SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 30, 2025
ಶಿವಮೊಗ್ಗ | ನಕ್ಸಲ್ ಶರಣಾಗತಿಯಲ್ಲಿ ಪ್ರಮುಖ ಪಾತ್ರವಹಿಸಿದ ವಕೀಲ ಕೆಪಿ ಶ್ರೀಪಾಲ್ ಅವರನ್ನು ಜನವರಿ 31ರಂದು ನಗರದ ಪತ್ರಿಕಾಭವನದಲ್ಲಿ ಸಂಜೆ 5:30ಕ್ಕೆ ಸನ್ಮಾನಿಸಲಾಗುವುದು ಎಂದು ಡಿಎಸ್ಎಸ್ ಮುಖಂಡ ಎಂ.ಗುರುಮೂರ್ತಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಕ್ಸಲರ ನಿಯಂತ್ರಣಕ್ಕಾಗಿ ಸರ್ಕಾರವು ನಕ್ಸಲ್ ಶರಣಾಗತಿ ಹಾಗು ಪುನರ್ವಸತಿ ಎಂಬ ಸಮಿತಿಯನ್ನು ಜಾರಿಗೊಳಿಸಿತ್ತು. ಆ ಸಮಿತಿ ಮೂರು ಜನ ಸದಸ್ಯರನ್ನು ಒಳಗೊಂಡಿದ್ದು ಅದರಲ್ಲಿ ಕೆ ಪಿ ಶ್ರೀ ಪಾಲ್ ಕೂಡಾ ಒಬ್ಬರು. ಶಿವಮೊಗ್ಗದಲ್ಲಿ ಶಾಂತಿ- ಸೌಹಾರ್ದ ಹಾಗೂ ಸಂವಿಧಾನಾತ್ಮಕ ಆಶಯಗಳ ಸಮಾಜ ನಿರ್ಮಾಣ ಮಾಡಲು ನಗರದಲ್ಲಿ ಆಯೋಜನೆಗೊಂಡ ಶಾಂತಿ ನಡಿಗೆ, ಸೌಹಾರ್ದವೇ ಹಬ್ಬ ಎಂಬ ಇತ್ಯಾದಿ ಕಾರ್ಯಕ್ರಮಗಳಲ್ಲಿ ಶ್ರೀಪಾಲ್ ಸದಾ ಮುಂಚೂಣಿಯಲ್ಲಿ ಇದ್ದರು. ಈಗ ನಕ್ಸಲರನ್ನು ಸಂಧಿಸಿ, ಚರ್ಚಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತ ಕೆಲಸವನ್ನು ಶ್ರೀಪಾಲ್ ಮಾಡಿದ್ದಾರೆ. ಅವರ ತಂಡ ಮತ್ತು ಅವರು ಮಾಡಿದ ಅದ್ಭುತವಾದ, ಸಮಾಜಮುಖಿ, ಮಾನವೀಯ ಕೆಲಸಕ್ಕೆ ಗೌರವಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಈ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಶರತ್ ಅನಂತಮೂರ್ತಿ ಅವರು ಸಂವಿಧಾನ ಬದ್ಧ ಬದುಕು ಮತ್ತು ಚಳವಳಿ ಕುರಿತು ಸಂವೇದನಾ ಶೀಲ ಪ್ರಶ್ನೆಗಳ ಮೂಲಕ ಸಂವಾದ ನಡೆಸಲಿದ್ದಾರೆ. ಶ್ರೀಪಾಲ್ ಅವರು ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಕ್ರಿಯೆ ಹೇಗಿತ್ತು ಎಂಬ ಸಾದಕ ಭಾದಕಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದರು.
SUMMARY | On January 31, a programme will be organised by The Souhardave Habba Balaga to felicitate Sripal for his work in the Naxal Surrender and Rehabilitation Committee
KEYWORDS | Souhardave Habba Balaga, Naxal kp shreepal, shivamogga,