SHIVAMOGGA| MALENADUTODAY NEWS | ಮಲೆನಾಡು ಟುಡೆ Apr 8, 2025

ಸಾಗರ ಮೆಸ್ಕಾಂ ವಿಭಾಗ ಇವತ್ತು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕುನಿ ಆಯ್ದ ಭಾಗಗಳಲ್ಲಿ ಕರೆಂಟ್ ಇರಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲೆಲ್ಲಿ ಕರೆಂಟ್ ಇರಲ್ಲ
ಇವತ್ತು ಅಂದರೆ, 08.04.2025 ರ ಮಂಗಳವಾರ ಸಾಗರ ನಗರ ಉಪ ವಿಭಾಗದ ಘಟಕ-1 ಶಾಖೆಯ ವ್ಯಾಪ್ತಿಯಲ್ಲಿ ಬರುವ ಎಫ್-7 ಮಂಗಳಬೀಸು 11 ಕೆ.ವಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕೆಳಕಂಡ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಕರೆಂಟ್ ಇರಲ್ಲ ಎಂದು ಮೆಸ್ಕಾಂ ತಿಳಿಸಿದೆ.

ಬಸವನಹೊಳೆ, ಜಂಬಗಾರು, ಶಿವಮೊಗ್ಗ ರಸ್ತೆ, ಹೆಚ್.ಕೆ.ಹೆಚ್ ಲೇಔಟ್ ತ್ಯಾಗರ್ತಿ ಕ್ರಾಸ್, ಜಂಬಗಾರ್ ಮಹಿಳಾ ಹಾಸ್ಟೆಲ್ ಬಳಿ ಮತ್ತು ಜಂಬಗಾರು ಆಶ್ರಯ ಲೇಔಟ್ ಹತ್ತಿರದ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ