SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 3, 2024 | ತುಂಗಾ ನದಿಗೆ ತ್ಯಾಜ್ಯಗಳು ಸೇರುತ್ತಿರುವ ಬಗ್ಗೆ ಹಾಗೂ ತುಂಗಾ ನದಿಯ ನೀರು ಕಲುಷಿತವಾಗುತ್ತಿರುವ ಈ ಬಗ್ಗೆ ಈಗಾಗಲೇ ಹಲವು ವರದಿಗಳು ಸರ್ಕಾರವನ್ನ ಎಚ್ಚರಿಸಿದ್ದವು. ಇದರ ಬೆನ್ನಲ್ಲೆ ಇದೀಗ ತುಂಗಾನದಿಯ ಜೀರ್ಣೋದ್ದಾರ ಹಾಗೂ ಅದನ್ನು ಮತ್ತೆ ಜೀವಂತಗೊಳಿಸುವ ಕುರಿತಂತೆ ಅಧ್ಯಯನಕ್ಕೆ ಸರ್ಕಾರ 15 ಜನರ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.
ಜಲಸಂಪನ್ಮೂಲ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ಇವರು ದಿನಾಂಕ: ಆಗಸ್ಟ್ 19 ರ ಪತ್ರದಲ್ಲಿ ನಟ ಅನಿರುದ್ಧ ಜಟ್ಕರ್ ಹಾಗೂ ಸಾಮಾಜಿಕ ಕಾರ್ಯಕರ್ತರು ಇವರು ತಮ್ಮ ಪತ್ರದಲ್ಲಿ ತುಂಗಾ ನದಿಯ ಜೀರ್ಣೋದ್ಧಾರಕ್ಕಾಗಿ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದರು. ಈ ಕುರಿತು ಮುಖ್ಯಮಂತ್ರಿಯವರೂ ಸಹ ದೂರವಾಣಿ ಮುಖಾಂತರ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಕ್ರಮವಹಿಸುವಂತೆ ಸೂಚಿಸಿರುವುದ್ದರು.
ಜಿಲ್ಲಾಧಿಕಾರಿಗಳು, ಶಿವಮೊಗ್ಗ ಇವರ ಅಧ್ಯಕ್ಷತೆಯಲ್ಲಿ ಜುಲೈ ರಂದು ಜರುಗಿದ ಸಭೆಯಲ್ಲಿ ತುಂಗಾ ನದಿ ಪಾತ್ರ ಸ್ವಚ್ಛತೆ ಕುರಿತಂತೆ ಭಾಗವಹಿಸಿ ಚರ್ಚಿಸಲಾಗಿದ್ದು, ಸದರಿ ಸಭೆಯಲ್ಲಿ ಚರ್ಚಿಸಿದಂತೆ ಕರ್ನಾಟಕ ಸರ್ಕಾರವು ಕಾವೇರಿ ನದಿಗೆ ಕಲುಷಿತ ನೀರು ಸೇರ್ಪಡೆ ಕುರಿತಂತೆ ಪರಿಹಾರ ಸೂಚಿಸಲು ನಾನಾ ಇಲಾಖೆಗಳ ತಜ್ಞರುಗಳನ್ನು ಒಳಗೊಂಡಂತೆ ಸಮಿತಿ ರಚಿಸಿದ್ದು, ಇದೇ ಮಾದರಿಯಲ್ಲಿ ತುಂಗಾ ನದಿ ಕಲುಷಿತಗೊಳ್ಳುತ್ತಿರುವ ಕುರಿತ ಅಧ್ಯಯನ ನಡೆಸಲು ಈ ಕೆಳಕಂಡ ಇಲಾಖೆಗಳನ್ನು ಒಳಗೊಂಡಂತೆ ಸಮಿತಿ ರಚಿಸಬಹುದಾಗಿದೆ ಎಂದು ಅಭಿಪ್ರಾಯ ಪಡಲಾಗಿತ್ತು.
ಇದೀಗ ತುಂಗಾ ನದಿಯ ಕಲುಷಿತಗೊಳ್ಳುತ್ತಿರುವ ಕುರಿತು ಸಮಗ್ರವಾಗಿ ಅಧ್ಯಯನದ ಅವಶ್ಯವಿರುವ ಹಿನ್ನಲೆಯಲ್ಲಿ ಈ ಕೆಳಕಂಡ ಇಲಾಖೆಗಳನ್ನೊಳಗೊಂಡಂತೆ ಸಮಿತಿ ರಚಿಸಬಹುದಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ – ನಿಯಮಿತ ಇವರು ವರದಿ ಮಾಡಿದ್ದರ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ.

ಸಮಿತಿಯಲ್ಲಿ ಯಾರೆಲ್ಲಾ ಇರಲಿದ್ದಾರೆ
-
ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಾಲಿನ್ಯ | ನಿಯಂತ್ರಣ ಮಂಡಳಿ (ಅಧ್ಯಕ್ಷರು)
-
ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಶಿವಮೊಗ್ಗ (ಸದಸ್ಯರು)
-
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಶಿವಮೊಗ್ಗ.
-
ಆಯುಕ್ತರು, ಶಿವಮೊಗ್ಗ ಮಹಾನಗರಪಾಲಿಕೆ.
-
ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್ ಸಿಟಿ, ಶಿವಮೊಗ್ಗ.
-
ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ | ಮಂಡಳಿ, ಶಿವಮೊಗ್ಗ.
-
ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ, ಶಿವಮೊಗ್ಗ.
-
ನಿರ್ದೇಶಕರು, ವಾಲ್ಮೀ, ಧಾರವಾಡ.
-
ನಿಬಂಧಕರು, ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ, ಬೆಂಗಳೂರು.
-
ಮುಖ್ಯ ಇಂಜಿನಿಯರ್/ ಕಾರ್ಯಪಾಲಕ ಇಂಜಿನಿಯರ್ ತುಂಗಾ ಮೇಲ್ದಂಡೆ ಯೋಜನೆ, ಶಿವಮೊಗ್ಗ.
-
ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಶಿವಮೊಗ್ಗ.
-
ಡಾ: ಆದಿತ್ಯಗುಪ್ತ,
-
ಐಐಎಂ ಬೆಂಗಳೂರಿನ ಚೀಫ್ ಆಪರೇಟಿಂಗ್ ಆಫಿಸರ್,
-
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಹೆಚ್.ಎನ್.ಚಾಣಕ್ಯ
-
ಐಸೆಕ್ ನ ಡಾ: ಕೃಷ್ಣರಾಜ್ ಎಲ್ಲರೂ ಸದಸ್ಯರು ಎಂದು ಆದೇಶದಲ್ಲಿ ತಿಳಿಸಲಾಗಿದೆ