹದಗೆಟ್ಟಿದೆ. ಹಿಂದೆಲ್ಲಾ ಇ ಸ್ವತ್ತು ಮಾಡಿಸಲು ಸಾವಿರಕ್ಕೆ ಬೇಡಿಕೆ ಇಡುತ್ತಿದ್ದರು ಆದರೆ ಇತ್ತೀಚೆಗೆ ಕೆಲ ಅಧಿಕಾರಿಗಳು ಲಕ್ಷ ರೂಪಾಯಿವರೆಗೂ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದರು. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಪಾಲಿಕೆಗೆ ಮುತ್ತಿಗೆ ಹಾಕುವ ಸಂದರ್ಭಃ ಬರುತ್ತದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ರಾಜ್ಯ ಸರ್ಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಿಲ್ಲ | ಕೆ ಎಸ್ ಈಶ್ವರಪ್ಪ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಾಗುತ್ತಿಲ್ಲ.ಶಿವಮೊಗ್ಗದಲ್ಲಿ ರಸ್ತೆ ಮೇಲೆ ಗುಂಡಿ ಇದೆಯೋ ಅಥವಾ ಗುಂಡಿಯ ಮೇಲೆ ರಸ್ತೆದಿಯೋ ಎನ್ನುವುದು ಸಹ ಗೊತ್ತಾಗುತ್ತಿಲ್ಲ ಎಂದು ರಾಜ್ಯಸರ್ಕಾರದ ಅಭಿವೃದ್ದಿ ಬಗ್ಗೆ ಮಾಜಿ ಡಿಸಿಎಂ ಈಶ್ವರಪ್ಪ ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಏನು ಅಭಿವೃದ್ಧಿ ಆಗುತ್ತಿಲ್ಲ. ವಿವಿಧ ಇಲಾಖೆಗಳ ಅಭಿವೃದ್ದಿಗೆ ನೀಡಬೇಕಾಗಿರುವ ಎಲ್ಲಾ ಹಣವನ್ನು ರಾಜ್ಯ ಸರ್ಕಾರ ಖರ್ಚು ಮಾಡಿಬಿಟ್ಟಿದೆ. ಇದರ ನಡುವೆ ಸಾವಿರಾರು ಕೋಟಿ ಹಣವನ್ನು ಅಭಿವೃದ್ಧಿಗೆ ಕೊಟ್ಟಿದ್ದೀವಿ ಅಂತ ಅಡ್ವಟೈಸ್ಮೆಂಟ್ ಹಾಕ್ತಾರೆ.ರಾಜ್ಯ ಸರ್ಕಾರದ ಮಂತ್ರಿಗಳು ಈ ರಸ್ತೆಯಲ್ಲಿ ಓಡಾಡಿದರೆ ಗೊತ್ತಾಗುತ್ತೆ ರಸ್ತೆ ಹೇಗಿದೆ ಅಂತ ಎಂದು ಸರ್ಕಾರವನ್ನು ಕುಟುಕಿದರು.
SUMMARY | Former Deputy CM Eshwarappa alleged that some officials of the City Council in Shivamogga were demanding a bribe of lakhs of rupees to get the property done.
KEYWORDS | Former Deputy CM Eshwarappa, e swathu, property,