SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 20, 2025
ಶಿವಮೊಗ್ಗ | ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮ ಇದೇ ಜನವರಿ 22 ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ಶರತ್ ಅನಂತ್ ಮೂರ್ತಿ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಂದಿನಂತೆ ಈ ಬಾರಿಯೂ ಸಹ ಕುವೆಂಪು ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಆಗಲಿಸಲಿದ್ದಾರೆ. ಹಾಗೆಯೇ ಹೈದರಾಬಾದ್ನ ವಿಶಾಂತ ಕುಲಪತಿಗಳಾದ ರಾಮ್ ರಾಮಸ್ವಾಮಿ ಘಟಿಕೋತ್ಸವದ ಕುರಿತು ಭಾಷಣ ಮಾಡುವರು ಎಂದು ಹೇಳಿದರು.

ಪದಕಗಳು ಹಾಗೂ ನಗದು ಬಹುಮಾನಗಳ ಬಗ್ಗೆ ಮಾಹಿತಿ ನೀಡಿದ ಅವರು ಈ ಬಾರಿ 204 ಅಭ್ಯರ್ಥಿಗಳು ಪಿಹೆಚ್ಡಿ ಪಡೆಯುತ್ತಿದ್ದು, ಅದರಲ್ಲಿ 115 ಪುರುಷರು ಹಾಗೂ 89 ಮಹಿಳೆಯರು ಒಳಗೊಂಡಿದ್ದಾರೆ. ಹಾಗೆಯೇ ಈ ಘಟಿಕೋತ್ಸವದಲ್ಲಿ 146 ಸ್ವರ್ಣಪದಕಗಳಿದ್ದು, ಅವುಗಳನ್ನು 13 ಪುರುಷರು 71 ಮಹಿಳೆಯರು ಸೇರಿ ಒಟ್ಟು 84 ವಿದ್ಯಾರ್ಥಿಗಳು ಹೊಚಿಕೊಂಡಿದ್ದಾರೆ ಎಂದರು. ಹಾಗೂ ಒಟ್ಟು 17 ನಗದು ಬಹುಮಾನಗಳಿದ್ದು, 13 ಮಹಿಳೆಯರು 1 ಪುರುಷ ಸೇರಿ ಒಟ್ಟು 14 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ ಎಂದರು
ಅತಿ ಹೆಚ್ಚು ಸ್ವರ್ಣ ಪದಕವನ್ನು ಪಡೆದವರು
ವಸಂತ ಕುಮಾರ್ ಬಿ. ಜೆ., ಎಂ.ಎ (ಕನ್ನಡ), ಕನ್ನಡ ಭಾರತಿ, ಜ್ಞಾನಸಹ್ಯಾದ್ರಿ, ಶಂಕರಘಟ್ಟ ಇವರು ಅತೀ ಹೆಚ್ಚು 10 ಸ್ವರ್ಣ ಪದಕ ಹಾಗೂ 01 ನಗದು ಬಹುಮಾನ ಪಡೆದಿರುತ್ತಾರೆ. ಸಾನಿಯಾ ಫಿರ್ಧೋಸ್ ಎಂಎಸ್ಸಿ ಪರಿಸರ ವಿಜ್ಞಾನ ಅಧ್ಯಯನ ವಿಭಾಗ ಇವರು 06 ಸ್ವರ್ಣ ಪದಕವನ್ನು ಪಡೆದಿರುತ್ತಾರೆ. ರಕ್ಷಿತಾ ಎಸ್. ಎಸ್., ಎಂ.ಎ.(ಸಮಾಜಶಾಸ್ತ್ರ), ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಜ್ಞಾನಸಹ್ಯಾದ್ರಿ ಶಂಕರಘಟ್ಟ, ರಕ್ಷಿತ್ ಎಸ್ ಎಂ.ಬಿ.ಎ., ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗ, ಜ್ಞಾನಸಹ್ಯಾದ್ರಿ ಶಂಕರಘಟ್ಟ, ಶುಭಶ್ರೀ ಎಸ್., ಎಂ.ಎಸ್ಸಿ.(ಜೈವಿಕ ತಂತ್ರಜ್ಞಾನ), ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗ, ಜ್ಞಾನಸಹ್ಯಾದ್ರಿ ಶಂಕರಘಟ್ಟ, ಹರ್ಷಿತಾ ಜಿ., ಬಿ.ಕಾಂ., ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಶಿವಮೊಗ್ಗ. ಇವರುಗಳು ತಲಾ 5 ಪದಕಗಳನ್ನು ಪಡೆದಿರುತ್ತಾರೆ.
ವಂದನಾ ಎ. ಶೆಟ್ಟಿ, ಎಂ.ಎಸ್ಸಿ.(ಗಣಿತಶಾಸ್ತ್ರ), ಗಣಿತಶಾಸ್ತ್ರ ಅಧ್ಯಯನ ವಿಭಾಗ, ಜ್ಞಾನಸಹ್ಯಾದ್ರಿ, ಶಂಕರಘಟ್ಟ ಇವರು ನಾಲ್ಕು ಸ್ವರ್ಣ ಪದಕ ಹಾಗೂ ಎರಡು ನಗದು ಬಹುಮಾನಗಳನ್ನು ಪಡೆದಿರುತ್ತಾರೆ.ಸಂಗೀತಾ ಬಿ.ಕೆ. ಎಂ ಎ ಇತಿಹಾಸ ಅರ್ಪಿತಾ ಆರ್.ಎಂ.ಎಸ್ಸಿ.(ರಸಾಯನಶಾಸ್ತ್ರ) ಧನುರ್ವಿ ಡಿ. ಎಂ., ಎಂ.ಎಸ್ಸಿ.(ಸಸ್ಯಶಾಸ್ತ್ರ) ಇವರು ತಲಾ 4 ಸ್ವರ್ಣ ಪದಕಗಳನ್ನು ಪಡೆದಿರುತ್ತಾರೆ.
ಗುಲ್ನಾಜ್, ಎಂ.ಎ.(ಉರ್ದು), ಇವರು 3 ಸ್ವರ್ಣ ಪದಕ ಹಾಗೂ 01 ನಗದು ಬಹುಮಾನ ಪಡೆದಿರುತ್ತಾರೆ.ಯೋಷಿತಾ ಎಸ್. ಸೊನಾಲೆ, ಎಂ.ಎ.(ಇಂಗ್ಲೀಷ್) ವನಿತಾ ಬಿ. ಆರ್., ಎಂ.ಎ.(ರಾಜ್ಯಶಾಸ್ತ್ರ) ಸಿಂಧು ಕೆ.ಟಿ. ಎಂ.ಎ. (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ), ಪೂರ್ಣ ಪ್ರಜ್ಞಾ ಬಿ. ಆರ್. ಎಂ ಕಾಂ ರಂಜಿತಾ ಎ. ಆರ್. ಎಂ ಎಸ್ಸಿ, ಧನ್ಯಾ ಕೆ. ವೈ. ಎಂ ಎಸ್ಸಿ, ಹಾಗೂ ಅಶ್ವಥ ಬಿ. ಬೈತಾನಾಲ್ ಎಂ ಸಿ ಎ ಎಂದು ಮಾಹಿತಿ ನೀಡಿದರುಇವರು ತಲಾ 05 ಸ್ವರ್ಣಪದಕಗಳನ್ನು ಪಡೆದಿರುತ್ತಾರೆ ಎಂದು ಮಾಹಿತಿ ನೀಡಿದರು.
SUMMARY | The convocation ceremony of Kuvempu University will be held on January 22 at the university premises
KEYWORDS | Kuvempu University, university premises, January 22,