SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 6, 2024 ನಟ ದರ್ಶನ್ಗೆ ಜಾಮೀನು ನೀಡುವ ಸಂಬಂಧ ಹಿರಿಯ ವಕೀಲ ಸಿವಿ ನಾಗೇಶ್ ಕೋರ್ಟ್ನಲ್ಲಿ ವಾದ ಮಂಡಿಸುತ್ತಿದ್ದಾರೆ.
ಈ ನಡುವೆ ನೆರೆ ರಾಜ್ಯದ ಅಂದರೆ ತೆಲುಗಿನ ವಿವಿಧ ಮಾದ್ಯಮಗಳು ಒಂದು ವರದಿ ಮಾಡಿದ್ದು, ಆ ವರದಿಯ ಪ್ರಕಾರವಷ್ಟೆ ನೋಡುವುದಾದರೆ,
ದರ್ಶನ್ಗೆ ಬಳ್ಳಾರಿ ಜೈಲಿನಲ್ಲಿ ನಿದ್ರೆ ಬರುತ್ತಿಲ್ಲವಂತೆ. ಇದಕ್ಕೆ ಕಾರಣ ರೇಣುಕಾಸ್ವಾಮಿಯ ಆತ್ಮ ಕಾರಣವೆಂದು ವರದಿ ಮಾಡಿವೆ.

ಹೌದು ತೆಲುಗಿನ ಮಾಧ್ಯಮಗಳು ಇಂತಹದ್ದೊಂದು ವರದಿಯನ್ನ ಮಾಡುತ್ತಿವೆ. ನಿನ್ನೆಯಿಂದ ಪ್ರಸಾರವಾಗುತ್ತಿರುವ ವರದಿಗಳನ್ನ ಗಮನಿಸಿದರೆ, ನಟ ದರ್ಶನ್ಗೆ ಕನಸಿನಲ್ಲಿ ರೇಣುಕಾಸ್ವಾಮಿಯ ಚಿತ್ರಗಳು ಕಾಣಿಸುತ್ತಿದ್ದು, ಅದೇ ಕಾರಣಕ್ಕೆ ಅವರಿಗೆ ನಿದ್ರೆ ಬರುತ್ತಿಲ್ಲವಂತೆ
ಹೀಗಂತ ಅವರು ಜೈಲಿನ ಅಧಿಕಾರಿಗಳಿಗೂ ತಿಳಿಸಿದ್ದಾರೆ ಎಂದು ತೆಲುಗಿನ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ. ರಾಜ್ಯದ ಮಾಧ್ಯಮಗಳು ಈ ಬಗ್ಗೆ ಯಾವುದೇ ಸ್ಪಷ್ಟ ವರದಿ ಮಾಡಿಲ್ಲ. ಆದರೆ ತೆಲುಗು ರಾಜ್ಯಗಳಲ್ಲಿ ಈ ಬಗ್ಗೆ ಮಾಧ್ಯಮ ಚರ್ಚೆಯು ಸಹ ಆರಂಭವಾಗಿದೆ.