SHIVAMOGGA | MALENADUTODAY NEWS | ಮಲೆನಾಡು ಟುಡೆ Oct 16, 2024
ಶಿವಮೊಗ್ಗ | ನಗರದಲ್ಲಿ ಸಿಟಿ ಬಸ್ವೊಂದು ಅಪಘಾತಕ್ಕೀಡಾಗಿದೆ. ಬೆಳ್ಳಂಬೆಳಗ್ಗೆ ಶಿವಮೊಗ್ಗ ನಗರದ ಬೊಮ್ಮನಕಟ್ಟೆ ರೈಲ್ವೆ ಗೇಟ್ ಪಕ್ಕದ ಮುಖ್ಯ ರಸ್ತೆಯಲ್ಲಿ ವೀರಭದ್ರೇಶ್ವರ ಹೆಸರಿನ ಬಸ್ ಅಡ್ಡಾದಿಡ್ಡಿ ಚಲಿಸಿ ಚರಂಡಿಗೆ ಬಿದ್ದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಬಸ್ನಲ್ಲಿ 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬೊಮ್ಮನಕಟ್ಟೆಯಿಂದ ಗೋಪಾಳಕ್ಕೆ ಹೋಗುವ ಬಸ್ ಇದಾಗಿದ್ದು, ಇಲ್ಲಿನ ರೈಲ್ವೆ ಮೇನ್ ಗೇಟ್ನಲ್ಲಿ ಬರುತ್ತಿದ್ದ ಬಸ್ ರಸ್ತೆಯ ಹಂಪ್ ಹಾರಿಸಿದ್ದಾನೆ. ಆ ಬಳಿಕ ಚಾಲಕನಿಗೆ ಬಸ್ನ ನಿಯಂತ್ರಣ ತಪ್ಪಿದೆ. ಪರಿಣಾಮ ಲೈಟ್ ಕಂಬವೊಂದಕ್ಕೆ ಡಿಕ್ಕಿಯಾದ ಬಸ್ ಆ ಬಳಿಕ ಪೆನ್ಸಿಂಗ್ ಮುರಿದು ಅಲ್ಲಿಯೆ ಇದ್ದ ಚರಂಡಿಗೆ ಉರುಳಿದೆ.
ಘಟನೆಯ ಬೆನ್ನಲ್ಲೆ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಗಾಯಾಗಳುಗಳನ್ನ ಮೆಗ್ಗಾನ್ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಿದ್ದಾರೆ. ಸ್ಥಳೀಯರ ನೆರವು ಸಿಗದಿದ್ದರೇ ಇನ್ನಷ್ಟು ಅಪಾಯವಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಶಿವಮೊಗ್ಗ ಸಿಟಿಯಲ್ಲಿ ಕೆಲವು ಸಿಟಿಬಸ್ಗಳು ಜನರ ಜೀವ ತೆಗೆಯುವ ರೀತಿಯಲ್ಲಿ ಸಂಚರಿಸುತ್ತವೆ. ತಮ್ಮ ದೈನಿಂದಿನ ದುಡಿಮೆಗಾಗಿ ಜನ ಓಡಾಡುವ ಜಾಗದಲ್ಲಿ ಅತಿವೇಗದಲ್ಲಿ ಸಂಚರಿಸುತ್ತಿವೆ. ಇದರ ಬಗ್ಗೆ ದೂರು ಹೇಳಿದರು ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಗಮನ ಹರಿಸಿಲ್ಲ.

ಇನ್ನೂ ಘಟನೆಯಲ್ಲಿ ಗಾಯಗೊಂಡ ಮಹಿಳೆಯೊಬ್ಬರ ಕುಟುಂಬಸ್ಥರು, ಈ ರೀತಿ ಸಿಟಿಬಸ್ಗಳ ಚಾಲನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಬಸ್ಗಳ ಓಡಾಟಕ್ಕೆ ನಿಯಂತ್ರಣ ತನ್ನಿ ಎಂದು ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಬಸ್ ಚಾಲಕನ ಪ್ರಕಾರ, ರೈಲ್ವೆ ಮೇನ್ ಗೇಟ್ನಲ್ಲಿ ಬ್ಲೇಡ್ ಕಟ್ ಆದ್ದರಿಂದ ವಾಹನ ಕಂಟ್ರೋಲ್ಗೆ ಸಿಗಲಿಲ್ಲ. ಸ್ಟೇರಿಂಗ್ ಎಳೆದರ ನಡುವೆಯು ಬಸ್ ಪಲ್ಟಿಯಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
SUMMARY | A city bus met with an accident in the city. The bus, named Veerabhadreswara, fell into a drain on the main road next to Bommanakatte railway gate in Shivamogga city early this morning. More than six people, including two children, were injured in the incident.
KEYWORDS | A city bus met with an accident, Veerabhadreswara bus fell into a drain, Bommanakatte railway gate in Shivamogga,